ಗುರುವಾರ, ಜುಲೈ 13, 2017

ಓಂಕಾರಮಯ

ಓಂಕಾರ ಒಂದು ಬೀಜಾಕ್ಷರ. ಈ ಬೀಜಾಕ್ಷರವನ್ನು ಬಿಡಿಸಿದರೆ ಅದು ಸಮಸ್ತ ಭಾರತೀಯ ತತ್ತ್ವ ಶಾಸ್ತ್ರವನ್ನು ತನ್ನ ಗರ್ಭದಲ್ಲಿ ಧರಿಸಿದೆ ಎನ್ನುವುದು ನಮಗೆ ತಿಳಿಯುತ್ತದೆ. ವೇದದ ಸಾರ 'ಓಂಕಾರ'-ಅದೇ ಪ್ರಣವಃ.ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ. ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಗಳಿದ್ದರೂ ಕೂಡಾ, ಮೂಲತಃ ವೇದದಲ್ಲಿ ಪ್ರಮುಖವಾದ ಮೂರು ವಿಭಾಗವಿದೆ. ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ) ಮತ್ತು ಗಾನರೂಪ(ಸಾಮವೇದ). ಈ ಮೂರು ವೇದಗಳ, ಮೂರು ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ. “ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ ನೆಲೆಸಿದ್ದೇನೆ” ಎಂದು ಗೀತೆಯಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ(ಗೀತಾ-೭-೦೮).

     ಪ್ರಾಚೀನರು ಮೂರು ವೇದಗಳನ್ನು ಭಟ್ಟಿ ಇಳಿಸಿ, ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು. ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ, ಮೂರು ಪಾದಗಳ ಗಾಯತ್ತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್) ನಿರ್ಮಾಣವಾಯಿತು. ಇಲ್ಲಿ ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ. ಇದಕ್ಕಾಗಿ ಗಾಯತ್ತ್ರಿ ಮಂತ್ರವನ್ನು ‘ವೇದಮಾತಾ’ ಎನ್ನುತ್ತಾರೆ. ಈ ಗಾಯತ್ತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ: “ಭೂಃ ಭುವಃ ಸ್ವಃ”. ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |..." ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ಮ’ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪವಾದ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ
      ಧ್ಯಾನ ಮಾಡುವಾಗ ಓಂಕಾರ ಉಚ್ಛಾರಣೆ ಮಾಡಲು ಹೇಳುತ್ತಾರೆ. ಯೋಗ ಅಭ್ಯಾಸದಲ್ಲೂ ಓಂಕಾರ ಹೇಳಲಾಗುವುದು. ಓಂಕಾರದಿಂದ ಮನಸ್ಸು ಶುದ್ಧವಾಗುತ್ತದೆ ಹಾಗೂ ನೆಮ್ಮದಿಯೂ ಸಿಗುತ್ತದೆ.ಓಂಕಾರವನ್ನು ಹೇಳುತ್ತಾ ಮಂತ್ರ ಹೇಳುವುದು, ಧ್ಯಾನ ಮಾಡುವುದು ಮಾಡಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.
> 1. ಓಂಕಾರ ಮಾಡಿದರೆ ಸ್ವಚಿಂತನೆ ಬೆಳೆಯುತ್ತದೆ ಹಾಗೂ ಏಕಾಗ್ರತೆ ಅಧಿಕವಾಗುವುದು.
> 2. ಓಂಕಾರ ಮಾಡಿದರೆ ಮನಸ್ಸಿನ ಒತ್ತಡ ಕಡಿಮೆ ಮಾಡಿ ವಿಶ್ರಾಂತಿ ಅನುಭವವನ್ನು ನೀಡುತ್ತದೆ.
> 3. ದೀರ್ಘವಾಗಿ ಓಂಕಾರ ಮಾಡಿದರೆ ಗಾಳಿಯನ್ನು ಅಧಿಕ ಎಳೆದುಕೊಳ್ಳುವುದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆ ಆಗುವುದು. ಇದರಿಂದ ದೇಹದ ಹಾಗೂ ಮನಸ್ಸಿನ ಆರೋಗ್ಯ ಹೆಚ್ಚಾಗುವುದು.
> 4. ಓಂಕಾರದಿಂದ ಅಧಿಕ ರಕ್ತದೊತ್ತಡ ಕೂಡ ಕಡಿಮೆಯಾಗುವುದು ಹಾಗೂ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯಲು ಸಹಕಾರಿಯಾಗುವುದು.
> 5. ಓಂಕಾರವನ್ನು ದೀರ್ಘವಾಗಿ ಎಳೆದು ಹೇಳುವಾಗ ಶರೀರದಲ್ಲಿ ಕಂಪನ ಕಂಡು ಬರುತ್ತದೆ. ಈ ಕಂಪನವು ಬೆನ್ನಿನ ಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
> 6. ಓಂಕಾರವು ಋಣಾತ್ಮಕ ಚಿಂತನೆಯನ್ನು ಬರದಂತೆ ತಡೆದು ನಮ್ಮಲ್ಲಿ ಒಂದು ಧನಾತ್ಮಕವಾದ ಯೋಚನೆ ಮತ್ತು ಉತ್ಸಾಹವನ್ನು ತುಂಬುತ್ತದೆ. ಓಂ.-
    ಓಂ ....ಓಂ.. ..ಭಗವಂತನ ಓಂಕಾರ ಸ್ವರೂಪದ ಈ ಆದಿ ಮಂತ್ರದ ಪೂರ್ಣ ಮಹತ್ವದ ಅರಿವಾದದ್ದು ಇತ್ತೀಚೆಗೆ. ಧ್ಯಾನ ಯೋಗದಲ್ಲಿ ಅತ್ಯಂತ ಮಹತ್ವವಿರುವ ಈ ಮಂತ್ರ ಹಲವು ರೀತಿಯಲ್ಲಿ ಉಚ್ಚರಿಸಲ್ಪಡುತ್ತದೆ. ಸಹಜವಾಗಿ ವೇದ ಮಂತ್ರಗಳಲ್ಲಿ ಗುರು ಉಪದೇಶವಾದಂತೆ ನೇರವಾಗಿ ಕುಳಿತು ನಾಭಿಯಿಂದ ಉಚ್ಚರಿಸಲ್ಪಡುವ ಓಂಕಾರ ಕೇವಲ ಉಚ್ಚಾರಕ್ಕೆ ಮಾತ್ರವೇ ಸೀಮಿತವಾದಂತೆ ಈ ಮೊದಲು ಕಂಡಿತ್ತು. ಸ್ವಲ್ಪ ಮಟ್ಟಿಗೆ ಯೋಗಾಭ್ಯಾಸ ಆರಂಭಿಸಿದ ಮೇಲೆ ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಿ ಭಗವಂತನ ಧ್ಯಾನದಲ್ಲಿ ಲೀನವಾಗುವಾಗ ಓಂಕಾರ ಮಹತ್ವವನ್ನು ಪಡೆಯುತ್ತಿತ್ತು. ಯೋಗ ಮಾಡುತ್ತಿದ್ದಂತೆ ಪ್ರತೀ ಬಾರಿಯೂ ಒಂದು ವಿಶಿಷ್ಟ ಅನುಭವಕ್ಕೆ ನಾನು ಒಳಗಾಗುತ್ತೆದ್ದೆ. ಅದೇ ರೀತಿ ಈ ಬಾರಿಯೂ ವಿಚಿತ್ರವಾದ ಅನುಭವ ಓಂಕಾರ ಧ್ಯಾನದ ಮೂಲಕ ಆದಾಗ ಅದರ ನೆನಪು ಮತ್ತೂ ಮತ್ತೂ ಮರುಕಳಿಸುತ್ತದೆ.
      ಧ್ಯಾನಕ್ಕೆ ತೊಡಗುವಾಗ ಆರಂಭದಲ್ಲಿ ಸಹಜವಾಗಿ ಪದ್ಮಾಸನದಲ್ಲಿ ನೇರವಾಗಿ ಕುಳಿತು ಒಂದೇ ಕಡೆಗೆ ಮೇಲ್ಮುಖವಾಗಿ ದಿಟ್ಟಿಸಿ ನಿಧಾನವಾಗಿ ಕಣ್ಣು ಮುಚ್ಚಬೇಕು. ನಿಧಾನವಾದ ದೀರ್ಘವಾದ ಉಸಿರಾಟ ಕೆಲವು ಬಾರಿ ಮಾಡಿದಾಗ  ಮನಸ್ಸು ಮತ್ತು ದೇಹ ಒಂದು ಸ್ಥಿರತೆಯನ್ನು ಪಡೆದು ಕೊಳ್ಳುತ್ತದೆ. ಆ ಸ್ಥಿರತೆಯಲ್ಲೆ ಎಲ್ಲವೂ ಲೀನವಾದ ಅನುಭವ. ಬಾಹ್ಯ ಜಗತ್ತಿನ ಸದ್ಧು ಗದ್ದಲ ಕೇಳುತ್ತಿದ್ದರೂ,  ನಿಧಾನವಾಗಿ ನಮ್ಮ ಅರಿವಿನ ವರ್ತುಲದಿಂದ ದೂರವಾಗುತ್ತದೆ ಆ ಅವ್ಯಕ್ತ ಅನುಭವವೇ ಯೊಗ. ಯೋಗವೆಂದರೆ ಒಟ್ಟು ಸೇರುವುದು. ಎಲ್ಲಾ ಪ್ರಚೋದನೆಗಳಜತೆಗೆ  ದೇಹ ಮತ್ತು ಮನಸ್ಸನ್ನು ಒಂದೇ ಕೇಂದ್ರದಲ್ಲಿ ಒಟ್ಟು ಸೇರಿಸುವುದು.
      ಇದರ ಆರಂಭವೇ ಉಸಿರಾಟದಿಂದ. ಎಲ್ಲವನ್ನೂ ಉಸಿರಾಟದ ಮೂಲಕ ಕೇಂದ್ರಿಕರಿಸುವ ಪ್ರಯತ್ನದಿಂದಲೇ ಶುರು ಮಾಡಬೇಕು.   ನಾಸಿಕಾಗ್ರದಿಂದ ಒಳ ಸೇರಿದ ಗಾಳಿ ಅದೇ  ಗಮನದಲ್ಲಿ ಗಂಟಲು ಎದೆ ಕೊನೆಗೆ ನಾಭಿಯ ಸುತ್ತಲೂ ವ್ಯಾಪಿಸಿ ಮತ್ತು ಕೆಳಗೆ ಹೋಗಿ ದೇಹದ ತುಂಬೆಲ್ಲ ವ್ಯಾಪಿಸ ತೊಡಗಿ ನಿಧಾನವಾಗಿ ಉಸಿರು ಬಿಟ್ಟಾಗ ನಾಭಿಯ ಸುತ್ತ ನಿರ್ವಾತವಾದ ಅನುಭವವಾಗುತ್ತದೆ. ಇದು ಅಲ್ಪ ಸಮಯದಲ್ಲಿ ಉಂಟಾಗುವ ಪರಿಣಾಮವಲ್ಲ. ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಹೀಗೆ ಅನುಲೋಮ ವಿಲೋಮ ಆವರ್ತನೆಯಾದಂತೆ ಅದರ ಜತೆಯಲ್ಲೇ ಓಂ... ಓಂ ಎಂದು ಓಂಕಾರವನ್ನು  ಎಷ್ಟು ಸಾಧ್ಯವೋ ಅಷ್ಟು ದೀರ್ಘವಾಗಿ ಉಚ್ಚರಿಸುತ್ತಾ ಹೋಗಬೇಕು. ಹಾಗೆ ಉಚ್ಚರಿಸಿದಾಗ ಓ...ದಿಂದ ತೊಡಗಿ ಮಕಾರದಲ್ಲಿ  ಉಚ್ಚಾರ ನಿಧಾನವಾಗಿ ಪೂರ್ಣವಾದಾಗ ನಾಭಿ ಪ್ರದೇಶ ಒಳಕ್ಕೆ ಸೆಳೆಯಲ್ಪಡುತ್ತದೆ. ಘಂಟಾ ನಿನಾದದಲ್ಲಿ ಗಂಟೆಯ ನಿರಂತರ ಕಂಪನಸ್ವರ ಹೇಗೆ ಆವರ್ತಿಸುತ್ತ ತನ್ನ ಸುತ್ತ ಕಂಪನಾವಲಯವನ್ನು ನಿರ್ಮಿಸುತ್ತದೋ ತದ್ರೀತಿ ಓಂಕಾರದ ಕಂಪನ ದೇಹದ ಸುತ್ತ ತನ್ನ ಕಂಪನದವಲಯವನ್ನು ನಿರ್ಮಿಸುತ್ತಾ.. ಆ ವಲಯಕ್ಕೆ ಕೇಂದ್ರವು ನಾಭಿಯಾಗಿಬಿಡುತ್ತದೆ.ಹೊಟ್ಟೆಯ ಕರುಳು ತೀವ್ರವಾಗಿ ಕಂಪನದ ಪರಿಣಾಮವನ್ನು ಅನುಭವಿಸುತ್ತದೆ. ಇದು ಹೊಟ್ಟೆಯ ಒಳಗಿನ ಸರ್ವ ಕ್ರಿಯೆಗಳಿಗೂ ಚೈತನ್ಯ ವನ್ನು ಪ್ರಚೋದನೆಯನ್ನು ಒದಗಿಸುತ್ತದೆ. ಹೀಗೆ ನಿರಂತರವಾದ ದೀರ್ಘವಾದ ಓಂಕಾರದ ಉಚ್ಚಾರ ಹಲವು ಸಲ ಆವರ್ತನೆಯಾದಂತೆ ಉದರದೊಳಗೆ ವಿಶಿಷ್ಟವಾದ ಅನುಭವ  ಉಂಟಾಗುತ್ತದೆ. ಹೊಟ್ಟೆಯ ಕೇಂದ್ರವಾದ ನಾಭಿಯಿಂದ ತೊಡಗಿ ದೇಹದ ತುಂಬೆಲ್ಲ ಈ ಕಂಪನ ಪಸರಿಸಿದಂತೆ ನಮ್ಮ ಅಂತರ್ ದೃಷ್ಟಿಯನ್ನು ಭ್ರೂ ಮಧ್ಯ ಇರುವ ನಿರ್ವಾತ ಪ್ರದೇಶದಲ್ಲಿ ಕೇಂದ್ರೀಕರಿಸಲ್ಪಟ್ಟರೆ  ಯಾವ ರೂಪದಲ್ಲಿ ನಾವು ಭಗವಂತನನ್ನು ಕಲ್ಪಿಸುತ್ತೇವೊ ಆ ರೂಪದ ಪ್ರತ್ಯಕ್ಷ ಅನುಭವ ಭ್ರೂ ಮಧ್ಯದಲ್ಲಿ ಆಗುತ್ತದೆ. ಆವಾಗ  ಕೇವಲ ಅಕ್ಷರ ಮಾತ್ರದ ಓಂಕಾರದ ಮಹತ್ವದ ಅರಿವಾಗುತ್ತದೆ. ಭಗವಂತನನ್ನು ಓಂಕಾರ ಸ್ವರೂಪಿ ಎನ್ನುವುದು ಇದಕ್ಕಾಗಿಯೇ ಇರಬೇಕು ಸರ್ವ ಚೈತನ್ಯರೂಪವೂ ಇದೇ ಅಲ್ಲವೆ?  ಕೆಲವು ಸಮಯದ ಮೊದಲು ಓರ್ವರು ಹೀಗೆ ಚರ್ಚಿಸುವಾಗ ಹೇಳೀದ್ದರು ... “ ಪ್ರಾಣಾಯಾಮ ಅಥವಾ ಧ್ಯಾನ ಯೋಗದಲ್ಲಿ ಕ್ಯಾಲೊರಿ ಉರಿಸಲ್ಪಡುವುದಿಲ್ಲ. ಕೇವಲ ಪ್ರಾಣಾಯಾಮ ಒಂದೇ ಸಾಕಾಗುವುದಿಲ್ಲ ಎಂದು.”  ಆದರೆ ಆ ಮಾತು ಇಂದು ನಿಜವಲ್ಲ ಎಂದನಿಸುತ್ತದೆ. ನಿರಂತರ ಓಂಕಾರ ಉಚ್ಚಾರದಿಂದ ನಾಭಿವಲಯದಲ್ಲಿ ಕಂಪನವು ನಿರಂತರವಾಗಿ ಪ್ರಚೋದಿಸಲ್ಪಟ್ಟರೆ, ದೈಹಿಕವಾದ ಕ್ರಿಯೆಗಳ ಮೇಲೂ ಅದರ ಪ್ರಭಾವ ಬೀರದೆ ಇರಲಾರದು. ನಿರಂತರವಾದ ಕಂಪನವು ಹೊಟ್ಟೆ;ಯೊಳಗಿನ ಜೀರ್ಣಾಂಗ ವಿಸರ್ಜನಾಂಗ ಮಾತ್ರವಲ್ಲದೆ ಶ್ವಾಸ ಕೋಶ ಸೇರಿದಂತೆ ದೇಹದ ಎಲ್ಲಾ ಭಾಗದಲ್ಲೂ ಆವಶ್ಯಕ ಪ್ರಭಾವವನ್ನು ಬೀರಬಲ್ಲುದು. ಏನೂ ಅರಿವಿಲ್ಲದೆ ಇದು ಪ್ರಾಯೋಗಿಕವಾಗಿ ಸಿದ್ಧಿಸುವಾಗ ಆಗುವ ಅನುಭವವೇ ವಿಶಿಷ್ಟವಾದುದು.
      ಈ ಪ್ರಕೃತಿ ಎಷ್ಟೊಂದು ವೈವಿಧ್ಯಮಯವಾಗಿದೆ. ಪರಮಾತ್ಮನೇ ಲೀನವಾಗಿ ಪರಮಾತ್ಮನಲ್ಲೇ ಒಂದಾಗಿ  ಯಾವ ಬಗೆಯಲ್ಲೂ ಕಾಣಬಹುದಾದ ವೈವಿಧ್ಯತೆ ಅಚ್ಚರಿಪಡುವಂತಹುದು. ಇದಕ್ಕೆ ಅತಿ ಸುಲಭದ ಮಾರ್ಗವೇ ಈ ಧ್ಯಾನ ಯೋಗ .
     ಓಂಕಾರ ಜಪಿಸುವುದರಿಂದಾಗುವ ಉಪಯೋಗಗಳು:*ಹತ್ತು ಸಾರಿ ಓಂಕಾರವನ್ನು ಕ್ರಮಬದ್ಧವಾಗಿ ಜಪಿಸಿದರೆ ಪ್ರಜ್ಞೆ ಅರಳುತ್ತದೆ. ರಕ್ತದ ಒತ್ತಡ ಮತ್ತು ಹೃದಯ ಬಡಿತ ಕೆಳಗೆ ಬರುತ್ತದೆ.*ನಿದ್ರಾಭಂಗ ನಿವಾರಣೆಯಾಗುತ್ತದೆ.*ಗಮನಾರ್ಹ ರೀತಿಯಲ್ಲಿ ಶರೀರದಲ್ಲಿನ ಶರ್ಕರಾಂಶ ಬಳಕೆ ಹೆಚ್ಚುತ್ತದೆ.*ದೇಹದಲ್ಲಿನ ಆಮ್ಲಜನಕ ಸಂಚಾರ ಉನ್ನತ ಮಟ್ಟದಲ್ಲಿರುತ್ತದೆ.*ಮನೋಖಿನ್ನತೆ, ನಕರಾತ್ಮಕ ಧೋರಣೆ, ಕುತೂಹಲದ ಉಪಟಳ ಇರುವುದಿಲ್ಲ. ನಿರಾಶೆ ಕುಗ್ಗುತ್ತದೆ. *ಮನೋಲ್ಲಾಸ, ಪ್ರಫುಲ್ಲತೆ, ಮನೋಶಾಂತಿ ವೃದ್ಧಿಸುತ್ತದೆ.*ಮನೋದುಗುಡ, ಉದ್ರೇಕ, ಕಳವಳ ಶಮನಕಾರಿ.*ಶರೀರದ ಅಂಗಕ್ರಿಯೆಗಳು ವೃದ್ಧಿಸುತ್ತವೆ.*ಏಕಾಗ್ರತೆ ಹೆಚ್ಚುತ್ತದೆ. ಗ್ರಹಣಶಕ್ತಿ ಹೆಚ್ಚುತ್ತದೆ.*ಬೇಸರ ಹತ್ತಿರ ಸುಳಿಯುವುದಿಲ್ಲ.*ಜನಾನುರಾಗ ಗುಣ ಉದ್ದೀಪನಗೊಳ್ಳುತ್ತದೆ.*ವೃತ್ತಿ ತತ್ಪರತೆ - ಕಾರ್ಯ ಕೌಶಲ್ಯ ಶ್ರೇಷ್ಠ ಮಟ್ಟದಲ್ಲಿರುತ್ತದೆ. *ನೋವಿನಿಂದ ನಿರಾಳತೆ ಲಭಿಸುತ್ತದೆ.*ನೆನಪಿನ ಶಕ್ತಿ ವೃದ್ಧಿಸುತ್ತದೆ.*ವೈದ್ಯ ವಿಜ್ಞಾನದ ಪ್ರಕಾರ ಓಂಕಾರ ಮಾನವನ ಸೃಷ್ಟ್ಯಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಪ್ರೇರಕ ಶಕ್ತಿಯ ಸಂಚಾರ ನರಮಂಡಲವನ್ನು ಜಾಗೃತಗೊಳಿಸುತ್ತದೆ. ಇದರಿಂದ ಸ್ಮೃತಿ ವರ್ಧಿಸುತ್ತದೆ..
   (ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 

ಅಜಾತಶತ್ರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ತನ್ನಿಮಿತ್ತ ಈ ಲೇಖನ .ಅಟಲ್ ಅವರು ಹುಟ್ಟಿದ್ದು , 25 ಡಿಸೆಂಬರ್ 1924 ರಲ್ಲಿ ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ,  ಮಧ್ಯ ಪ್ರದೇಶದ ಗ್ವಾಲಿಯರ್  ಹತ್ತಿರದ  ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ, ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಶಿಕ್ಷಕ ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್  ವಾಜಪೇಯಿಯವರು. ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್  ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ  (ಆರ್. ಎಸ್. ಎಸ್ )ವನ್ನು ಸೇರಿದರು. ವೀರ ಅರ್ಜುನ ಹಾಗೂಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು….

. ನಿಮಗೆ ಗೊತ್ತ? ಭಾರತದ  ಅವಿವಾಹಿತ ಪ್ರದಾನ ಮಂತ್ರಿ ಕೇವಲ ಅಟಲ್ ಜಿ ಮಾತ್ರ…..!!ಅಟಲ್ ಅವರ ಮೊದಲ ರಾಜಕೀಯ ಜೀವನ ಶುರುವಾಗಿದ್ದು 1942 ರಲ್ಲಿ ಕ್ವಿಟ್ ಇಂಡಿಯ (ಬ್ರಿಟಿಷರೇ ಬಾರತ ಬಿಟ್ಟು ತೊಲಗಿ) ಚಳುವಳಿಯಲ್ಲೀ ಭಾಗವಹಿಸುವ ಮೂಲಕ, ನಂತರ 23 ದಿನಗಳ ಕಾಲ ಜೈಲು ವಾಸ ಅನುಭವಿಸ ಬೇಕಾಯಿತು, 1953 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯ ಭಾರತೀಯ ಜನ ಸಂಘದ ಮೂಲಕ ಆಯಿತು. 1957 ರಲ್ಲಿ ಮೊದಲ ಬಾರಿಗೆ ಲೋಕ ಸಭೆಯ ಸದಸ್ಯರಾಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನ ಕಂಡ ನೆಹರು ಜಿ ಹೇಳಿದ್ರಂತೆ, ಈ ವ್ಯಕ್ತಿ ಮುಂದೆ ಪ್ರದಾನಿ ಆಗ್ತಾರೆ ಅಂತ. ಅವರ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಎಷ್ಟರ ಮಟ್ಟಿಗೆ ಬೆಳೆದರು ಎಂದರೆ ಜನ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರೇ ಕೇಳದ ಪಕ್ಷವನ್ನ ಬುಡದಿಂದ ಕಟ್ಟಿ ಬೆಳಸಿದರು ಅದಕ್ಕೆ ಸಾಥ್ ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶಮುಖ್ ಹಾಗೂ ಬಾಲರಾಜ್ ಮಧೋಕ್ ಅವರು.ವಿಶೇಷ ಇನ್ನೊಂದಿದೆ ಅವರು 3ನೇ, 10, ಹಾಗೂ 11ನೇ ಲೋಕ ಸಭೆಯನ್ನು ಬಿಟ್ಟು ಉಳಿದೆಲ್ಲ ಸಮಯದಲ್ಲಿ ಲೋಕ ಸಭೆಯ ಸದಸ್ಯರಾಗಿ ಇದ್ದರು. 1977 ರಲ್ಲಿ  ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ  ಅವರು ಅಮೆರಿಕ ದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು ಆ ಸಂಧರ್ಬದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯ ಅಟಲ್ ಅವರು…… ಅವರಿಗೆ ಇಂಗ್ಲಿಷ್ ಬರೋದಿಲ್ಲ ಅಂತ ಯೋಚನೆ ಮಾಡ್ಬೇಡಿ ಅವರು ಇಂಗ್ಲೀಷ್ ನಲ್ಲೂ ಕೂಡ ಪ್ರಖಾಂಡ ಪಂಡಿತರು.1979 ರಲ್ಲಿ ಮುರಾರ್ಜಿ ದೇಸಾಯಿ ಅವರ ಸರ್ಕಾರ ಪತನಗೊಂಡ ಸಂಧರ್ಬದಲ್ಲಿ ಜನತಾ ಪಾರ್ಟಿಯನ್ನ ವಿಸರ್ಜಿಸಲಾಯಿತು ಆ ಸಂಧರ್ಬದಲ್ಲೂ ದೃತಿಗೆದದ ಅಟಲ್ ಜಿ ಭಾರತೀಯ ಜನ ಸಂಘ ಹಾಗೂ ಆರ್ ಎಸ್ ಎಸ್ ನ ಕೆಲ ಮುಖಂಡರೊಂದಿಗೆ ಸೇರಿ , ಜೊತೆಗೆ ಲಾಲ್ ಕೃಷ್ಣ ಅಡ್ವಾಣಿಯವರ ಜೊತೆಗೂಡಿ 1980 ರಲ್ಲಿ ಭಾರತೀಯ ಜನತಾ ಪಾರ್ಟಿ ಯನ್ನ ಕಟ್ಟಿದರು. 1984 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಅನ್ನ ಅತ್ಯಂತ ಖಟುವಾಗಿ ವಿರೋದಿಸಿದವರು ಅಟಲ್ ಜಿ….. ಅಷ್ಟಕ್ಕೂ ಈ ಬ್ಲೂ ಸ್ಟಾರ್ ಆಪರೇಷನ್ ಅಂದರೆ ಏನು ಗೊತ್ತ? ಪಂಜಾಬ್ ನ ಸಿಕ್ಕ್ ದೇವಾಲಯ ಒಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನಿದೆ ಅನ್ನೋ ನೆಪ ಮಾಡಿಕೊಂಡು ಅಲ್ಲಿಗೆ ಸೈನ್ಯವನ್ನ ಕಳುಹಿಸಿ ಜಲಿಯನ್ ವಾಲಭಾಗ್ ಹತ್ಯಾಕಾಂಡಕಿಂತಲೂ ಭಯಾನಕವಾಗಿ ನರ ಮೇಧ ನೆಡೆಸಿದ್ದು!! ಅದರ ರೂವಾರಿ ಯಾರು ಗೊತ್ತ? ಮೇಡಂ ಇಂದಿರ ಗಾಂಧಿ!! ಅಷ್ಟಕ್ಕೂ ಒಡೆದು ಆಳುವ ನೀತಿಯನ್ನ ಮುಂದುವರಿಸಿಕೊಂಡು ಬಂದಿದ್ದ ಆಗಿನ ಸರ್ಕಾರದ, ಹಾಗೂ ಬ್ಲೂ ಸ್ಟಾರ್ ಆಪರೇಷನ್ ವಿರುದ್ದ ಹೋರಾಟ ಮಾಡಲು ಲೋಕ ಸಭೆಯಲ್ಲಿ ಇದ್ದ ಬಿ ಜೆ ಪಿ ಯ ಸದಸ್ಯರ ಒಟ್ಟು ಸಂಖ್ಯಾ ಬಲ ಕೇವಲ 2 ಮಾತ್ರ!! ಹಾಗಿದ್ದರೂ ದೃತಿ ಗೆಡಲಿಲ್ಲ ಅಟಲ್…..ರಾಮ ಜನ್ಮಭೂಮಿಯ ವಿಚಾರದಲ್ಲಿ ಹೋರಾಟ, ನಂತರ 1995 ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಮೊದಲ ಬಾರಿಗೆ ಅಧಿಕಾರವನ್ನ ವಹಿಸುವ ಅವಕಾಶ ಬಿ ಜೆ ಪಿ ಗೆ ಒಲಿದು ಬಂತು ನಂತರ ಮಹಾರಾಷ್ಟ್ರದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಮಾನ್ಯ ಅಟಲ್ ಜಿ ಅವರ ಹೆಸರನ್ನ ಘೋಷಿಸಿದರು ಅದರಿಂದಾಗಿ 1996 ರಲ್ಲಿ ಕೇಂದ್ರದಲ್ಲಿ ಮೊದಲ ಬಿ ಜೆ ಪಿ ಯ ಸರ್ಕಾರ ರಚನೆಯಾಯಿತು. ಆದರೆ ದುರಾದೃಷ್ಟ ವಶಾತ್ ಅಟಲ್ ಬಹುಮತ ಸಾಭೀತು ಪಡಿಸುವ ಸಂದರ್ಭದಲ್ಲಿ ಸೋಲೋಪ್ಪಬೇಕಾಯಿತು ಹಾಗಾಗಿ ಮೊದಲಬಾರಿಗೆ ಅಟಲ್ ಕೇವಲ 13 ದಿನಗಳಿಗಾಗಿ ಪ್ರದಾನಿಯಾಗಿದ್ದರು ಅಷ್ಟೇ…1998- 99 ರಲ್ಲಿ ಎನ್ ಡಿ ಎ ಅನ್ನುವ ಸಂಘಟನೆಯಡಿ ಪಕ್ಷಗಳನ್ನ ಒಂದು ಗೂಡಿಸಿ ಮತ್ತೆ ಬಿ ಜೆ ಪಿ ಅಧಿಕಾರಕ್ಕೆ ಬಂತು ಅಟಲ್ ಪ್ರಧಾನಿಯಾದರು. ಮತ್ತೆ ಜಯಲಲಿತ ತಾವು ನೀಡಿದ್ದ ಬೆಂಬಲವನ್ನ ಹಿಂಪಡೆದರು ಅದರಿಂದಾಗಿ  ಬಹುಮತ ಸಾಬೀತು ಮಾಡುವ ಪರೀಕ್ಷೆ ಎದುರಾಯಿತು ಆಗ ಕೇವಲ 1 ವೋಟಿನಿಂದ ಅಟಲ್ ಸರ್ಕಾರ ಮತ್ತೆ ಬಿದ್ದು ಹೋಯಿತು……ಮೇ 1998ರಲ್ಲಿ ಮೊದಲ ಬಾರಿಗೆ ಅಟಲ್ ಸರ್ಕಾರ ಒಂದು ನಿರ್ಧಾರಕ್ಕೆ ಬಂದು, ಅಣ್ವಸ್ತ್ರ ಪರೀಕ್ಷೆಯನ್ನ ಪೊಖ್ರಾನ್ (ರಾಜಸ್ತಾನ ದಲ್ಲಿದೆ) ಎಂಬಲ್ಲಿ ನೆಡೆಸಿತು, ಯಶಸ್ವಿ ಆಯಿತು ಕೂಡ, ಇಡೀ ವಿಶ್ವ ಭಾರತವನ್ನ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು, ಅಮೆರಿಕವೆಂಬ ಹೊಟ್ಟೆಕಿಚ್ಚಿನ ದೇಶ ನಮ್ಮ ಮೇಲೆ ಅಣ್ವಸ್ತ್ರ ಪರೀಕ್ಷೆ ಮಾಡಿದ ಕಾರಣವೊಡ್ಡಿ ನಿರ್ಭಂದ ಹೇರಿತು. ಇದಾಗಿ ಎರಡೇ ವಾರದಲ್ಲಿ ನಮ್ಮ ಪರಮಾಪ್ತ!! (?) ರಾಷ್ಟ್ರ ಪಾಕಿಸ್ತಾನ ಅಣು ಶಶ್ತ್ರಾಸ್ತ್ರಗಳನ್ನ ಪರೀಕ್ಷೆ ಮಾಡಿತು ಗೊತ್ತೇ? ನಂತರ ಅಮೆರಿಕ “ಸಿ ಟಿ ಬಿ ಟಿ ಒಪ್ಪಂದಕ್ಕೆ ಸಹಿ ಮಾಡುವಂತೆ ಎಷ್ಟು ಒತ್ತಾಯ ಮಾಡಿತೆಂದರೆ ಅದೆಲ್ಲವನ್ನೂ ಅಟಲ್ ಛಲದಿಂದಲೇ ಎದುರಿಸಿದರು. ಅಷ್ಟಕ್ಕೂ ಈ ಸಿ ಟಿ ಬಿ ಟಿ ಅಂದರೆ ಏನು ಗೊತ್ತೇ? ಕಂಪ್ರಹೆನ್ಸಿವ್ ಟೆಸ್ಟ್ ಬ್ಯಾನ್ ಟ್ರೀಟಿ ಅಂತ, ಅಂದರೆ ನಾವು ಯಾರಮೇಲೂ ಅಣ್ವಸ್ತ್ರ ಪ್ರಯೋಗ ಮಾಡುವಂತಿಲ್ಲ…….ಸರಿ ಹಾಗೆಲ್ಲಾದರೂ ಸಹಿ ಹಾಕಿದರೆ ನಮ್ಮ ನೆಂಟ ರಾಷ್ಟ್ರ ಪಾಕಿಸ್ತಾನ ಸುಮ್ಮನಿರುತ್ತದೆಯೇ? ಸಹಿ ಹಾಕಿದ ಮರುಕ್ಷಣವೇ ಅವರಲ್ಲಿರುವ ಅಕ್ರಮ ಅಣು ಬಾಂಬಗಳನ್ನ ಸಾಲು ಸಾಲಾಗಿ ತಂದು ನಮ್ಮ ಮೇಲೆ ಎಸೆದು ದ್ವಂಸ ಮಾಡಿಬಿಡುವುದಿಲ್ಲವೇ? ಹಾಗೆ ಆಗಲೆಂದೇ ಅಮೆರಿಕ ಸಿ ಟಿ ಬಿ ಟಿ ಅನ್ನೋ ಕುಣಿಕೆಯನ್ನ ನಮಗೆ ಸುತ್ತಲು ಬಂದಿದ್ದು… ಆದರೆ ಅದನ್ನ ಅರಿತಿದ್ದರು ಅಟಲ್.1998 ಹಾಗೂ 1999 ರಲ್ಲಿ ಭಾರತ ಪಾಕಿಸ್ತಾನಗಳನಡುವೆ ಲಾಹೋರ್ ಒಪ್ಪಂದಕ್ಕೂ ಮುಂದಾಗಿದ್ದು ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರು… ಆದರೆ ಮುಂದಿನಿಂದ ಒಪ್ಪಂದ ಮಾಡಿಕೊಂಡು ಹಿಂದಿನಿಂದ ಬಂದು ಬಾಂಬ್ ಹಾಕುವ ಬುದ್ಧಿಯನ್ನ ಪಾಕ್ ಬಿಡಲೇ ಇಲ್ಲ ….ಜೂನ್ 1999 ರಲ್ಲಿ ಕಾರ್ಗಿಲ್ ಯುದ್ದ ಶುರುವಾಗಿ ಹೋಯಿತು,ಆಪರೇಷನ್ ವಿಜಯ್ ಗೆ ಕರೆ ಕೊಟ್ಟರು ಅಟಲ್, 3 ತಿಂಗಳು ನಡೆದ ಯುದ್ದದಲ್ಲಿ ಪಾಕ್  ಮಾಡಿದ 70% ಅತಿಕ್ರಮ ಪ್ರವೇಶ ವನ್ನು ಹಿಮ್ಮೆಟ್ಟಿಸಲಾಯಿತು, 600 ರಿಂದ ಸುಮಾರು 3000 ಸಾವಿರ ಪಾಕ್ ಉಗ್ರರನ್ನ ಮುಗಿಸಲಾಯಿತು, ನಂತರ ಪಾಕಿಸ್ತಾನ ಅಮೆರಿಕಾದ ಕಾಲು ಹಿಡಿದು ಜೀವ ಉಳಿಸಿಕೊಂಡು ಕದನ ವಿರಾಮ ಘೋಷಣೆ ಮಾಡಿತು….ಆಗ ಅಟಲ್ ತೆಗೆದುಕೊಂಡ ನಿರ್ಧಾರಗಳು, ಅವರ ಧೈರ್ಯ ಮೆಚ್ಚುಗೆಗೆ ಪಾತ್ರವಾಯಿತು.ಮೂರನೇ ಬಾರಿಗೆ ಪ್ರದಾನಿಯಾಗಿದ್ದು 1999 ರಿಂದ 2004 ರ ವರೆಗೆ, ಆ ಸಂದರ್ಭದಲ್ಲಿ ನಡೆದ ಭಾರತೀಯ ವಿಮಾನ ಅಪಹರಣ (ಖಂದಹಾರ್ ನಲ್ಲಿ. – ಹಿಂದೊಮ್ಮೆ ಘಾಂದಾರ ಅಗಿತ್ತಂತೆ ಅದು ) ಕೂಡ ಸುಖಾಂತ್ಯ ಕಾಣುವಲ್ಲಿ ಅಟಲ್ ಹಾಗೂ ಜಸವಂತ್ ಸಿಂಗರ ಕೊಡುಗೆ ಅಪಾರವಾಗಿದೆ. ಮತ್ತೆ ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಅಟಲ್ ಮಾಡಿದ ಮಹತ್ತರ ಸಾಧನೆಗಳಲ್ಲಿ ಪ್ರದಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ, ಎಷ್ಟರ ಮಟ್ಟಿಗೆ ಇದು ಫಲಪ್ರದವಾಯಿತೆಂದರೆ ಲಕ್ಷಾಂತರ ಹಳ್ಳಿಗಳು ಡಾಂಬರಿನ ರಸ್ತೆಗಳನ್ನು ಕಂಡವು, ಸಂಪರ್ಕ ಹಾಗೂ ರಸ್ತೆ ನಿರ್ಮಾಣದಲ್ಲಿ ಆದ ಕ್ರಾಂತಿ ಅಂದರೆ ಅದೇನು ತಪ್ಪಾಗಲಾರದು.ನಂತರದಲ್ಲಿ 2001 ರ ಪಾರ್ಲಿಮೆಂಟ್ ಮೇಲಿನ ಉಗ್ರರ ದಾಳಿ ಕಹಿ ನೆನಪು , 2005 ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡವರು ಅಟಲ್, ರಾಜಕೀಯವನ್ನ ಬಿಟ್ಟರೆ ಅಟಲ್ ಒಬ್ಬ ಒಳ್ಳೆಯ ಕವಿ ಹಾಗೂ ಸಾಹಿತಿಯೂ ಹೌದು. ಅವರು ಬರೆದ ಪುಸ್ತಕಗಳು ಅನೇಕ. ಹಾಗೆ ಅವರಿಗೆ ಅರಸಿ ಬಂದ ಪ್ರಶಸ್ತಿಗಳೂ ಅಷ್ಟೇ, 1992 ರಲ್ಲಿ ಪಧ್ಮ ವಿಭೂಷಣ, 1994 ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ, 1994 ರಲ್ಲಿ ಉತ್ತಮ ರಾಜಕೀಯ ಪಟು ಗೌರವ, ಹಾಗೂ 1994 ರ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿಗಳು ಮುಖ್ಯವಾದವು.ಅವರು ಬರೆದ ಕೆಲವು ಪುಸ್ತಕಗಳು:Atal Bihari Vajpayee, meri samsadiya yatra (Hindi Edition). (1999). – ಇದು ಅವರ ಜೀವನ ಚರಿತ್ರೆ.Four decades in parliament. (1996).Atala Bihari Vajpayee, samsada mem tina dasaka. (1992).Pradhanamantri Atala Bihari Vajapeyi, chune hue bhashana. (2000).Values, vision & verses of Vajpayee: India’s man of destiny. (2001).India’s foreign policy: New dimensions. (1977).Assam problem: Repression no solution. (1981).Suvasita pushpa: Atala Bihari Vajapeyi ke sreshtatama bhashana. (1997).ಕವಿತೆಗಳುTwenty-One Poems. (2003).Kya khoya kya paya: Atala Vihari Vajapeyi, vyaktitva aura kavitaem (Hindi Edition). (1999).Meri ikyavana kavitaem. (1995).Meri ikyavana kavitaem (Hindi Edition). (1995).Sreshtha kabita. (1997).Nayi Disha – an album with Jagjit Singh (1999)Samvedna – an album with Jagjit Singh (2002)
     ಎನ್ ಡಿ  ಎ ಆಗಿರಲಿ, ಭಾರತೀಯ ಜನ ಸಂಘ ಆಗಿರಲಿ, ಭಾರತೀಯ ಜನತಾ ಪಾರ್ಟಿ ಆಗಿರಲಿ ಅವೆಲ್ಲವೂ ಹುಟ್ಟಿ ಬೆಳೆದಿದ್ದು ಅಟಲ್ ರ ಮಾರ್ಗದರ್ಶನದಲ್ಲಿಯೇ! ತನಗಾಗಿ ಒಂದು ಸಂಸಾರವನ್ನೂ ಕಟ್ಟಿಕೊಳ್ಳದೆ ದೇಶಕ್ಕಾಗಿ ದೇಶದ ಹಿತಕ್ಕಾಗಿ ಹೋರಾಟ ಮಾಡಿದ ಆಧುನಿಕ ರಾಜಕಾರಣದ ಭೀಷ್ಮ ವಾಜಪೇಯಿಯವರು ಎಲ್ಲರಿಗೂ ಮಾದರಿ. ನಿಷ್ಕಳಂಕ, ಸಜ್ಜನ , ರಾಜಕಾರಣಿಯಾಗಿ ಕವಿಯಾಗಿ ಒಬ್ಬ ಶ್ರೇಷ್ಠ ಮಾನವತಾ ವಾದಿಯಾದ ವಾಜಪೇಯಿಯವರಿಗೆ ಅವರ ಜನುಮದಿನಕ್ಜೆ ಅತ್ಯುನ್ನತ ಭಾರತರತ್ನ ನೀಡಲು ನಿಧ೯ರಿಸಿದೆ.ಅವರ ಆರೋಗ್ಯ ಏರುಪೇರಾಗಿ ತಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೂ ಆ ಸಂಗತಿ ಅರಿಯದಂತಾಗಿದ್ದಾರೆ.ಅವರ ಆರೋಗ್ಯ ಸುಧಾರಿಸಲಿ ಅವರಿಗೆ 90ನೇ ವಷ೯ಕ್ಕೆ ಕಾಲಿಡುತ್ತಿರುವುದಕ್ಕೆ ಶುಭಾಶಯಗಳು.
                           -(ಆಧಾರ)
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನ಼ಂ.9731741397

8 ತಲೆಮಾರುಗಳಿಂದ ವಂಶಾವಳಿ ವಂಶವೃಕ್ಷ ಬರೆಯುತ್ತ ಬಂದ ದೇಶಕುಲಕಣಿ೯

   ಯಾರಿಗಾದರೂ ಕೇಳಿ ನೋಡಿ, ಅವರ ವಂಶದ ಬಗ್ಗೆ ಅವರ ಹೆಸರು,ಅವರಪ್ಪನ ಹೆಸರು,ಅವರಜ್ಜನ ಹೆಸರು ಹೇಳುತ್ತಾರೆ.ಅಬ್ಬಬ್ಬಾ..ಅಂದರೆ ಅವರ ಮುತ್ತಜ್ಜನ ಹೆಸರು ಹೇಳಬಹುದು.ಇತಿಹಾಸ ಶೋಧಿಸಿದಾಗ ಕೆಲ ರಾಜಕುಟುಂಬಗಳ ವಂಶಾವಳಿ ದೊರಕಬಹುದು.ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪದ ದೇಶಕುಲಕಣಿ೯ (ದೇಸಾಯಿ)ಅವರು ,ಕಳೆದ 8 ತಲೆಮಾರಿನ ವಂಶವೃಕ್ಷವನ್ನು ಬರೆದಿಡುತ್ತಾ ಬಂದಿದ್ದಾರೆ.
          ಭೋಗೇನಾಗರಕೊಪ್ಪ ದೇಸಾಯರ ಪೂವ೯ಜರು ಬಿದರಿಕೋಟೆ ಗ್ರಾಮದ ದೇಸಾಯರಾಗಿದ್ದರು.ಆ ಅಧಿಕಾರ ತ್ಯಜಿಸಿ ಹಂಪೆ ಪಂಪಾಪತಿ ದೇಗುಲದ ಅಚ೯ಕರಾದರು.ಬಿದರಿಕೋಟೆ ಗ್ರಾಮ ಈಗ ಬೇಚರಾಕ್ ಆಗಿದೆ.ವಿಜಯನಗರ ಸಾಮ್ರಾಜ್ಯದ ಇರುವವರೆಗೂ ಅಚ೯ಕರಾಗಿದ್ದರು.ವಿಜಯನಗರ ಸಾಮ್ರಾಜ್ಯ ಪತನಾನಂತರ ಧಾರವಾಡದತ್ತ ವಲಸೆ ಬಂದರು.ವಲಸೆ ಬಂದ ಮೂಲಪುರುಷರು ಪಂಪಪ್ಪ,ಬಸಪ್ಪ,ಶಿವಪ್ಪ.

        ಧಾರವಾಡದಲ್ಲಿ ಮರಾಠಾ ಸಾಮ್ರಾಜ್ಯ ಆಡಳಿತವಿತ್ತು.ಛತ್ರಪತಿ ಶಿವಾಜಿ ಮುಂದೆ ವಿದ್ವತ್ ಪ್ರದಶಿ೯ಸಿದಾಗ ಮೂವರ ಪೂವ೯ಜರ ರಾಜನೀತಿ,ಧಾಮಿ೯ಕನೀತಿಯ ಹಿನ್ನಲೆ ಪಾಂಡಿತ್ಯ ಅರಿತು ತಲಾ ಐದು ಹಳ್ಳಿ ಇನಾಮು ಆಗಿ ನೀಡಿದನು.ಪಂಪಪ್ಪ ತಾನು ಭೋಗೇನಾಗರಕೊಪ್ಪ ಆಯ್ದುಕೊಂಡು ಶಿವಾಜಿ ಕಟ್ಟಿಸಿದ ವಾಡೆದಲ್ಲಿ ಆಡಳಿತ ನಡೆಸತೊಡಗಿದ.ಬಸಪ್ಪ ಜಮ್ಮಿಹಾಳವನ್ನು,ಶಿವಪ್ಪ ಹುಲ್ಲಂಬಿಯನ್ನು ಆಡಳಿತ ಕೇಂದ್ರ ಮಾಡಿಕೊಂಡರು.

    ಭೋಗೇನಾಗರಕೊಪ್ಪದ ಮೂಲಪುರುಷ ಪಂಪಪ್ಪ.ಇವನಿಗೆ ಇಬ್ಬರು ಮಕ್ಕಳು ಹಿರಿಯ ಶೇಷಪ್ಪ(ಶೇಷೋ)ಇವನದು ಮೇಲಿನ ಘರಾಣೆ.ಕಿರಿಯ ಶಿವರಾಯಪ್ಪ ಇವನದು ಕೆಳಗಿನ ಘರಾಣೆ.ಶೇಷೋಗೆ  ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ)ಮಗ.ಲಿಂಗೋನ ಆಡಳಿತಕ್ಕೆ ಬಂದಾಗ "ಲಿಂಗೋ ಶೇಷೋ ಘರಾಣೆ" ಎಂದು ಪ್ರಸಿದ್ಧವಾಯಿತು. ಇವನ ಮಕ್ಕಳು ಬಸವಂತ,ವಿರೂಪಾಕ್ಷ,ಕೃಷ್ಟರಾವ್,ರಾಮಚಂದ್ರ(ರಾಮಪ್ಪಜ್ಜ).
       ಹಿರಿಯ ಬಸವಂತನು ಕುದುರೆ ಸವಾರಿ,ಕುದುರೆ ಪಳಗಿಸುವುದರಲ್ಲಿ ಎತ್ತಿದ ಕೈ.ಬಸವಂತನ ಮಕ್ಕಳು ಇಬ್ಬರು ಅಣ್ಣಾಜಿ, ತಮ್ಮಾಜಿ.ಮರಾಠರ ಪ್ರಭಾವದಿಂದ ತಮ್ಮ ಹೆಸರಿನ ಮುಂದೆ "ಜೀ" ಎಂಬ ಗೌರವಸೂಚಕ ಹೆಸರಿನ ಮುಂದೆ ಇಟ್ಟುಕೊಂಡರು.ಅಣ್ಣಾಜಿಯು ಧಾಮಿ೯ಕ ಕಾಯ೯ಗಳಲ್ಲಿ ಆಸಕ್ತಿಯಿದ್ದನು.ಹೀಗಾಗಿ ಅವರ ಹೆಸರಲ್ಲಿಯೇ ಊರ ಶ್ರೀಮಾರುತಿ,ನಂದೀಶ್ವರ ದೇವಸ್ಥಾನದ ನಿವ೯ಹಣೆಗೆ ತಲಾ 2 ರೂ/- ವಷಾ೯ಶನ ನೀಡುತ್ತಿದ್ದರು.ಆ ಸನದು "ಅಣ್ಣಾಜಿ ಬಸವಂತ" ಹೆಸರಲ್ಲಿ ಇತ್ತು. ತಮ್ಮಾಜಿಯು ಪ್ರಖ್ಯಾತ ಕುಸ್ತಿಪಟುವಾಗಿದ್ದರು.ಆಗಲೇ ಭೋಗೇನಾಗರಕೊಪ್ಪ "ಪ್ರಸಿದ್ಧ ಪೈಲ್ವಾನರ ಊರು" ಎಂದು ಖ್ಯಾತವಾಗಿತ್ತು.
         ಅಣ್ಣಾಜಿಗೆ ಬಾಲಕೃಷ್ಣ, ರಂಗೋ ಮಕ್ಕಳಿದ್ದರು.ಹಿರಿಯ ಬಾಲಕೃಷ್ಣ ಊರಗೌಡರಿದ್ದರು.ಇವರು ಆಕಸ್ಮಿಕ ನಿಧನರಾದಾಗ ರಂಗೋ ಗೌಡರಾದರು.ರಂಗೋ ಅವರಿಗೆ ರಘುನಾಥ,ಗುರುನಾಥ,ಸುಭಾಸ್ಚಂದ್ರ ಎಂಬ ಮೂರು ಮಕ್ಕಳಿದ್ದಾರೆ.ರಘುನಾಥರಿಗೆ ದೀಪಕ,ಅಭಯ ಮಕ್ಕಳಿದ್ದಾರೆ.ಗುರುನಾಥರಿಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ.
      ತಮ್ಮಾಜಿ ಅವರಿಗೆ ದತ್ತಾತ್ರೇಯ,ಶಿವಾಜಿ,ಕೃಷ್ಣಾಜಿ ಮೂರು ಜನ ಮಕ್ಕಳು.ದತ್ತಾತ್ರೇಯ ಅವರಿಗೆ ಹನುಮಂತ, ರವಿ ಗಂಡುಮಕ್ಕಳಿದ್ದರು ಅವರು ಚಿಕ್ಕ ವಯಸ್ಸಿನಲ್ಲಿ ನಿಧನರಾಗಿದ್ದಾರೆ,ಮತ್ತು  ಐದುಜನ ಹೆಣ್ಣುಮಕ್ಕಳು ಇದ್ದಾರೆ.ಶಿವಾಜಿಗೆ ರಾಮಚಂದ್ರ ಮಗ.ರಾಮಚಂದ್ರ ಅವರಿಗೆ ಗಣೇಶ ಎಂಬ ಮಗನಿದ್ದಾನೆ.ಕೃಷ್ಣಾಜಿ ಅವರಿಗೆ ಆರು ಜನ ಗಂಡುಮಕ್ಕಳು.ಬಸವಂತರಾವ್,ಮಧುಸೂದನ,ಅಶೋಕ ವಸಂತ,ಅರುಣ,ಮೋಹನ.ಹಿರಿಯ ಬಸವಂತರಾವ್ ಅವಿವಾಹಿತರು.ಮಧುಸೂದನ ಅವರಿಗೆ ಹನುಮಂತ,ಗುರುರಾಜ ಗಂಡುಮಕ್ಜಳು.ಅಶೋಕ ಅವರಿಗೆ ಪವನ ಮಗ,ಪವನನಿಗೆ ಸಮಥ೯ ಮಗನಿದ್ದಾನೆ.ವಸಂತ ಅವರಿಗೆ ಚೈತನ್ಯ ಮಗ,ಚೇತನಾ ಮಗಳು ಇದ್ದಾರೆ.ಅರುಣರಿಗೆ ಕೃಷ್ಣ ಎನ್ನುವ ಮಗ.ಮೋಹನರಿಗೆ ನವೀನ,ಪುರುಷೋತ್ತಮ,ಭರತ ಮೂರು ಮಕ್ಕಳಿದ್ದಾರೆ.
      ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಎರಡನೇ ಮಗ ವಿರೂಪಾಕ್ಷ ಇವರಿಗೆ ಶಂಕರರಾವ್ ಮಗನಿದ್ದ.ಶಂಕರರಾವ್ ಗೆ ಹನುಮಂತ,ರಾಮಚಂದ್ರ,ಲಕ್ಷ್ಮಣ,ಶ್ರೀಪಾದ ಮಕ್ಕಳು.ಹನುಮಂತ ಅವರಿಗೆ ಇಬ್ಬರೂ ಹೆಣ್ಣುಮಕ್ಕಳು.ರಾಮಚಂದ್ರ ಅವರನ್ನು ಲಿಂಗೋ ಅವರ ಮೂರನೇ ಮಗ ಕೃಷ್ಟರಾವ್ ಅವರಿಗೆ ದತ್ತಕ ಹೋದರು.ಲಕ್ಷ್ಮಣ ಆಕಸ್ಮಿಕ ನಿಧನನಾದ.ಶ್ರೀಪಾದರಿಗೆ ಸದ್ಗುರು,ಸಮಥ೯ ಮಕ್ಕಳು.
      ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಮೂರನೇ ಮಗ ಕೃಷ್ಟರಾವ ಸೋದರನ ಮೊಮ್ಮಗ ರಾಮಚಂದ್ರ ಅವರನ್ನು ದತ್ತಕಮಗ ಮಾಡಿಕೊಂಡರು.ರಾಮಚಂದ್ರ ಅವರು ಅವಿವಾಹಿತ. ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಅವರ ಕೊನೆಯ ಮಗ ರಾಮಚಂದ್ರ(ರಾಮಪ್ಪಜ್ಜ) ಅವರಿಗೆ ಸಂತಾನವಿರಲಿಲ್ಲ.
      9ನೇ ತಲೆಮಾರಿನತ್ತ ಮುನ್ನುಗ್ಗುತ್ತಿರುವ   ಈ ವಂಶವೃಕ್ಷದಲ್ಲಿ ಬರೀ ಪುರುಷರಿಗೆ ಪ್ರಾಧಾನ್ಯತೆ ಇದೆ.ಆಗ ಪಿತೃಪ್ರಧಾನ ಕುಟುಂಬವಿತ್ತು.ಇದೇ ರೀತಿಯಾಗಿ ಮೇಲಿನಮನೆ ಘರಾಣೆಯಂತೆ ಕೆಳಗಿನಮನೆ ವಂಶಾವಳಿಯನ್ನು ಬರೆದಿಡಲಾಗಿದೆ.ಅವರಲ್ಲಿ ಪ್ರಮುಖರಾದವರು ವಿರೂಪಾಕ್ಚ.ಅನಂತರಾವ್.ದೇಸಾಯಿ.ಅವರು ದತ್ತಕಕಾಯ್ದೆ ವಿರುದ್ಧ ಬ್ರಿಟಿಷರ ವಿರುದ್ಧ ಹೋರಾಡಿದ್ದರು.ಮುಂದೆ ಗೋವಾವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದರು.ಇವರಿಗೆ ಸ್ವಾತಂತ್ರ್ಯಯೋಧರ ಪಿಂಚಣಿ ಬರುತ್ತಿತ್ತು.ಇನ್ನೋವ೯ರು ದೇಸಾಯಿ ದತ್ತಮೂತಿ೯.ಭೀಮರಾವ್. ಇವರು ಸಾಹಿತಿಗಳಾಗಿದ್ದರು.ದ.ರಾ.ಬೇಂದ್ರೆ ಆಪ್ತರಲ್ಲಿ ಒಬ್ಬರಾಗಿದ್ದರು.ಇವರು ಆಗ ಸುಲಲಿತವಾಗಿ ಆಂಗ್ಲ ಭಾಷೆ ಬರೆಯುವ,ಮಾತಾಡುವ ಪಾಂಡಿತ್ಯವಿತ್ತು.ಕೆಲ ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಆ ಕಾಲದಲ್ಲಿ ಶ್ರೇಷ್ಠ ಅನುವಾದಕರಾಗಿದ್ದಾರೆ.ಇವರು ಸಂಸ್ಕೃತದಲ್ಲಿ ಪಂಡಿತರು.ದೇಶಪ್ರೇಮ ಲೇಖನಗಳನ್ನು ಬರೆಯುತ್ತಿದ್ದರು.ಇವರ ಕಾವ್ಯಾಮ "ದೇವದತ್ತ"ಆಗಿತ್ತು.
      ಇವರ ವಾಡೆಗೆ ಹಂಪೆ ಗೋಪುರದ ಮುಖ್ಯ ಗೋಪುರ ನಿಮಾ೯ಪಕ ಬಿಷ್ಟಪ್ಪಯ್ಯ ಮಹಾಪುರುಷರು,ಸಮಥ೯ ರಾಮದಾಸ ಮುನಿಗಳು ಆಗಮಿಸಿ ಅಶೀವ೯ದಿಸಿದ್ದರು.ದೇಸಾಯರ ಸಂತಾನ ಸಮಸ್ಯೆ ಪರಿಹರಿಸಿ ನಂದೀಶ್ವರನನ್ನು ಪ್ರತಿಷ್ಟಾಪಿಸಿದರು.ಅದರಂತೆ ಭಕ್ತಿ-ಶಕ್ತಿಯ ದ್ಯೋತಕವಾಗಿ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಗರಡಿಮನೆಯ ಸ್ಥಾಪಿಸಿದ್ದು ಶ್ರೀ. ಸಮಥ೯ ರಾಮದಾಸರು.
   ಇಷ್ಟೆಲ್ಲಾವಿವರ ನೀಡಿದವರು ಮನೆತನದ ಹಿರಿಯರಾದ ಬಸವಂತರಾವ್.ಕೃಷ್ಣಾಜಿ.ದೇಶಕುಲಕಣಿ೯.
 
     -ಹನುಮಂತ.ಮ.ದೇಶಕುಲಕಣಿ೯
     ಸಾ.ಭೋಗೇನಾಗರಕೊಪ್ಪ-581196 

ಕಪ್ಪುಹಲಗೆ ಮತ್ತು ಚಳಿ ಬಗ್ಗೆ ಶಾಲಾದಿನಗಳು

ಚುಮುಚುಮು ಚಳಿಯಲಿ ಇಬ್ನನಿಯ ಮಬ್ಬಿನ ತೆರೆಯಲ್ಲಿ ಸಕ್ಕರೆ ನಿದ್ರೆ ಮಾಡುವುದೆಂದರೆ ಅದೆಂಥಾ ಮಧುರ ಅನುಭೂತಿ!ಆದರೇನು ಮಾಡುವುದು ಸವಿ ನಿದ್ದೆ ಬಂದ ದಿನವೇ ಬೇಗ ಏಳಬೇಕಾಗಿರುತ್ತದೆ.ಕಾರಣ ನಡೆಯದ,ಸಬೂಬು ನಂಬದ ಲೆಕ್ಚರರ್ ಕ್ಲಾಸಿಗೆ ಹಾಜರಾಗಲೇ ಬೇಕಾದ ಸಂಧಿಗ್ಧ ಸ್ಥಿತಿ! ಬೇರೇನೂ ಉಪಾಯ ನಡೆಯದೆ ಶಪಿಸುತ್ತ ಏಳುವುದು ವಿದ್ಯಾರ್ಥಿಗಳಿಗೆ ಬಿಡದ ಕಮ೯.
    ನಮ್ಮ ಪ್ರಾಥಮಿಕ ಶಾಲೆಯಲ್ಲಿ ಗುರುಗಳೊಬ್ಬರಿದ್ದರು.ಅವರ ಮೊದಲ ಗುರಿ ಏನೆಂದರೆ ಅದು ಶನಿವಾರ ಹಾಫಡೇ ಇದ್ಧದ್ದಕ್ಕೆ ಬೆಳಿಗ್ಗೆ ಬೇಗ ಹೋಗಬೇಕು. ತಡವಾಗಿ ಬಂದವರಿಗೆ ಪ್ರತ್ಯೇಕ ಸಾಲು ಮಾಡಲು ಹೇಳಿ ಅವರಗಾಗಿ ಸ್ವಾಗತ ಸಮಾರಂಭ ಇರುತ್ತಿತ್ತು, ಅದೇ "ಬಿಸಿ ಕಾಯ೯ಕ್ರಮ"  ಹೆಸರೇ ಹೇಳುವಂತೆ ಚಳಿ ಬಿಡಿಸುತ್ತಿದ್ದರು.
    ಚಡಿ ಚಂ ಚಂ ವಿದ್ಯೆ ಘಂ ಘಂ ಎನ್ನುವುದರ ಪ್ರಾತ್ಯಕ್ಷಿಕೆ ತೋರಿಸುತ್ತಿದ್ದರು.ನಮ್ಮ. ಕೈ ಅಂಗೈ ಕೆಂಪಾಗಿ ನಮ್ಮ ಮೈ ಚಳಿಗೆ ಡಾಕ್ಟರ್ ಇಂಜೆಕ್ಷನ್ ಕೊಟ್ಟಂತೆ ಅವರ ಕೋಲೇಟು ಇರುತ್ತಿದ್ದವು.!ಪ್ರಾಥ೯ನೆ ಮುಗಿದ ನಂತರ ಡ್ರೀಲ್ ಪಿರಿಯಡ್ಡನಲ್ಲಿ ಮೈಗಳ್ಳತನ ಮಾಡಿದರೆ ಮತ್ತೆ ಬಿಸಿ ಕಾಯ೯ಕ್ರಮ;ಲಾಠಿ ಝಳಪಿಸುತ್ತಿತ್ತು!ಮಾರನೆ ದಿನ ಭಾನುವಾರ, ಬಹಳ ಹೊತ್ತು ನಿದ್ದೆ ಮಾಡಬೇಕೆಂದು ಹಿಂದಿನ ದಿನ ನಿಶ್ಚಯಿಸಿದಂತೆ ಆಗದೇ ಭಾನುವಾರ ಬೇಗನೇ ಎಚ್ಚರವಾಗಿಬಿಡುತ್ತದೆ.ಅದು ತೀವ್ರ ನಿರಾಶೆಯಾಗಿ ಬಿಡುತ್ತದೆ(ಶನಿವಾರದ ನಿದ್ರೆಗೆ ಹೋಲಿಸಿದರೇ!)
     ಚಳಿಯಲ್ಲಿ ಹಿತವಿದೆ,ಚಳಿಯಲ್ಲಿ ಅವಣ೯ನೀಯ ಸುಖವಿದೆ.ತರಗತಿಯ ಹೊರಗಡೆ ನಿಂತು ಮಾಸ್ತರರು ಇಲ್ಲದಿದ್ದಾಗ ಎಳೆಬಿಸಿಲನ್ನು ಅಸ್ವಾದಿಸುವಾಗ ಹಿಂದಿನಿಂದ ಅವರು ಬಂದು ಚಳಿ ಬಿಡಿಸಿದ್ದು ಮರೆಯಲಾದೀತೆ!?.

ಶಹೀದ್ ಡೇ ಗೆ

ಇಂದಿಗೆ ಸರಿಯಾಗಿ 84 ವರ್ಷಗಳ ಹಿಂದೆ ಆ ಮೂವರೂ ಯುವಕರು “ಇನ್ಕಿಲಾಬ್ ಜಿಂದಾಬಾದ್, ಭಾರತ್ ಮಾತಾ ಕೀ ಜೈ, ವಂದೇ ಮಾತರಂ” ಎಂದು ಉಚ್ಛ ಕಂಠದಿಂದ ಘೋಷಿಸುತ್ತಾ, ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಂಡ ಈ ದಿನ.       23 ಮಾರ್ಚ್ 1931ಲಾಹೋರ್ ಸೆಂಟ್ರಲ್ ಜೈಲಿನ ಎದುರು ಸುಮಾರು 25 ಸಾವಿರಕ್ಕೂ ಮಿಕ್ಕಿದ ಜನಪ್ರವಾಹ. ಕ್ರಾಂತಿಕಾರಿಗಳಾದ ಭಗತ್‍ಸಿಂಗ್ ರಾಜಗುರು, ಸುಖದೇವ್‍ರಿಗೆ ಬ್ರಿಟೀಷ್ ಸರ್ಕಾರ ವಿಧಿಸಿದ್ದ ಫಾಸಿ ಶಿಕ್ಷೆಯನ್ನು ರದ್ದುಗೊಳಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. ಅದಕ್ಕಾಗಿಯೇ ಭಾರತ ದೇಶಾದ್ಯಂತ ತಿಂಗಳಿಂದಲೇ ಹರತಾಳ, ಮೆರವಣಿಗೆ, ರೈಲುತಡೆ, ಪ್ರತಿಭಟನೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಅಡ್ಡಿ, ಧರಣಿ, ಉಪವಾಸ ಸತ್ಯಾಗ್ರಹಗಳು ನಡೆಯುತ್ತಿದ್ದವು. ಇಡೀ ದೇಶ ಹೊತ್ತಿ ಉರಿಯುತ್ತಿತ್ತು. ಇತ್ತ ಬ್ರಿಟೀಷ್ ಸರ್ಕಾರ ಈ ಕ್ರಾಂತಿಕಾರಿಗಳು ಬದುಕಿದ್ದಷ್ಟು ದಿನ ನಾವು ನೆಮ್ಮದಿಯಿಂದ ಇರಲು ಆಗುವುದಿಲ್ಲವೆಂದರಿತು, ಆದಷ್ಟು ಶೀಘ್ರದಲ್ಲಿ ಶಿಕ್ಷೆಯನ್ನು ಜಾರಿಗೊಳಿಸಿಬಿಡಬೇಕೆಂದು ತೀರ್ಮಾನಿಸಿತು. ದೇಶಾದ್ಯಂತ ತಮ್ಮ ವಿರುದ್ಧ ಏಳುತ್ತಿದ್ದ ಪ್ರಬಲ ವಿರೋಧೀ ಅಲೆಯನ್ನು ನೋಡಿ ಅದುರಿಹೋದ ಬ್ರಿಟೀಷ್ ಸರ್ಕಾರ ಮಾರ್ಚ್ 24 ರಂದು ನೀಡಬೇಕಾಗಿದ್ದ ಗಲ್ಲು ಶಿಕ್ಷೆಯನ್ನು ಒಂದು ದಿನ ಮೊದಲೇ ಅಂದರೆ ಮಾರ್ಚ್ 23ನೇ ತಾರೀಖಿನಂದೇ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದಕ್ಕಾಗಿ ಸಕಲ ಸಿದ್ಧತೆಗಳೂ ನಡೆದು ಹೋದವು.
    ಕ್ರಾಂತಿಯ ಕಿಡಿಗಳುಭಗತ್‍ಸಿಂಗ್, ರಾಜಗುರು, ಸುಖದೇವ್. ಮೂವರೂ ಚಿಕ್ಕಂದಿನಲ್ಲೇ ದೇಶಸೇವೆಯ ಕಾರ್ಯಕ್ಕಿಳಿದವರು. ಕ್ರಾಂತಿಕಾರಿಗಳು ಮತ್ತು ಉಜ್ವಲ ದೇಶಭಕ್ತರು. ಸೈಮನ್ ಕಮಿಷನ್‍ನ ಭಾರತ ಭೇಟಿಯನ್ನು ವಿರೋಧಿಸಿ “ಸೈಮನ್ ಗೋ ಬ್ಯಾಕ್” ಎಂದು ಕೂಗುತ್ತಾ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಇವರನ್ನು ಬ್ರಿಟೀಷರು ಕ್ರೂರವಾಗಿ ನಡೆಸಿಕೊಂಡರು. ಇದೇ ಸಂದರ್ಭದಲ್ಲಿ ಭಗತ್‍ಸಿಂಗ್ ಮತ್ತು ಗೆಳೆಯರ ಗುರುಗಳಾದ ‘ಪಂಜಾಬಿನ ಕೇಸರಿ’ ಎಂದೇ ಖ್ಯಾತರಾದ ಲಾಲಾ ಲಜಪತರಾಯರನ್ನು ಬ್ರಿಟೀಷ್ ಅಧಿಕಾರಿ ಸ್ಯಾಂಡರ್ಸ್ ಲಾಠಿಯಿಂದ ಬಡಿದು ಕ್ರೂರವಾಗಿ ಕೊಂದುಹಾಕಿದ. ಅದಕ್ಕಾಗಿಯೇ ಮೂವರೂ ಸ್ಯಾಂಡರ್ಸ್‍ನನ್ನು ಪೋಲೀಸ್ ಠಾಣೆಯ ಎದುರೇ ಗುಂಡಿಟ್ಟು ಕೊಂದು ಸೇಡು ತೀರಿಸಿಕೊಂಡರು.
        ದೇಶಭಕ್ತರ ಮೈ ಮುಟ್ಟಿದವನನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸುವುದರ ಜೊತೆಗೆ ಮತ್ತು ಭಾರತೀಯರ ಸ್ವಾಭಿಮಾನ, ಘನತೆ ಗೌರವಗಳನ್ನು ಎತ್ತಿ ಹಿಡಿದರು. ಆಜಾದ್, ಬಿಸ್ಮಿಲ್, ಮುಂತಾದ ಶ್ರೇಷ್ಠ ಕ್ರಾಂತಿಕಾರಿಗಳ ಜೊತೆ ಸೇರಿ ಕಾಕೋರಿಯಲ್ಲಿ ಬ್ರಿಟೀಷರು ಹೊತ್ತೊಯ್ಯುತ್ತಿದ್ದ ಹಣವನ್ನು ಕ್ರಾಂತಿಕಾರ್ಯಕ್ಕಾಗಿ ದರೋಡೆ ಮಾಡಿದ್ದರು. ಭಗತ್‍ಸಿಂಗ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಯಾರಿಗೂ ಅಪಾಯವಾಗದ ರೀತಿಯಲ್ಲಿ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ ಮಾಡಿದ್ದ. ಇದರಿಂದಾಗಿ ಭಾರತೀಯರ ಸ್ವಾತಂತ್ರ್ಯದ ಕೂಗು ಇಡೀ ಪ್ರಪಂಚಕ್ಕೆ ಕೇಳಿಸಿತ್ತು. ಬ್ರಿಟೀಷ್ ನ್ಯಾಯಾಲಯ ಈ ಎಲ್ಲಾ ದೇಶಭಕ್ತಿಯ ಅಪರಾಧಗಳಿಗಾಗಿ ಈ ಮೂವರಿಗೂ ಮರಣದಂಡನೆಯನ್ನು ವಿಧಿಸಿತ್ತು. ಆದರೆ ಭಗತ್‍ಸಿಂಗ್ ತನ್ನ ವಿಚಾರಗಳನ್ನು ದೇಶವಾಸಿಗಳಿಗೆ ಮುಟ್ಟಿಸಲು ನ್ಯಾಯಾಲಯವನ್ನೇ ವೇದಿಕೆಯನ್ನಾಗಿ ಮಾಡಿಕೊಂಡಿದ್ದ.
       ಪತ್ರಿಕೆಗಳು ಇವನ ಮಾತುಗಳನ್ನು ಮುಖಪುಟದಲ್ಲಿ ಪ್ರಕಟಿಸತೊಡಗಿದವು. ಇದರಿಂದಾಗಿ ಲಕ್ಷಾಂತರ ಜನರು ಭಗತ್‍ಸಿಂಗ್‍ನನ್ನು ತಮ್ಮ ಆದರ್ಶನಾಯಕನಾಗಿ ಸ್ವೀಕರಿಸಿದರು. ಭಾರತ ಮಾತೆಯನ್ನು ಬಂಧಮುಕ್ತಗೊಳಿಸುವ ಸಲುವಾಗಿ ಸಾವಿರಾರು ಯುವಕ ಯುವತಿಯರು ಕ್ರಾಂತಿ ಕಾರ್ಯಕ್ಕೆ ಧುಮುಕಿದರು. ಆದ್ದರಿಂದಲೇ ಭಗತ್‍ಸಿಂಗ್, ರಾಜಗುರು, ಸುಖದೇವರಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಅಷ್ಟು ಜನ ಲಾಹೋರ್ ಸೆಂಟ್ರಲ್ ಜೈಲಿನ ಎದುರು ಜಮಾಯಿಸಿದ್ದರು.ಗುಂಡು ಹೊಡೆದು ಸಾಯಿಸಿಇತ್ತ ಜೈಲಿನ ಒಳಗೆ ಜೈಲರನು, ಶಿಕ್ಷೆಯು ಹಿಂದೂಡಲ್ಪಟ್ಟಿರುವ ವಿಷಯವನ್ನು ಮೂವರೂ ಕ್ರಾಂತಿಕಾರಿಗಳಿಗೂ ತಿಳಿಸಿದ. ಸಾಯಲು ಸಿದ್ಧರಾಗುವಂತೆ ಸೂಚಿಸಿದ. ಆ ಸಮಯದಲ್ಲೂ ಪುಸ್ತಕ ಓದುತ್ತಿದ್ದ ಭಗತ್‍ಸಿಂಗ್ ಬೇರೆ ಪ್ರಶ್ನೆಯನ್ನೂ ಕೇಳದೇ ನಗು ನಗುತ್ತಾ ಎದ್ದು ನಿಂತು ಫಾಸಿ ಶಿಕ್ಷೆಗೆ ತಯಾರಾಗಲು ಸೆಲ್‍ನಿಂದ ಹೊರಬಂದ. ಅವನನ್ನು ರಾಜಗುರು ಸುಖದೇವರು ಕೂಡಿಕೊಂಡರು. ಮೂವರ ಮುಖದಲ್ಲೂ ಅಪಾರ ಸಂತೋಷ. ಭಾರತ ಮಾತೆಯ ಅಡಿದಾವರೆಗಳಲ್ಲಿ ತಮ್ಮ ಪ್ರಾಣ ಪುಷ್ಪಗಳನ್ನು ಅರ್ಪಿಸಿ ಹುತಾತ್ಮರಾಗುವ ಈ ಸುಸಂದರ್ಭಕ್ಕಾಗಿ ಬಹುದಿನಗಳಿಂದ ಕಾಯುತ್ತಿದ್ದವರಂತೆ ಮೂವರು ನಿರ್ಭಯವಾಗಿ ನಿಂತಿದ್ದರು. ಸಾಯುವ ಘಳಿಗೆ ಹತ್ತಿರ ಬಂದಿತೆಂದು ಹೆದರಿ ಬೆಚ್ಚುವರೆಂದು ತಿಳಿದಿದ್ದ ಜೈಲರನಿಗೆ ಇದು ವಿಚಿತ್ರವೆನಿಸಿತು. ಸಾಯುವವರ ದೈರ್ಯವನ್ನು ನೋಡಿ ಜೈಲರನಿಗೇ ನಡುಕ ಹುಟ್ಟಿತ್ತು!ಜೈಲರನು ಮೂವರ ಹತ್ತಿರ ಬಂದು “ನಿಮ್ಮ ಕೊನೇ ಆಸೆ ಏನಾದರೂ ಇದ್ದರೆ ಹೇಳಿ” ಎಂದ. ಮೂವರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ನಸುನಕ್ಕು “ಜೈಲರ್ ಸಾಬ್, ನಮ್ಮ ಮೊದಲ ಆಸೆ ಕೊನೇ ಆಸೆ ಎರಡೂ ಒಂದೇ. ಅದು ನಮ್ಮ ತಾಯಿನಾಡಿಗೆ ಸ್ವಾತಂತ್ರ್ಯ ಕೊಡಿಸುವುದು” ಎಂದರು. ಆಗ ಜೈಲರನು “ನೋಡಿ ಅದು ನಮ್ಮ ಕೈಲಿಲ್ಲ. ಬೇರೆ ಏನಾದರೂ ಕೇಳಿ” ಎಂದನು. ಆಗ ಭಗತ್‍ಸಿಂಗ್ ಹೀಗೆಂದನು. “ಜೈಲರ್ ಸಾಬ್, ನಿಮ್ಮ ನ್ಯಾಯಾಲಯದ ಆದೇಶದ ಪ್ರಕಾರ ನಮ್ಮ ಮೇಲೆ ಯುದ್ಧ ಸಾರಿದ ಆರೋಪವಿದೆ. ಆದ್ದರಿಂದ ನಾವು ಯುದ್ಧ ಖೈದಿಗಳಾಗಿದ್ದೇವೆ. ನಮ್ಮನ್ನು ಯುದ್ಧ ಖೈದಿಗಳಂತೆ ನಡೆಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ನಮ್ಮನ್ನು ಯುದ್ಧ ಖೈದಿಗಳಂತೆ ಗುಂಡು ಹೊಡೆದು ಸಾಯಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ನಮ್ಮನ್ನು ನೇಣು ಹಾಕಬೇಡಿ ಗುಂಡು ಹೊಡೆದು ಸಾಯಿಸಿ. ನಾವು ಈಗಾಗಲೇ ಪಂಜಾಬ್ ಗವರ್ನರ್‍ಗೆ ಬರೆದಿರುವ ಪತ್ರದಲ್ಲಿ ನಮಗೆ ಗುಂಡು ಹೊಡೆದು ಸಾಯಿಸಲು ಸೈನ್ಯದ ತುಕಡಿಯೊಂದನ್ನು ಕಳುಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದೇವೆ” ಎಂದನು.
    ಅಬ್ಭಾ! ಸಾಯುವ ಕೊನೇ ಕ್ಷಣದಲ್ಲೂ ಎಂಥಾ ಧೈರ್ಯ! ಇಂಥಾ ಪರಿಸ್ಥಿತಿಯಲ್ಲೂ ಈ ಪರಿಯ ವೀರವಾಣಿ.ಅಸ್ಪೃಶ್ಯತೆ ಒಂದು ರಾಷ್ಟ್ರೀಯ ಕಳಂಕ ಜೈಲರ್ ಒಂದು ಕ್ಷಣ ಮೂಕವಿಸ್ಮಿತನಾದ. ಭಗತ್‍ಸಿಂಗ್ ಮತ್ತು ಸಂಗಡಿಗರ ಈ ಮಾತು ಕೇಳಿ ಜೈಲರನ ಗುಂಡಿಗೆಯೇ ಅದುರಿಹೋಗಿತ್ತು. ಅವನು ಇನ್ನೇನನ್ನಾದರೂ ಕೇಳುವಂತೆ ಮನವೊಲಿಸಲು ಪ್ರಯತ್ನಿಸಿದ. ಆಗ ಭಗತ್‍ಸಿಂಗ್ ತನ್ನ ತಾಯಿಯ ಕೈಯಿಂದ ಮಾಡಿದ ರೊಟ್ಟಿಯನ್ನು ತಿನ್ನಬೇಕೆಂಬ ಆಸೆಯನ್ನು ಹೇಳಿಕೊಂಡ. ಆಗ ಜೈಲರ್ “ನಿಮಗೆ ಕುಟುಂಬದವರನ್ನು ನೋಡುವ ಅವಕಾಶವನ್ನು ನಿರಾಕರಿಸಲಾಗಿದೆ. ಅಂದ ಮೇಲೆ ಅವರು ಮಾಡಿಕೊಟ್ಟ ರೊಟ್ಟಿಯನ್ನು ನೀನು ತಿನ್ನುವುದಾದರೂ ಹೇಗೆ?” ಎಂದು ಕೇಳಿದ. ಭಗತ್‍ಸಿಂಗ್ ನಸುನಗುತ್ತಾ “ಜೈಲರ್ ಸಾಬ್, ಅದು ನನಗೆ ಗೊತ್ತಿದೆ. ನಾನು ಹೇಳಿದ್ದು ನನ್ನ ಹೆತ್ತ ತಾಯಿಯ ಬಗ್ಗೆ ಅಲ್ಲ. ಈ ಜೈಲಿನ ಸಫಾಯಿ ಕರ್ಮಾಚಾರಿ ತೇಲೂರಾಮನ ಬಗ್ಗೆ. ಬಾಲ್ಯದಲ್ಲಿ ನನ್ನ ತಾಯಿ ಹೇಗೆ ನನ್ನ ಹೊಲಸನ್ನು ಸ್ವಚ್ಛಗೊಳಿಸುತ್ತಿದ್ದಳೋ ಅದೇ ರೀತಿ ಇಷ್ಟು ದಿನ ಈ ಜೈಲಿನಲ್ಲಿ ತೇಲೂರಾಮನೂ ಸ್ವಚ್ಛಗೊಳಿಸುತ್ತಿದ್ದಾನೆ. ಆದ್ದರಿಂದ ಈತ ನನ್ನ ತಾಯಿಯ ಸಮಾನ” ಎಂದು ಹೇಳಿ ತೇಲೂರಾಮ ಮಾಡಿಕೊಟ್ಟ ರೊಟ್ಟಿಯನ್ನು ಅತ್ಯಂತ ಪ್ರೀತಿಯಿಂದ ತಿಂದನು.ವಾಹ್..! ತನ್ನ ಕ್ರಾಂತಿ ಕಾರ್ಯದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಭಗತ್‍ಸಿಂಗ್, ಭಾರತದಲ್ಲಿ ಬೇರು ಬಿಟ್ಟಿದ್ದ ಅಸ್ಪøಶ್ಯತೆ, ಜಾತಿಪದ್ಧತಿಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಇತರರಿಗೆ ಎಂತಹಾ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ. ಭಗತ್‍ಸಿಂಗ್ ಸಾಮಾಜಿಕ ಸಮಾನತೆಯ ಬಗ್ಗೆ ಎಂಥಾ ದೂರದೃಷ್ಟಿ ಹೊಂದಿದ್ದನೆಂಬುದು ಈ ಘಟನೆಯಿಂದ ನಮಗೆ ತಿಳಿಯುತ್ತದೆ.ಜೈಲರನು ಮೂವರಿಗೂ ಸಾಯುವ ಮೊದಲು ಸ್ನಾನ ಮಾಡಿಕೊಂಡು ಬರುವಂತೆ ಸೂಚಿಸಿದ. ತಾಯಿ ಭಾರತಿಯ ಚರಣ ಕಮಲಗಳಿಗೆ ಅರ್ಪಿತವಾಗಲಿದ್ದ ತಮ್ಮ ದೇಹಕುಸುಮಗಳನ್ನು ಶುಭ್ರಗೊಳಿಸುವುದಕ್ಕಾಗಿ ಮೂವರೂ ಸ್ನಾನ ಗೃಹದತ್ತ ನಡೆದರು.
    ಸ್ನಾನವನ್ನು ಮುಗಿಸಿ ಶುಭ್ರವಾದ ಕಪ್ಪು ಬಟ್ಟೆಗಳನ್ನು ಧರಿಸಿದರು. ಮೂವರೂ ಕ್ರಾಂತಿಕಾರಿ ಗೆಳೆಯರು ಒಬ್ಬರನ್ನೊಬ್ಬರು ಅಪ್ಪಿಕೊಂಡರು. ನಂತರ ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿಕೊಂಡು, ಕ್ರಾಂತಿಕಾರಿ ರಾಮಪ್ರಸಾದ ಬಿಸ್ಮಿಲ್‍ರು ಬರೆದಿದ್ದ “ಮೇರಾ ರಂಗ್ ದೇ ಬಸಂತಿ ಚೋಲಾ” ಗೀತೆಯನ್ನು ಹಾಡುತ್ತಾ ಸಂತೋಷದಿಂದ ಬಲಿವೇದಿಕೆಯ ಕಡೆ ಧೀರೋದ್ಧಾತ್ತ ಹೆಜ್ಜೆ ಹಾಕತೊಡಗಿದರು. ಎಳ್ಳಷ್ಟು ಸಾವಿನ ಭಯವಿಲ್ಲದೇ ನೇಣುಗಂಬದತ್ತ ಸಾಗುತ್ತಿರುವ ಕ್ರಾಂತಿವೀರರನ್ನು ಕಂಡು ಬ್ರಿಟೀಷ್ ಅಧಿಕಾರಿಗಳಿಗೇ ಭಯವಾಗುತ್ತಿತ್ತು. ಇದನ್ನು ಗಮನಿಸಿದ ಭಗತ್‍ಸಿಂಗ್, ಅವರನ್ನು ಕುರಿತು “ನೀವು ಅದೃಷ್ಟವಂತರು” ಎಂದ. ಅಧಿಕಾರಿಗಳಿಗೆ ಗರಬಡಿದಂತಾಯಿತು.“ಸಾಯುವ ಕೊನೆ ಕ್ಷಣಗಳನ್ನು ಏಣಿಸುತ್ತಿರುವ ಈತ ನಮ್ಮ ಅದೃಷ್ಟದ ಬಗ್ಗೆ ಮಾತನಾಡುತ್ತಿದ್ದಾನಲ್ಲ!” ಎಂದು ಅಶ್ಚರ್ಯಪಟ್ಟರು. ಭಗತ್‍ಸಿಂಗ್ ಮುಂದುವರೆದು ಹೀಗೆ ಹೇಳಿದ. “ಅಧಿಕಾರಿಗಳೇ, ಜೈಲಿನ ಹೊರಗಡೆ ನಮಗಾಗಿ ಕಾಯುತ್ತಿರುವ ಸಹಸ್ರಾರು ಜನರಿದ್ದಾರೆ. ಹುತಾತ್ಮರಾಗಲಿರುವ ನಮ್ಮನ್ನು ನೋಡಿ ಕಣ್ತುಂಬಿಕೊಳ್ಳಲು ದೇಶಾದ್ಯಂತ ಕೋಟ್ಯಾಂತರ ಜನ ದೇಶಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರಾರಿಗೂ ಭಾರತದ ಈ ಕ್ರಾಂತಿಕಾರಿಗಳು ತಮ್ಮ ಘನ ಉದ್ದೇಶ ಪ್ರಾಪ್ತಿಗಾಗಿ ಸಾವನ್ನೂ ಕೂಡಾ ಅತ್ಯಂತ ಸಂತೋಷದಿಂದ ಬಿಗಿದಪ್ಪಿಕೊಳ್ಳುವುದನ್ನು ವೀಕ್ಷಿಸುವ ಭಾಗ್ಯವಿಲ್ಲ. ಅವರಿಗೆ ಇಲ್ಲದ ಭಾಗ್ಯ ನಿಮಗೆ ಮಾತ್ರ ಲಭಿಸಿದೆ. ಆದ್ದರಿಂದ ನೀವೇ ಭಾಗ್ಯವಂತರು” ಎಂದ. ಅಧಿಕಾರಿಗಳಿಗೆ ಬಾಯಿಂದ ಮಾತೇ ಹೊರಡಲಿಲ್ಲ.
     ಭಾರತ್ ಮಾತಾ ಕೀ ಜೈಮೂವರೂ ಕ್ರಾಂತಿಕಾರಿಗಳು ಲಗುಬಗೆಯಿಂದ ಬಲಿಗಂಬದ ಮೆಟ್ಟಿಲುಗಳನ್ನು ಹತ್ತಿದರು. ಭಗತ್ ಸಿಂಗ್ ಉಚ್ಛಕಂಠದಿಂದ ಘೋಷಿಸಿದ. “ಭಾರತ್ ಮಾತಾ ಕೀ ಜೈ”“ಭಾರತ್ ಮಾತಾ ಕೀ ಜೈ” ಏಕೆ?ಸರಿಯಾಗಿ 20 ದಿನಗಳ ಹಿಂದೆ ಭಗತ್‍ಸಿಂಗ್‍ನ ತಾಯಿ ವಿದ್ಯಾವತಿ ಅವನನ್ನು ಭೇಟಿ ಮಾಡುವ ಸಲುವಾಗಿ ಜೈಲಿಗೆ ಬಂದಿದ್ದರು. ಮಗನನ್ನು ಮದುವೆ ದಿಬ್ಬಣದಲ್ಲಿ ಮದುಮಗನಂತೆ ಕಣ್ತುಂಬ ನೋಡಿ ಆನಂದಿಸಬೇಕೆಂದುಕೊಂಡಿದ್ದ ಆ ತಾಯಿಗೆ ಬಲಿಗಂಬವನ್ನೇರಿ ಹುತಾತ್ಮನಾಗಲು ಹೊರಟ ಮಗನನ್ನು ನೋಡುವ ಸ್ಥಿತಿ ಬಂದಿತ್ತು. ಮಗನ ಮುಖವನ್ನು ನೋಡಿ ಕರುಳು ಕಿತ್ತು ಬಂದಂತಾಯಿತು. ಕಣ್ಣಿಂದ ಅಶ್ರುಧಾರೆ ಸುರಿಯಿತು. ಇದನ್ನು ನೋಡಿದ ಭಗತ್‍ಸಿಂಗ್‍ನಿಗೆ ಏನನ್ನಿಸಿತೋ. ತಾಯಿಗೆ ಒಂದು ಮಾತು ಕೇಳಿದ. “ಅಮ್ಮ. ದಯವಿಟ್ಟು ನನ್ನ ಒಂದು ಕೊನೆಯ ಆಸೆಯನ್ನು ನೆರವೇರಿಸಿಕೊಡುತ್ತೀಯಾ?” ತಾಯಿಗೆ ಕರುಳೇ ಬಾಯಿಗೆ ಬಂದಂತಾಯಿತು. ತಾನು ಸಾಯುವ ಹೊತ್ತಿನಲ್ಲಿ ಮಗನ ತೊಡೆಯ ಮೇಲೆ ತಲೆ ಇಟ್ಟು ಕೇಳಬೇಕೆಂದಿದ್ದ ಮಾತನ್ನು ಮಗನೇ ಕೇಳುತ್ತಿದ್ದಾನೆ. ಎಂಥಾ ವಿಪರ್ಯಾಸ. ಕೇವಲ 24ರ ಎಳೇ ಪ್ರಾಯದ ಮಗ ತಾಯಿಯ ಬಳಿ ತನ್ನ ಕೊನೆ ಆಸೆಯನ್ನು ನೆರವೇರಿಸಿಕೊಡುವಂತೆ ಕೇಳುತ್ತಿದ್ದ ಆ ದೃಶ್ಯವನ್ನು ನೋಡಿದ್ದರೆ ಎಂಥಾ ಕಟುಕನ ಕಣ್ಣಲ್ಲೂ ನೀರು ಬರುತ್ತಿತ್ತು.ನಿನ್ನ ಕಣ್ಣಿಂದ ಹನಿ ನೀರೂ ಬರಬಾರದುತಾಯಿ ಹೂಂ… ಎಂಬಂತೆ ತಲೆ ಆಡಿಸಿದಳು. ಮಾತನಾಡಲು ಆಕೆಯ ಬಳಿ ತ್ರಾಣವೇ ಉಳಿದಿರಲಿಲ್ಲ. ತನಗಿಂತಲೂ ಎತ್ತರ ಬೆಳೆದ ಮಗನನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಆಕೆಗೆ ಮೌನ ಮತ್ತು ಕಣ್ಣೀರು ಇವೆರಡನ್ನೂ ಬಿಟ್ಟರೆ ಬೇರೇನೂ ಉಳಿದಿರಲಿಲ್ಲ. ಭಗತ್‍ಸಿಂಗ್ ಮುಂದುವರೆದ, “ಅಮ್ಮಾ ನಿನ್ನ ಮಗ ಇಡೀ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ನಾನು ನಿನಗೆ ಮಾತು ಕೊಡುತ್ತಿದ್ದೇನೆ. ನಾನು ಗಲ್ಲಿಗೇರುವಾಗ ಖಂಡಿತಾ ನಗುನಗುತ್ತಿರುತ್ತೇನೆ. ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಆಂಗ್ಲರು ಖಂಡಿತ ನೋಡಲಾರರು. ಅದೇ ರೀತಿ ನನ್ನ ತಾಯಿಯೂ ತನ್ನ ಮಗನ ಸಾವಿನಿಂದ ಧೈರ್ಯಗೆಟ್ಟು ಕಣ್ಣೀರಿಡಬಾರದು. ಏಕೆಂದರೆ ಜನರ ಕಣ್ಣಲ್ಲಿ ನಿನ್ನ ಮಗ ಹುತಾತ್ಮ. ಒಂದು ವೇಳೆ ನೀನು ಕಣ್ಣೀರಿಟ್ಟರೆ ಬ್ರಿಟೀಷರು ಹೇಳುತ್ತಾರೆ “ನೋಡಿ ಭಗತ್‍ಸಿಂಗ್‍ನ ತಾಯಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದಾಳೆ” ಅಂತ. “ಅವರು ಹಾಗೆನ್ನುವುದು ನನಗೆ ಖಂಡಿತಾ ಇಷ್ಟವಿಲ್ಲವಮ್ಮಾ. ನಾನು ಸತ್ತಾಗ ನಿನ್ನ ಕಣ್ಣಿಂದ ಒಂದೇ ಒಂದು ಹನಿ ಕಣ್ಣೀರು ಬರಬಾರದು. ಇದೇ ನನ್ನ ಕೊನೆಯ ಆಸೆ. ನೆರವೇರಿಸಿಕೊಡುತ್ತೀಯ ಅಲ್ಲವೇನಮ್ಮಾ?”ಆ ತಾಯಿಗೆ ಕಣ್ಣೀರು ಬಿಟ್ಟು ಮತ್ತೇನೂ ಉಳಿದಿರಲಿಲ್ಲ. ಈಗ ಅದನ್ನೂ ಮಗ ಬೇಡವೆನ್ನುತ್ತಿದ್ದಾನೆ. ಆ ತಾಯಿ ಮಗನಿಗೆ ಹೀಗೆ ಹೇಳಿದಳು. “ಮಗೂ ಭಗತ್ ನಿನ್ನನ್ನು ನಾನು ಪುಟ್ಟ ಹುಡುಗ ಎಂದುಕೊಂಡುಬಿಟ್ಟಿದ್ದೆ. ಅದು ತಪ್ಪು. ನನ್ನ ಮಗ ತನ್ನ ಮಾತೃಭೂಮಿಯನ್ನು ಪರಕೀಯರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಳಿಸಲು ತನ್ನ ಪ್ರಾಣವನ್ನೇ ಅರ್ಪಿಸುತ್ತಿದ್ದಾನೆ. ಈ ಸಮಯದಲ್ಲಿ ನಾನು ಕಣ್ಣೀರು ಹಾಕಿ ಹುತಾತ್ಮನಾಗಲಿರುವ ಆ ಮಗನ ಗೌರವಕ್ಕೆ ಚ್ಯುತಿ ತರುವುದಿಲ್ಲ. ಆದರೆ ಮಗನೇ, ನಾನು ನಿನಗೆ ಮಾತು ಕೊಟ್ಟಂತೆ, ನೀನು ನನ್ನ ಒಂದು ಮಾತನ್ನು ನಡೆಸಿಕೊಡುತ್ತೀಯಾ? ಭಗತ್ ಹೂಂ.. ಎಂದು ತಲೆ ಆಡಿಸಿದ.ಆಕೆ ಬರೀ ಮಾತೆಯಲ್ಲ. ಭಾರತ ಮಾತೆ.ಇಡೀ ಪ್ರಪಂಚದ ಇತಿಹಾಸ ಕಂಡು ಕೇಳರಿಯದ ಅಭೂತಪೂರ್ವ ಘಟನೆ ಅಂದು ನಡೆಯಿತು. ಭಾರತದ ತಾಯಂದಿರ ಶ್ರೇಷ್ಠ ಪರಂಪರೆ ಅಂದು ಜಗತ್ತಿಗೆ ತಿಳಿಯಿತು. ಆ ತಾಯಿ ಕೇಳಿದಳು. “ಮಗೂ ಭಗತ್ ನಾಳೆ ನೀನು ಮತ್ತು ನಿನ್ನ ಸ್ನೇಹಿತರು ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಳ್ಳುವಾಗ ನಿನ್ನ ಬಾಯಿಂದ ಬರುವ ಕೊನೆಯ ಮಾತು ‘ಭಾರತ್ ಮಾತಾ ಕೀ ಜೈ’ ಆಗಿರಬೇಕು!!!”ಅಬ್ಭಾ! ಮಗನನ್ನು ಕಳೆದುಕೊಳ್ಳುವ ಅಂಥಾ ಸಂದರ್ಭದಲ್ಲೂ ಆ ತಾಯಿಯ ಬಾಯಲ್ಲಿ ಎಂಥಾ ದೇಶಪ್ರೇಮದ ಮಾತುಗಳು.
     ತಾಯಿಯ ಮಾತುಗಳನ್ನು ಭಗತ್ ಸಿಂಗ್ ಈಗ ನೆನಪಿಸಿಕೊಂಡಿದ್ದ. ಅದಕ್ಕಾಗಿಯೇ ಆತ ಸಾಯುವ ಆ ಕೊನೇ ಕ್ಷಣಗಳಲ್ಲಿ ದಿಕ್‍ತಟಗಳು ಅನುರಣಿತವಾಗುವಂತೆ ಘರ್ಜಿಸಿದ್ದ. “ಭಾರತ್ ಮಾತಾ ಕೀ ಜೈ” ಜೈಲಿನ ಹೊರಗಿದ್ದ ತಾಯಿಗೆ ಅದು ಭಗತ್ ಸಿಂಗ್ ಮತ್ತು ಗೆಳೆಯರ ಅಂತಿಮ ನುಡಿಗಳೆಂದು ಅರಿವಾಯಿತು. ಆ ತಾಯಿಯ ಕಣ್ಣುಗಳಲ್ಲಿ ನೀರು ಜಿನುಗಲಿಲ್ಲ. ಬದಲಾಗಿ ಮಗ ಹುತಾತ್ಮನಾಗುತ್ತಿದ್ದಾನೆಂಬ ಹೆಮ್ಮೆಯಿಂದ ತನ್ನೆಲ್ಲಾ ದುಃಖವನ್ನು ಒಳಗೇ ಅದುಮಿಟ್ಟುಕೊಂಡು ಬಿಟ್ಟಳು ಮಹಾತಾಯಿ.ಉರುಳನ್ನು ಚುಂಬಿಸಿದರು“ಇನ್ಕಿಲಾಬ್ ಜಿಂದಾಬಾದ್” ಸುಖದೇವ್ ಘೋಷಿಸಿದ. ರಾಜಗುರು ಉಚ್ಛ ಕಂಠದಿಂದ ಕೂಗಿದ. ಮೂವರು ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡರು. ಮತ್ತೊಮ್ಮೆ ಮೂವರೂ ಕೂಡಿ ಬ್ರಿಟೀಷ್ ಸಿಂಹಾಸನವೇ ಅದುರುವಂತೆ ಭಾರತ್ ಮಾತಾ ಕೀ ಜೈ ಮಂತ್ರವನ್ನು ಘೋಷಿಸಿದರು. ಜೈಲಿನ ಗೋಡೆಗಳು ಆ ಮಂತ್ರವನ್ನು ಪ್ರತಿಧ್ವನಿಸಿದವು. ಮಧ್ಯದಲ್ಲಿ ಭಗತ್‍ಸಿಂಗ್, ಎಡಗಡೆ ಸುಖದೇವ್, ಬಲಗಡೆ ರಾಜಗುರು ಬಲಿ ವೇದಿಕೆಯ ಮೇಲೆ ನಿಂತು ಹುತಾತ್ಮರಾಗಲು ಸಿದ್ಧರಾದರು. ಉರುಳನ್ನು ಚುಂಬಿಸಿ ತಾವೇ ತಮ್ಮ ಕೈಯ್ಯಾರೆ ಕೊರಳಿಗೆ ಹಾಕಿಕೊಂಡರು. ಅಧಿಕಾರಿಗಳಿಗೆ ನಿಮ್ಮ ಕರ್ತವ್ಯ ಮುಂದುವರೆಸಿ ಎಂಬಂತೆ ಸೂಚನೆ ನೀಡಿದರು. ಜೈಲು ಸಿಬ್ಬಂದಿಗಳು ತಮ್ಮ ಕೆಲಸ ಪ್ರಾರಂಭಿಸಿದರು. ಮೂವರ ಕೈಗಳನ್ನು ಹಗ್ಗದಿಂದ ಕಟ್ಟಿದರು. ಮುಖಕ್ಕೆ ಕಪ್ಪು ಮುಸುಕು ಹಾಕಿದರು. ಸಮಯ ಸಂಜೆ 7 ಗಂಟೆ 27 ನಿಮಿಷಗಳಾಗಿದ್ದವು. ಆ ಮೂವರು ಕ್ರಾಂತಿ ಸೋದರರು ನಿಂತಿದ್ದ ಬಲಿವೇದಿಕೆಯ ನೇಣು ಹಲಗೆ ‘ಕಟಕ್’ ಎಂದು ಶಬ್ಧ ಮಾಡಿ ಕೆಳಕ್ಕೆ ಕಳಚಿಕೊಂಡಿತ್ತು. ಮೂವರ ಪ್ರಾಣಪುಷ್ಪಗಳು ತಾಯಿ ಭಾರತಿಯ ಅಡಿದಾವರೆಗಳಲ್ಲಿ ಸೇರಿಹೋದವು.
    ನನಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ.ಭಗತ್ ಸಿಂಗನ ಸಾವಿನ ವಿಷಯ ತಿಳಿದ ತಾಯಿ ಮಗನಿಗೆ ಕೊಟ್ಟ ಮಾತಿನಂತೆ ಕಣ್ಣೀರು ಹಾಕಲಿಲ್ಲ. ಆ ತಾಯಿಗೆ ಯಾರೋ ಕೇಳಿದರು. ನಿನ್ನ ಮಗ ಸತ್ತು ಹೋದುದಕ್ಕೆ ನಿನಗೆ ದುಃಖವಾಗುತ್ತಿಲ್ಲವೇ? ಅಂತ. ಆ ತಾಯಿ ಹೇಳಿದಳು. “ನನ್ನ ಒಬ್ಬ ಮಗನನ್ನು ಬ್ರಿಟೀಷರು ನೇಣುಹಾಕಿ ಕೊಂದರು. ಮೈದುನ ಸರ್ದಾರ್ ಸ್ವರ್ಣಸಿಂಗ್‍ನನ್ನು ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಿದರು. ಇನ್ನೊಬ್ಬ ಮೈದುನ ಅಜಿತ್‍ಸಿಂಗ್‍ನನ್ನು ದೇಶದಿಂದಲೇ ಹೊರಹಾಕಿದರು. ಈಗ ಇನ್ನುಳಿದ ಇಬ್ಬರು ಮಕ್ಕಳನ್ನು ಕಾರಣವಿಲ್ಲದೇ ಜೈಲಿಗೆ ಹಾಕಿದ್ದಾರೆ. ಇವೆಲ್ಲವುಗಳಿಂದ ನಾನು ಹೆದರಿದ್ದೇನೆಂದು ಭಾವಿಸಿದ್ದರೆ ಅದು ಬ್ರಿಟೀಷರ ಮೂರ್ಖತನ. ನಾನು ಬ್ರಿಟೀಷ್ ಸಾಮ್ರಾಜ್ಯಕ್ಕೆ ಸವಾಲೆಸೆಯುತ್ತಿದ್ದೇನೆ. ನಾನಿಂದು ನನ್ನ ಉಳಿದ ಇಬ್ಬರು ಮಕ್ಕಳನ್ನೂ ದೇಶಕ್ಕಾಗಿ ಅರ್ಪಿಸುತ್ತಿದ್ದೇನೆ. ನಿಮಗೆ ಗುಂಡಿಗೆ ಇದ್ದರೆ ಅವರನ್ನು ಕರೆದೊಯ್ಯಿರಿ.”ಧನ್ಯ ಭಾರತ ಮಾತೆ ಧನ್ಯ. ಭಗತ್‍ಸಿಂಗ್ತಹ ಮಗನನ್ನು, ಇಂತಹಾ ವೀರ ಮಾತೆಯರನ್ನು ಪಡೆದ ತಾಯಿ ಭಾರತಿಯೇ ಧನ್ಯ.
    ಶವಗಳನ್ನೂ ಬಿಡದ ಪಾಪಿಗಳು ಗಲ್ಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಬ್ರಿಟೀಷರಿಗೆ ಈಗ ಹೊಸದೊಂದು ಹೆದರಿಕೆ ಶುರುವಾಗಿತ್ತು. ಭಗತ್ ಸಿಂಗ್, ರಾಜಗುರು, ಸುಖದೇವರು ಈಗಾಗಲೇ ದೇಶಾದ್ಯಂತ ಹೀರೋಗಳಾಗಿದ್ದರು. ಮೂವರು ಯುವಕರು ಸಾವಿನ ಕೊನೇ ಕ್ಷಣದಲ್ಲೂ ನಿರ್ಭಿತಿಯಿಂದ ನಗುನಗುತ್ತಾ ಪ್ರಾಣ ಅರ್ಪಿಸಿದರೆಂಬ ವಾರ್ತೆಯನ್ನು ಕೇಳಿದ ಯುವಕ ಯುವತಿಯರು ರೋಮಾಂಚನಗೊಂಡು ಬ್ರಿಟೀಷರ ವಿರುದ್ದ ಹೋರಾಡಲು ಪಣತೊಡುತ್ತಿದ್ದರು. ಹುತಾತ್ಮರ ಪಾರ್ಥೀವ ಶರೀರಗಳೇನಾದರೂ ಹೊರಗಿರುವ ಜನರಿಗೆ ಸಿಕ್ಕಿಬಿಟ್ಟರೆ ಅದರ ಸ್ಫೂರ್ತಿಯಿಂದಲೇ ಬ್ರಿಟೀಷರ ಸರ್ವನಾಶವಾದೀತೆಂದು ಹೆದರಿದ ಬ್ರಿಟೀಷ್ ಸರ್ಕಾರ, ಅವರ ಶವವನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಸುಟ್ಟುಹಾಕಿಬಿಡಲು ಆದೇಶಿಸಿತು. ಜೈಲು ಅಧಿಕಾರಿಗಳು ಮೂವರ ಶವಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿದರು. ಹಿಂದಿನ ಬಾಗಿಲ ಮೂಲಕ ಜೈಲಿನಿಂದ ಹೊರಕ್ಕೆ ಸಾಗಿಸಿದರು. ಟ್ರಕ್‍ವೊಂದಕ್ಕೆ ಆ ಚೀಲಗಳನ್ನು ತುಂಬಿಕೊಂಡು ಸಟ್ಲೇಜ್ ನದಿ ತೀರಕ್ಕೆ ಸಾಗಿಸಿದರು. ಅಲ್ಲಿ ಶವಗಳನ್ನು ಕೆಳಗಿಳಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ದೂರದಿಂದಲೇ ಬೆಂಕಿಯನ್ನು ನೋಡಿದ ಜನಕ್ಕೆ ವಿಷಯ ಅರ್ಥವಾಗಿಹೋಯಿತು. ಕೂಡಲೇ ಜನ ಸಾಗರೋಪಾದಿಯಲ್ಲಿ ಅಲ್ಲಿಗೆ ಧಾವಿಸತೊಡಗಿದರು. ಪಂಜು ಹಿಡಿದು ಪ್ರವಾಹದಂತೆ ಬರುತ್ತಿದ್ದ ಜನರನ್ನು ಕಂಡು ಅಧೀರರಾದ ಅಧಿಕಾರಿಗಳು ಅರ್ಧ ಬೆಂದ ಶವಗಳನ್ನು ಸಟ್ಲೇಜ್ ನದಿಯಲ್ಲಿ ಎಸೆದು ಪ್ರಾಣ ಉಳಿಸಿಕೊಳ್ಳಲು ಕತ್ತಲಲ್ಲಿ ಪರಾರಿಯಾದರು. ಇದನ್ನು ನೋಡಿದ ಜನರು ನದಿಗಿಳಿದು ಶವಗಳನ್ನು ಹುಡುಕಿ ತಂದರು. ಅಪಾರ ಗೌರವದಿಂದ ಪೂಜ್ಯಭಾವದಿಂದ ವಿಧಿವತ್ತಾಗಿ ಶವ ಸಂಸ್ಕಾರ ಮಾಡಿದರು.ಸತ್ತ ಮೇಲೂ ನನ್ನ ದೇಹದಿಂದ ಭೂಮಾತೆಯ ಸುವಾಸನೆ ಹೊರಹೊಮ್ಮುತ್ತದೆ.ಭಗತ್‍ಸಿಂಗ್ ಸಾಯುವ ಮುನ್ನ ಹೀಗೆ ಹೇಳಿದ್ದ. “ನನ್ನೊಬ್ಬನನ್ನು ಗಲ್ಲಿಗೆ ಹಾಕಿ ಈ ಬ್ರಿಟೀಷ್ ಸರ್ಕಾರ ಸಾದಿಸುವುದೇನೂ ಇಲ್ಲ. ಬದಲಾಗಿ ನನ್ನ ಬಲಿದಾನದಿಂದ ಈ ದೇಶದಲ್ಲಿ ಕ್ರಾಂತಿಕಾರ್ಯ ಬಹುಬೇಗ ವ್ಯಾಪಿಸಿಕೊಳ್ಳುತ್ತದೆ.  ಹಿಂದೂಸ್ಥಾನದ ತಾಯಂದಿರು ತಮ್ಮ ಒಡಲಲ್ಲಿ ಭಗತ್‍ಸಿಂಗ್ ನಂತಹಾ ಮಕ್ಕಳು ಜನಿಸಲಿ ಎಂದು ಬಯಸುತ್ತಾರೆ. ನಾನು ಸತ್ತ ಮೇಲೆ ನನ್ನ ದೇಹದಿಂದಲೂ ಭೂಮಾತೆಯ ಸುವಾಸನೆ ಹೊರಹೊಮ್ಮುತ್ತದೆ. ಸಾವಿರಾರು ಜನ ಭಗತ್‍ಸಿಂಗ್‍ರು ಆ ಸುಗಂಧದಿಂದ ಉದ್ಭವಿಸುತ್ತಾರೆ. ಬ್ರಿಟೀಷ್ ಸಿಂಹಾಸನವನ್ನು ಕಿತ್ತೊಗೆದು ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುತ್ತಾರೆ.”
    ಮುಂದೆ ಆ ಮಾತು ನಿಜವಾಯಿತು. ಭಗತ್‍ಸಿಂಗ್‍ನ ಆತ್ಮಾರ್ಪಣೆಯಿಂದ ಸ್ಫೂರ್ತಿಗೊಂಡ ಅನೇಕ ಯುವಕ ಯುವತಿಯರು ಸಾಗರೋಪಾದಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅಸೀಮ ಪರಿಶ್ರಮದ ಫಲವಾಗಿ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು.          
              (ಹವ್ಯಾಸಿ ಲೇಖಕರು)
   -ಹನುಮಂತ.ಮ.ದೇಶಕುಲಕಣಿ೯
   ಸಾ.ಭೋಗೇನಾಗರಕೊಪ್ಪ-581196
     ತಾ.ಕಲಘಟಗಿ ಜಿ.ಧಾರವಾಡ
     ಮೊ.ನಂ.9731741397


**ಪಾನ್ ಕಾರ್ಡ್**

"ಪಾನ್ ಕಾರ್ಡ್ ಎಂದರೇನು? ಹೇಗೆ ಪಡೆಯಬೇಕು? ಏತಕ್ಕೆ ಬೇಕು...??"

ಭಾರತದ ನಾಗರಿಕರಾಗಿರಲಿ ಅಥವಾ ಎನ್ ಆರ್ ಐಗೇ ಆಗಿರಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರವನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯಗತ್ಯ.
ಇಂದು ಅನೇಕ ಸಂದರ್ಭಗಳಲ್ಲಿ ಪಾನ್ ಕಾರ್ಡ್ ಅಗತ್ಯ ಬೀಳುತ್ತದೆ. ಕೇವಲ ಆದಾಯ ತೆರಿಗೆ ಪಾವತಿ ಒಂದೇ ಅಲ್ಲದೇ ಅನೇಕ ಉಪಯೋಗಗಳನ್ನು ಇದು ಹೊಂದಿದೆ. ಪಾನ್ ಕಾರ್ಡ್ ನ ಮೂಲಭೂತ ಅಂಶಗಳನ್ನು ಅರಿತುಕೊಳ್ಳಬೇಕಾದದ್ದು ಅಗತ್ಯ.

* ಪಾನ್ ಕಾರ್ಡ್ ಎಂದರೇನು?

ಭಾರತದ ಆದಾಯ ತೆರಿಗೆ ಇಲಾಖೆ ಕೊಡಮಾಡುವ 10 ಅಂಕೆಗಳ ಕಾರ್ಡ್ ಇದಾಗಿದ್ದು ಶಾಶ್ವತ ಖಾತೆ ನಂಬರ್ ಎಂದು ಕರೆಸಿಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ.
ಇದೊಂದು ಶಾಶ್ವತ ನಂಬರ್ ಆಗಿದ್ದು ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟುಮಾಡುವುದಿಲ್ಲ. ಅಲ್ಲದೇ ಇದನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯುನಿವರ್ಸ್ ಲ್ ಗುರುತಿನ ಚೀಟಿ ತರಹದಲ್ಲಿ ಕೆಲಸ ಮಾಡುತ್ತದೆ. ಆದಾಯ ತೆರಿಗೆ, ಹಣಕಾಸು ವ್ಯವಹಾರಗಳು ಈ ಖಾತೆ ಆಧಾರದಲ್ಲಿಯೇ ನಡೆಯುತ್ತದೆ. ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿರುತ್ತದೆ.

* ಸುಳ್ಳು ನಂಬಿಕೆಗಳು :

ಪಾನ್ ಕಾರ್ಡ್ ನ್ನು ಕೇವಲ ತೆರಿಗೆ ತುಂಬಲು ಬಳಸಲಾಗುತ್ತದೆ ಎಂದು ಹಲವರು ನಂಬಿಕೊಂಡಿದ್ದಾರೆ. ಇದನ್ನು ಹೊರತಾಗಿಯೂ ಪಾನ್ ಕಾರ್ಡ್ ನ್ನು ಹಲವು ಕಡೆ ಬಳಕೆ ಮಾಡಬಹುದು. ಬ್ಯಾಂಕ್ ಖಾತೆ ತೆರೆಯಲು, ಆಸ್ತಿ ಮತ್ತು ವಾಹನ ಮಾರಾಟ ಮತ್ತು ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವ ವೇಳೆ ಗುರುತಿನ ಪತ್ರವಾಗಿ ಬಳಕೆ ಮಾಡಬಹುದು.

* ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಯಾರೂ ಬೇಕಾದರೂ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆಯ ಪ್ರಶ್ನೆ ಎದುರಾಗುವುದಿಲ್ಲ. ಮೈನರ್ ಅಥವಾ ಮಗುವಿನ ಹೆಸರಲ್ಲಿ ಪಾನ್ ಕಾರ್ಡ್ ಮಾಡಿಸುವುದಾದರೆ ಪಾಲಕರ ರುಜು ಕಡ್ಡಾಯ.
ಆದಾಯ ತೆರಿಗೆ ಇಲಾಖೆ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಕೆಳಗಿನ ತಾಣಗಳು ಸಹ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೆರವಾಗುತ್ತವೆ.

o UTI PAN Card Application
o NSDL Application for PAN

ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣ ವನ್ನು ನೀಡಬೇಕಾಗುತ್ತದೆ.

* ಯಾವ ಗುರುತಿನ ದಾಖಲೆ ನೀಡಬಹುದು?

- ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
- ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ
- ಕ್ರೆಡಿಟ್ ಕಾರ್ಡ್
- ಬ್ಯಾಂಕ್ ಸ್ಟೇಟ್ ಮೆಂಟ್
- ರೇಶನ್ ಕಾರ್ಡ್
- ಚಾಲನಾ ಪರವಾನಗಿ
- ಮತದಾನ ಗುರುತಿನ ಚೀಟಿ
- ಪಾಸ್ ಪೋರ್ಟ್

* ಪಾನ್ ಕಾರ್ಡ್ ರಿಪ್ರಿಂಟ್ :

ನಿಮಗೆ ಪಾನ್ ಕಾರ್ಡ್ ಸಂಖ್ಯೆ ನೀಡಲಾಗಿದ್ದರೆ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಲು ಸಾಧ್ಯವಿದೆ. ಎನ್ ಎಸ್ ಡಿಎಲ್ ವೆಬ್ ಸೈಟ್ ಮೂಲಕ ಇದನ್ನು ಪರಿಶೀಲಿಸಬಹುದು.


* ಪಾನ್ ಕಾರ್ಡ್ ನ ಗುಣಲಕ್ಷಣಗಳೇನು?

ಪೊನೆಟಿಕ್ಸ್ ಸೌಂಡ್ ಆಧಾರದಲ್ಲಿ ಹೊಸ ಪಾನ್ ಕಾರ್ಡ್ ಗಳಮನ್ನು ನೀಡಲಾಗುತ್ತಿದೆ ಮತ್ತು ಅನೇಕ ಅಂಶಗಳ ದಾಖಲೆ ಇರುತ್ತದೆ.
ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ತಂದೆಯ ಹೆಸರನ್ನು ಒಳಗೊಂಡಿರುತ್ತದೆ. ಕಾರ್ಡ್ ನ ಬಲಬದಿಯಲ್ಲಿ ಪಾನ್ ಕಾರ್ಡ್ ನೀಡಿರುವ ದಿನಾಂಕವನ್ನು ತಿಳಿಸಲಾಗಿರುತ್ತದೆ.

10 ಇಂಗ್ಲಿಷ್ ಅಕ್ಷರಗಳು ಏನನ್ನು ಸೂಚಿಸುತ್ತವೆ?

1. ಮೊದಲ ಇಂಗ್ಲಿಷ್ 5 ಅಕ್ಷರಗಳನ್ನು ಕೋರ್ ಗುಂಪು ಎಂದು ಕರೆಯಬಹುದು.
2. ಕಾರ್ಡ್ ನ ಮೊದಲ ಮೂರು ಅಕ್ಷರಗಳು A ದಿಂದ Z ವರೆಗಿನ ಅಕ್ಷರಗಳಲ್ಲಿ ಯಾವುದು ಇರಬಹುದು.
3. ಕಾರ್ಡ್ ನ ನಾಲ್ಕನೇ ಅಕ್ಷರ ವಿವಿಧ ಸಂಗತಿಯನ್ನು ಸೂಚನೆ ಮಾಡುತ್ತದೆ.
C - ಕಂಪನಿ
P - ವ್ಯಕ್ತಿ
H - ಹಿಂದು ಅವಿಭಕ್ತ ಕುಟುಂಬ
F - ವಿಭಾಗ
A - ವ್ಯಕ್ತಿಗಳ ಗುಂಪು
T - ಟ್ರಸ್ಟ್
B - ವ್ಯಕ್ತಿಯ ಗುರುತು
L - ಸ್ಥಳೀಯ ಸಂಸ್ಥೆ
J - ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸ್ಪಡುವುದು.
G - ಸರ್ಕಾರ
AAACA- ಕಂಪನಿ, AAAHA-ಹಿಂದು ಅವಿಭಕ್ತ ಕುಟುಂಬ
4. ಐದನೇ ಅಕ್ಷರವು ಒಂದನೇ ಅಕ್ಷರದ ತದ್ರೂಪಾಗಿರುತ್ತದೆ.

* ಕೊನೆ ಮಾತು:

ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಸ್ವಲ್ಪ ಸಮಯವನ್ನು ಮೀಸಲಿಟ್ಟು ಕಾರ್ಡ್ ಮಾಡಿಕೊಂಡರೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
   

ಛಲಬಿಡದೇ ನಮ್ಮ ಸೈನಿಕರು

ಪಾಕಿಸ್ತಾನಿಗಳು ನಮ್ಮ ದೇಶಕ್ಕೆ ನುಗ್ಗೋಕೆ ಸಾಧ್ಯವಾಗೋ ಒಂದೇ ಒಂದು ಜಾಗ ಅಂದ್ರೆ ಸಿಯಾಚಿನ್. ನಮ್ಮ ಸೈನಿಕರು ಇವತ್ತು ಅಲ್ಲಿ ಕಾವಲು ನಿಂತು ನಮ್ಮನ್ನ ಕಾಪಾಡ್ತಿದಾರೆ. ಆದ್ರೆ ಸಿಯಾಚಿನ್ನಲ್ಲಿ ಕಾವಲು ಕಾಯೋದು ಅಷ್ಟು ಸುಲಭ ಅಲ್ಲ. ಯಾಕೆ ಅಷ್ಟು ಕಷ್ಟಾನಾ? ಕೆಳ್ಗಡೆ ಕೊಟ್ಟಿರೋದನ್ನ ಓದಿ. ಒಂದ್ ನಿಮಿಷ ಜೀವ ಡಗ್ ಅನ್ನತ್ತೆ. 

1. ಪ್ರಪಂಚದ ಅತೀ ಎತ್ತರದ, ಭಯಾನಕ ಯುದ್ಧ ಭೂಮಿ ಸಿಯಾಚಿನ್ 

ಹಿಮಾಯಲಯ ಪರ್ವತದ ಕಾರಾಕೋರಂ ಸಾಲಿನ ಪೂರ್ವದಲ್ಲಿರೋ ಸಿಯಾಚಿನ್ ಭಾರತ ಹಾಗು ಪಾಕಿಸ್ತಾನದ ಗಡಿ.(ಲೈನ್ ಆಫ್ ಕಂಟ್ರೋಲ್)

2. ನೆಲದಿಂದ 5400 ಮೀಟರ್ ಎತ್ತರದಲ್ಲಿದೆ

ಲಡಾಕ್ ಮತ್ತೆ ಕಾರ್ಗಿಲ್ಲಿಗಿಂತ ಎರಡರಷ್ಟು ಎತ್ತರ ಇದರದ್ದು. ಅಷ್ಟ್ ಎತ್ರದ ಜಾಗದ ಪರಿಸರಕ್ಕೆ ನಮ್ ದೇಹ ಅಡ್ಜಸ್ಟ್ ಆಗೋದು ಭಾಳ ಕಷ್ಟ. 

3. ವರ್ಷಕ್ಕೆ ಸುಮಾರು 36 ಅಡಿ ಹಿಮಪಾತ ಆಗತ್ತೆ

ಪ್ರಪಂಚದ ಅತೀದೊಡ್ಡ ಹಿಮಪಾತದ ಜಾಗ ಇದು.

4. ಇಲ್ಲಿ ಉಸಿರಾಡಕ್ಕೆ ಸಿಗೋದು ಬರೀ 10% ಆಮ್ಲಜನಕ

5. ಈ ಜಾಗದಲ್ಲಿ ನಮ್ಮ ಸೈನಿಕರು -50 ಇಂದ -60  ಡಿಗ್ರಿ ಚಳೀಲಿ ನಿಂತ್ಕೋತಾರೆ

ಇಂಥ ಭಯಾನಕ ಚಳೀಲಿ ನಮ್ ಸೈನಿಕರು ವರ್ಷಪೂರ್ತಿ ನಿಲ್ತಾರೆ. ಬೆಟ್ಟ ಹತ್ತೋರು ವಾತಾವರಣ ಚೆನ್ನಾಗಿದ್ರೆ ಮಾತ್ರ ಹತ್ತಕ್ಕೆ ಹೋಗೋದು. ಅದ್ಬಿಟ್ರೆ ನಮ್ ಸೈನಿಕರೇ ಅಲ್ಲಿ ಯಾವಾಗ್ಲೂ ಇರೋದು! 

6. ಎಷ್ಟೋ ಜನ ಸೈನಿಕರು ಚಳಿ ತಡ್ಯಕ್ಕಾಗ್ದೇ ಸತ್ತೋಗ್ತಾರೆ. ಬರಿಗೈಯಲ್ಲಿ ಕಬ್ಬಿಣ ಮುಟ್ಟುದ್ರೆ 15 ಸೆಕೆಂಡೊಳಗಡೆ ಕೈಬೆರಳು ಕಟ್ಟಾಗತ್ತೆ

ಅಪ್ಪಿತಪ್ಪಿ ಯಾಮಾರಿ ಗನ್ನಿನ ಟ್ರಿಗರನ್ನ ಬರಿಗಯ್ಯಲ್ಲಿ ಮುಟ್ಟುದ್ರೆ ಕೈಬೆರಳನ್ನೇ ಕಳ್ಕೋಬೇಕಾಗತ್ತೆ. ಆ ಚಳೀನ ನಮ್ ದೇಹಕ್ಕೆ ತಡ್ಕೊಳಕ್ಕಾಗಲ್ಲ.  

7. ಗನ್ನುಗಳನ್ನ ತಕ್ಷಣ ಕುದಿಯೋನೀರಲ್ಲಿ ತೊಳಿಬೇಕು ಇಲ್ಲ ಅಂದ್ರೆ ಗನ್ನು ಕಚ್ಕೊಳತ್ತೆ, ಹಾಳಾಗತ್ತೆ

8. 1984ಕ್ಕೂ ಮುಂಚೆ ಇಲ್ಲಿ ಯಾವ ಸೈನಿಕರೂ ಇರ್ಲಿಲ್ಲ

ಈಗ್ಲೂ ಸುತ್ತಮುತ್ತಲಿನ ಜಾಗದಲ್ಲಿ ಸೈನಿಕರನ್ನ ಇಟ್ಟು, ಇಲ್ಲಿಂದ ಸೈನಿಕರನ್ನ ತೆಗಿಯೋಣ ಅಂತ ಎರಡೂ ದೇಶಗಳು ಸುಮಾರ್ ಸಲ ಪ್ರಯತ್ನ ಪಟ್ರು ಆದ್ರೆ ಯಾಕೋ ಅದು ಸರಿಬರಲಿಲ್ಲ.

9. ಸಿಯಾಚಿನ್ನಲ್ಲಿ 80% ಸಮಯ ಸೈನಿಕರನ್ನ ತಯಾರಿ ಮಾಡಕ್ಕೇ ಬೇಕಾಗತ್ತಾದೆ

10. ತಾಜಾ ಆಹಾರ ನಮ್ಮ ಸೈನಿಕರಿಗೆ ಬರಿ ಕನಸು 

ನಮ್ಮ ಸೈನಿಕರಿಗೆ ಸೇಬು, ಕಿತ್ತಲೆಹಣ್ಣು ಇವೆಲ್ಲ ತಿನ್ನಕ್ಕೆ ಆಗಲ್ಲ. ಯಾಕಂದ್ರೆ ಆ ಚಳೀಗೆ ಈ ಹಣ್ಣು ಕ್ರಿಕೆಟ್ ಬಾಲಷ್ಟು ಗಟ್ಟಿ ಆಗ್ಬಿಡತ್ತೆ.

11. ಇಲ್ಲಿಗೆ ಊಟ ತಲುಪಿಸಕ್ಕೆ ಹೆಲಿಕಾಪ್ಟರ್ರಿಗೆ ಇರೋ ಸಮಯ ಕೇವಲ 20 - 30 ಸೆಕೆಂಡು

21,000 ಅಡಿ ಎತ್ತರಕ್ಕೆ ಹೋಗಿ ಊಟ ತಲುಪಿಸೋದು ಸಿಕ್ಕಾಪಟ್ಟೆ ಕಷ್ಟ. "ಚೀತಾ" ಅನ್ನೋ ಹೆಲಿಕಾಪ್ಟರನ್ನ ಇದಕ್ಕೆ ಅಂತಾನೆ ತಯಾರ್ ಮಾಡಿದಾರೆ. ವಾತಾವರಣ ಚೆನ್ನಾಗಿಲ್ಲ ಅಂದ್ರೆ ಅರ್ಧ ಊಟ ಹಿಮದ ಪಾಲಾಗಿರತ್ತೆ.

12. ಇವರಿಗೆ ಸ್ನಾನ ತಿಂಗಳಿಗೆ ಒಂದೇ ಸತಿ 

ಡಿ.ಆರ್.ಡಿ.ಓ ಕಟ್ಟಿರೋ ಸ್ಪೆಷಲ್ ಬಚ್ಚಲುಮನೆಲಿ ( ಇಲ್ಲ ಅಂದ್ರೆ ಚಳೀಗೆ ನಾವೇ ಐಸ್ ಆಗ್ಬಿಡ್ತೀವಿ ) ಇವರು ತಿಂಗಳಿಗೆ ಒಂದು ಸತಿ ಸ್ನಾನ ಮಾಡ್ತಾರೆ. 

13. ಇಲ್ಲಿರೋ ಸೈನಿಕರಿಗೆ ಸಾಕಷ್ಟು ಆರೋಗ್ಯ ತೊಂದ್ರೆ ಆಗತ್ತೆ

ಸರ್ಯಾಗಿ ನಿದ್ದೆ ಬರೋಲ್ಲ. ಸಿಕ್ಕಾಪಟ್ಟೆ ತೂಕ ಕಡಿಮೆ ಆಗೋದು, ಮಾತಾಡಕ್ಕಾಗಲ್ಲ, ಮರೆವು ಇದೆಲ್ಲಾ ತೊಂದ್ರೆಗಳು ಮುಕ್ಕಾಲುವಾಸಿ ಸೈನಿಕರಿಗೆ ಆಗತ್ತೆ.

14. ಕಳೆದ 30 ವರ್ಷದಲ್ಲಿ 846 ಸೈನಿಕರನ್ನ ಸಿಯಾಚಿನ್ನಲ್ಲಿ ಕಳ್ಕೊಂಡಿದೀವಿ

ಇಲ್ಲಿ ಕಾವಲು ಕಾಯಕ್ಕಿಂತ ಯುದ್ಧದಲ್ಲಿ ಗುದ್ದಾಡೋದು ಸುಲಭ. ಅದಕ್ಕೆ ಇವರ ಮರಣಗಳನ್ನು ವೀರಮರಣ ಅಂತ ಗೌರವಿಸಲಾಗಿದೆ.

ಇಷ್ಟೆಲ್ಲಾ ಕಷ್ಟ ಇದ್ರೂ, ಭಯ ಬೀಳಿಸೋ ಚಳಿ ಇದ್ರೂ, ದೇಶಕ್ಕಾಗಿ, ನಮಗಾಗಿ,
ಛಲಬಿಡದೇ ನಮ್ಮನ್ನ ಸೈನಿಕರು ಕಾಪಾಡ್ತಿದಾರೆ. ನಾವು ಪ್ರತಿರಾತ್ರಿ ನೆಮ್ಮದಿಯಿಂದ ಮಲುಗ್ತಾ ಇದೀವಿ ಅಂದ್ರೆ ಇದಕ್ಕೆ ನಿಜವಾದ ಕಾರಣ ನಮ್ಮ ಸೈನಿಕರು
ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
   

ಹಿಂದೂ_ಧರ್ಮ


ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದುದು. ಇದು ವಿಶ್ವದ ಮೂರನೇ ಅತಿ ದೊಡ್ಡ ಧರ್ಮ ಎಂದು ಪರಿಗಣಿಸಲ್ಪಡುತ್ತಿದೆ. ಇತರ ಧರ್ಮಗಳಂತೆ ಹಿಂದೂ ಧರ್ಮ ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಸಂಪ್ರದಾಯದವನ್ನು ಆಧರಿಸಿದ ಹೆಸರಾಗಿರದೆ, ಒಂದು ಸಮುದಾಯದ ಹೆಸರಾಗಿದೆ. ಸಿಂಧೂ ನದಿ ಬಯಲಿನಲ್ಲಿ ವಾಸಿಸುವ ಜನಸಮುದಾಯಕ್ಕೆ ಸಿಂಧೂ ಎಂದು, ಅದು ಕ್ರಮೇಣ ಭಾಷಾ ಸ್ಥಿತ್ಯಂತರಗಳಿಂದಾಗಿ ಹಿಂದೂವಾಗಿದೆ ಎನ್ನಲಾಗಿದೆ. ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲ.

ಹಿಂದೂ ಧರ್ಮವನ್ನು ‘ಸನಾತನ ಧರ್ಮ’ವೆಂದೂ ಕರೆಯುತ್ತಾರೆ. ‘ಸನಾತನ’ ಎಂದರೆ ಎಂದೂ ಅಳಿಯದ, ಚಿರಂತನ, ನಿರಂತರವಾದ ಎಂದರ್ಥ. ಹಿಂದೂ ಧರ್ಮದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳಿದ್ದು, ಪ್ರತಿಯೊಬ್ಬ ಹಿಂದೂ ತನ್ನ ಬದುಕಿನಲ್ಲಿ ಈ ನಾಲ್ಕು ಪುರುಷಾರ್ಥಗಳ ಸಿದ್ಧಿಯನ್ನು ಪಡೆದಾಗ ಮಾತ್ರ ಆತನ ಬದುಕು ಸಾರ್ಥಕ್ಯಗೊಳ್ಳಲು ಸಾಧ್ಯ ಎಂದು ಧರ್ಮಗ್ರಂಥಗಳು ಹೇಳುತ್ತವೆ.

ಹಿಂದೂ ಜ್ಞಾನಪರಂಪರೆಯಲ್ಲಿ ಶ್ರುತಿ ಮತ್ತು ಸ್ಮೃತಿಯೆಂಬ ಎರಡು ಅಭ್ಯಾಸಗಳಿದ್ದು, ಶ್ರುತಿಯು ಕೇಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದ್ದರೆ, ಸ್ಮೃತಿಯು ಕೇಳಿದ್ದನ್ನು ದಾಖಲಿಸುವುದಾಗಿದೆ. ಹಿಂದೂ ಧರ್ಮವು ಧಾರ್ಮಿಕ, ದಾರ್ಶನಿಕ ಮತ್ತು ತಾತ್ವಿಕ ಸಿದ್ಧಾಂತಗಳಿಂದ ರೂಪುಗೊಂಡಿದ್ದು, ಇದರ ಮೂಲಸಿದ್ಧಾಂತ ಕರ್ಮಸಿದ್ಧಾಂತವಾಗಿದೆ. ಇದಲ್ಲದೆ, ಕರ್ತೃ-ಕಾರಣ ಸಂಬಂಧ, ಮರುಜನ್ಮದ ಕುರಿತು ನಂಬಿಕೆ ಮತ್ತು ಹುಟ್ಟು ಸಾವುಗಳೆಂಬ ಆದಿ ಅಂತ್ಯಗಳನ್ನು ಒಳಗೊಂಡಿರುವ ಜೀವನಚಕ್ರ ಮುಂತಾದವು ಕೂಡ ಇದರಲ್ಲಿ ಸೇರಿದೆ. ಈ ಹಿಂದೂ ಧರ್ಮದಲ್ಲಿ ಆಸ್ತಿಕರು, ಆಜ್ಞೇಯತಾವಾದಿಗಳು, ನಾಸ್ತಿಕರು ಎಂದು ಹಲವು ಗುಂಪಿಗೆ ಸೇರಿದವರನ್ನು ಗುರುತಿಸಬಹುದಾದರೂ ಈಗಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕರನ್ನು ಕಾಣಬಹುದಾಗಿದೆ. (ಕುಂದಾಪ್ರ ಡಾಟ್ ಕಾಂ)

ಹಿಂದೂ ಧರ್ಮ. ನಿಮಗೆಷ್ಟು ತಿಳಿದಿದೆ?

ವೇದಗಳು (4)
ಋಗ್ವೇದ,  ಯಜುರ್ವೇದ, ಸಾಮವೇದ,  ಅಥರ್ವವೇದ.

ರಾಶಿಗಳು (12)
ಮೇಷ,  ವೃಷಭ, ಮಿಥುನ, ಕರ್ಕ, ಸಿಂಹ,  ಕನ್ಯಾ,  ತುಲಾ, ವೃಶ್ಚಿಕ, ಧನು, ಮಕರ,  ಕುಂಭ,  ಮೀನ.

ಋತುಗಳು (6) ಮಾಸ (12)
ವಸಂತ (ಚೈತ್ರ-ವೈಶಾಖ), ಗ್ರೀಷ್ಮ (ಜೇಷ್ಠ-ಆಷಾಢ), ವರ್ಷಾ (ಶ್ರಾವಣ-ಭಾದ್ರಪದ),ಶರದ (ಅಶ್ವಿನ-ಕಾರ್ತಿಕ), ಹೇಮಂತ (ಮಾರ್ಗಶಿರ-ಪೌಷ),  ಶಿಶಿರ (ಮಾಘ-ಫಾಲ್ಗುಣ).

ದಿಕ್ಕುಗಳು (10)
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ,  ಪಾತಾಳ.

ಸಂಸ್ಕಾರಗಳು (16)
ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ, ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ. (ಕುಂದಾಪ್ರ ಡಾಟ್ ಕಾಂ ನೋಡಿ)

ಸಪ್ತ ಋಷಿಗಳು (7)
ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ.

ಸಪ್ತಪರ್ವತಗಳು:
ಹಿಮಾಲಯ (ಉತ್ತರ ಭಾರತ), ಮಲಯ (ಕರ್ನಾಟಕ ಮತ್ತು ತಮಿಳನಾಡು), ಸಹ್ಯಾದ್ರೀ (ಮಹಾರಾಷ್ಟ್ರ), ಮಹೇಂದ್ರ (ಉಡಿಸಾ), ವಿಂಧ್ಯಾಚಲ (ಮಧ್ಯಪ್ರದೇಶ), ಅರವಲೀ (ರಾಜಸ್ಥಾನ), ರೈವತಕ (ಗಿರನಾರ-ಗುಜರಾತ)

ಜ್ಯೋತಿರ್ಲಿಂಗಗಳು (12)
ಸೋಮನಾಥ ನಾಗೇಶ (ಗುಜರಾಥ), ಮಲ್ಲಿಕಾರ್ಜುನ (ಆಂಧ್ರಪ್ರದೇಶ), ರಾಮೇಶ್ವರ (ತಮಿಳನಾಡು), ಮಹಾಕಾಲೇಶ್ವರ (ಉಜ್ಜೈನ), ಓಂಕಾರೇಶ್ವರ (ಮಧ್ಯಪ್ರದೇಶ) ಕೇದಾರನಾಥ (ಉತ್ತರಾಂಚಲ), ವಿಶ್ವನಾಥ (ಉತ್ತರ ಪ್ರದೇಶ), ಪರಳೀ ವೈಜನಾಥ, ತ್ರ್ಯಂಬಕೇಶ್ವರ ,
ಘೃಷ್ಣೇಶ್ವರ, ಭೀಮಾಶಂಕರ (ಎಲ್ಲ ಮಹಾರಾಷ್ಟ್ರ). (ಕುಂದಾಪ್ರ ಡಾಟ್ ಕಾಂ ನೋಡಿ)

ಪೀಠಗಳು (4)
ಶಾರದಾಪೀಠ (ದ್ವಾರಕಾ-ಗುಜರಾತ), ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ), ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ), ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)

ಚಾರಧಾಮಗಳು:
ಬದ್ರಿನಾಥ (ಉತ್ತರಾಂಚಲ), ರಾಮೇಶ್ವರಮ (ತಮಿಳನಾಡು), ದ್ವಾರಿಕಾ (ಗುಜರಾತ), ಜಗನ್ನಾಥಪುರೀ (ಉಡೀಸಾ).

ಸಪ್ತಪುರಿಗಳು:
ಅಯೋಧ್ಯಾ, ಮಥುರಾ, ಕಾಶಿ (ಎಲ್ಲ ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ), ಕಾಂಚೀಪುರಂ (ತಮಿಳನಾಡು), ಅವಂತಿಕಾ (ಉಜ್ಜೈನ – ಮ.ಪ್ರ.), ದ್ವಾರಿಕಾ (ಗುಜರಾಥ). (ಕುಂದಾಪ್ರ ಡಾಟ್ ಕಾಂ ನೋಡಿ)

ಚಾರಕುಂಭಗಳು:
ಹರಿದ್ವಾರ (ಉತ್ತರಖಂಡ), ಪ್ರಯಾಗ (ಉತ್ತ ಪ್ರದೇಶ), ಉಜ್ಜೈನ (ಮಧ್ಯ ಪ್ರದೇಶ), ನಾಶಿಕ(ಮಹಾರಾಷ್ಟ್ರ)

ಪವಿತ್ರ-ಸ್ಮರಣೀಯ ನದಿಗಳು :
ಗಂಗಾ, ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ, ಕೃಷ್ಣಾ , ಬ್ರಹ್ಮಪುತ್ರಾ.

ಅಷ್ಟ ಲಕ್ಷ್ಮೀಯರು:
ಆದಿಲಕ್ಷ್ಮೀ, ವಿದ್ಯಾಲಕ್ಷ್ಮೀ, ಸೌಭಾಗ್ಯಲಕ್ಷ್ಮೀ, ಅಮೃತಲಕ್ಷ್ಮೀ, ಕಾಮಲಕ್ಷ್ಮೀ, ಸತ್ಯಲಕ್ಷ್ಮೀ, ಭೋಗಲಕ್ಷ್ಮೀ, ಯೋಗಲಕ್ಷ್ಮೀ.

ಯುಗಗಳು(4)
ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ.

ಪುರುಷಾರ್ಥ (4)
ಧರ್ಮ , ಅರ್ಥ , ಕಾಮ , ಮೋಕ್ಷ.

ಪ್ರಕೃತಿಯ ಗುಣಗಳು (3)
ಸತ್ವ, ರಜ, ತಮ.

ನಕ್ಷತ್ರಗಳು (25)
ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮೇಘಾ, ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ, ಮೂಲ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಘನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದಾ, ಉತ್ತರಾಭಾದ್ರಪದಾ, ರೇವತೀ, ಅಭಿಜಿತ. (ಕುಂದಾಪ್ರ ಡಾಟ್ ಕಾಂ ನೋಡಿ)

ದಶಾವತಾರ (10)

ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
   

ನಿನ್ನ ಬೆಲೆ ಎಷ್ಟು ? & ಮೋಹ



ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " ನನ್ನ ಜೀವನದ ಬೆಲೆ ಏನು? "
ಎಂದು. 

ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು "ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ. 

ಆದರೆ ಅದನ್ನು ನೀನು ಮಾರಬಾರದು" ಎಂದು ಹೇಳಿದನಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು ? ' ಎಂದು ಕೇಳಿದನಂತೆ. 

ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.

ಮಾರುತ್ತೀಯಾ?" ಎಂದು ಕೇಳಿದನಂತೆ. 

ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ. 

ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.

ಇದಾದಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. 

ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ " ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ. 

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ. 

ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು. 

ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, ' ಇದನ್ನು ಮಾರುವುದಿಲ್ಲ ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. 

ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ. 

ನಾನು ನನ್ನ ಆಸ್ತಿಯನ್ನೆಲ್ಲಾ  
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. ......... 

ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ. 

ಆಗ ದೇವರು " ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.

ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು. 

ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ. 

ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ. 

ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ. 

ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ.

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು. 

ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " ಮಾನವ ಜನ್ಮ ಬಹು ಶ್ರೇಷ್ಠವಾದದ್ದು " ಎಂದು. 

ಹಾಗಾಗಿ ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.






ಮಾನವನ ಬದುಕೇ ಹೀಗೆ.
ಕಷ್ಟಪಟ್ಟು ದುಡಿದು
ಮಕ್ಕಳಿಗಾಗಿ ಸಂಪತ್ತು ಗಳಿಸಿ
ಕೊನೆಗೆ ಹಸಿವು ಹಸಿವು ಅಂತಾ
ಕೈಯಲ್ಲಿ ಸಂಪತ್ತನ್ನೆ ಹಿಡಿದು
ಅದೆಷ್ಟೋ ಜನ ಮರಣವನ್ನಪ್ಪಿದ್ದಾರೆ. 

ಅಂತಹ ಮೋಹದ ನಿಧಿಯ
ಕಥಾಹಂದರ ಓದಿ.

ಒಂದು ಯುರೋಪಿಯನ್‌ ಕಥೆ.

ಒಬ್ಬ ಮನುಷ್ಯ ಆಯುಷ್ಯದ ತುಂಬಾ ದುಡಿದು ಅಪಾರ ಸಂಪತ್ತು ಗಳಿಸಿದ್ದ. 
ಒಂದು ದೊಡ್ಡ ಮಹಡಿಯ ಮನೆಯ ಕಟ್ಟಿಸಿದ್ದ.
ಮನೆಯ ತುಂಬ ಬಂಧುಬಳಗವಿತ್ತು. ಯಾವುದಕ್ಕೇನೂ ಕೊರತೆಯಿರಲಿಲ್ಲ . 
ಈಗ ಆತನಿಗೆ 80 ವರ್ಷ ವಯಸ್ಸು.
ಈ ಮುದುಕ ತನ್ನ ಮನೆಯ ಕೆಳಗೊಂದು ನೆಲಮನೆಯ ಮಾಡಿಸಿದ್ದ.
ಅದರಲ್ಲಿ ತಾನು ಗಳಿಸಿದ್ದ ಸಂಪತ್ತನ್ನೆಲ್ಲ ಸಂಗ್ರಹಿಸಿ ಗುಪ್ತವಾಗಿಟ್ಟಿದ್ದ.
ಅದು ವಿಶೇಷವಾದ ಗಾಳಿ,ಬೆಳಕು ಇರಲಾದ ಕತ್ತಲೆಯ ಕೋಣೆ.

ಅಲ್ಲೊಂದು ಮೇಣದ ಬತ್ತಿ, ಕಡ್ಡಿ ಪೆಟ್ಟಿಗೆ ಇಟ್ಟಿದ್ದ.
ತನಗೆ ಸಂಪತ್ತನ್ನು ನೋಡುವ ಆಶೆಯಾದಾಗ ಯಾರಿಗೂ ಹೇಳದೆ ಒಬ್ಬನೇ ಬಂದು ನೋಡಿಕೊಂಡು ಹೋಗುತ್ತಿದ್ದ.

ಒಂದು ದಿನ ಮಧ್ಯರಾತ್ರಿ
ಮುದುಕನಿಗೆ ಎಚ್ಚರವಾಯಿತು.
ಮೋಹದ ನಿಧಿಯ ನೋಡುವ ಅಪೇಕ್ಷೆಯಾಯಿತು, ಎದ್ದ
ಮನೆಯವರೆಲ್ಲ ಮಲಗಿದ್ದಾರೆ.
ಮುದುಕ ನೆಲಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡ.
ದೀಪ ಬೆಳಗಿಸಿದ.
ಕಣ್ತುಂಬ ನಿಧಿಯ ನೋಡಿ ಸಂತಸಪಟ್ಟ. 
ಹಾಗೇ ಎಷ್ಟು ಹೊತ್ತು ನಿಧಿಯ ನೋಡುತ್ತ ಮೈಮರೆತು ಕುಳಿತಿದ್ದನೋ ಏನೋ ? 

ಈತನ ಜಡಸಿರಿಯನ್ನೆಲ್ಲ ಬೆಳಗುತ್ತಿದ್ದ ಏಕೈಕ ದೀಪ ನಂದುವ ಸಮಯವಾಯಿತು.
ಮೇಲೆದ್ದು ಬಾಗಿಲು ತೆಗೆಯಲು ಹೋದ. ಬಾಗಿಲು ತೆಗೆಯಲಿಲ್ಲ .
ಅದೇಕೋ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿತ್ತು.
ಮತ್ತೆ ಮತ್ತೆ ಪ್ರಯತ್ನಿಸಿದ.
ಮುದುಕನ ದುರಾಶೆಗೆ ಮೈ
ಸೋತು ಸಣ್ಣಾಗಿತ್ತು.

ಬಾಗಿಲು ತೆಗೆಯಲು ಶಕ್ತಿ ಸಾಲಲಿಲ್ಲ. 
ಮುದುಕ ಗಾಬರಿಯಾದ.
ಅಷ್ಟರಲ್ಲಿ ದೀಪವೂ ನಂದಿತು. ಮುದುಕನಿಗೆ ಜಗತ್ತೆಲ್ಲ ಈಗ ಶೂನ್ಯವಾಯಿತು.

ಸ್ವಲ್ಪ ಸಮಯದ ನಂತರ ಹೊರಗೆ ಬೆಳಕಾಗಿತ್ತು.
ಮುದುಕನ ಪಾಲಿಗೆ ಮಾತ್ರ ಕತ್ತಲೆ ಶಾಶ್ವತವಾಗಿತ್ತು.
ಮಕ್ಕಳು ಮೊಮ್ಮಕ್ಕಳೆಲ್ಲ ಎದ್ದರು.
ಮುದುಕ ಕಾಣಲಿಲ್ಲ.
ಮನೆಯೆಲ್ಲ ನೋಡಿದರು.
ಊರೆಲ್ಲ ಹುಡುಕಿದರು.
ಮುದುಕ ದೊರೆಯಲಿಲ್ಲ.
ಕಳೆದಿದ್ದರಲ್ಲವೆ ದೊರೆಯುವುದು.

ತಮ್ಮ ಮನೆಯ ಕೆಳಗೆಯೇ ನಶ್ವರ ಸಿರಿಯ ಮೋಹದಲ್ಲಿ ಮುಳುಗಿದ್ದ ಮುದುಕನನ್ನು ಅವರು ಕಾಣದೇ ಹೋದರು.
ದಿನಗಳೆದಂತೆ ಮನೆಯವರೆಲ್ಲ ಮುದುಕನನ್ನು

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
   
ಒಂದು ಸಲ ಅಣ್ಣ - ತಮ್ಮಂದಿಬ್ಬರು ಸಮುದ್ರ ತೀರದಲ್ಲಿ ಯಾವುದೋ ವಿಷಯಕ್ಕಾಗಿ ಜಗಳ ಆಡುತ್ತಿರುತ್ತಾರೆ. ಆಗ ಅಣ್ಣನು ತಮ್ಮನ ಕೆನ್ನೆಗೆ ಹೊಡೆದಾಗ ತಮ್ಮನು ಏನು ಹೇಳುವುದಿಲ್ಲ. ಬದಲಾಗಿ ಮರಳಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " ಇವತ್ತು ನನ್ನ ಅಣ್ಣ ನನ್ನ ಕೆನ್ನೆಗೆ ಹೊಡೆದ." 
ಮತ್ತೇ ಮಾರನೆಯ ದಿನ ಸ್ನಾನ ಮಾಡಲು ಸಮುದ್ರಕ್ಕೆ ಹೋದಾಗ ತಮ್ಮ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಹೋಗುತ್ತಿರುತ್ತಾನೆ. ಆಗ ಅಣ್ಣನು ತಮ್ಮನ ಪ್ರಾಣವನ್ನು ರಕ್ಷಿಸುತ್ತಾನೆ. ಆಮೇಲೆ ತಮ್ಮನು ಕಲ್ಲಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " ಇವತ್ತು ನನ್ನ ಅಣ್ಣ ನನ್ನ ಪ್ರಾಣವನ್ನು ರಕ್ಷಿಸಿದ."

ಅಣ್ಣ: ನಿನ್ನೆ ಹೊಡೆದಾಗ ಮರಳಿನ ಮೇಲೆ ಬರೆದೆ ಹಾಗೂ ಇವತ್ತು ಪ್ರಾಣ ಉಳಿಸಿದಾಗ ಕಲ್ಲಿನ ಮೇಲೆ ಬರೆದೆ ಈ ರೀತಿ ಯಾಕೆ?

ತಮ್ಮ:  ನಮಗೆ ಯಾರಾದರೂ ದುಃಖವನ್ನು ಕೊಟ್ಟರೆ ಅದನ್ನು ಮರಳಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಬಹು ಬೇಗನೆ ಅಳಿಸಿ ಹೋಗುತ್ತದೆ. ಆದರೆ ನಮಗೆ ಯಾರಾದರೂ ಒಳ್ಳೆಯದು ಮಾಡಿದರೆ ಅದನ್ನು ಕಲ್ಲಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಯಾವತ್ತು ಅಳಿಸಿ ಹೋಗುವುದಿಲ್ಲ. 

*ಒಳಾರ್ಥ: ನಮಗೆ ಏನಾದರೂ ಕೆಟ್ಟದ್ದು ಆದರೆ ಅದನ್ನು ಕೂಡಲೇ ಮರೆಯಬೇಕು, ಒಳ್ಳೆಯದು ಆದರೆ ಯಾವಾಗಲೂ ನೆನಪಿನಲ್ಲಿಡಬೇಕು.*

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
   

ದೇವಸ್ಥಾನದ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು…!

ಬಾಳೆಹಣ್ಣಿನ ಸಿಪ್ಪೆ, ತೆಂಗಿನಕಾಯಿ ಗೆರಟೆ, ಪ್ಲಾಸ್ಟಿಕ್ ಚೀಲ ಮತ್ತು ಆವರಣದೊಳಗೆ ಬಿದ್ದಿರುವ ಇತರ ಕಸಕಡ್ಡಿಗಳನ್ನು ಎತ್ತಿ ಕಸದಬುಟ್ಟಿಯಲ್ಲಿ ಹಾಕಿರಿ ಮತ್ತು ದೇವಸ್ಥಾನದ ಆವರಣವನ್ನು ಸದಾಕಾಲ ಸ್ವಚ್ಛವಾಗಿಡಿರಿ.ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ. ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿರುವಾಗ ಪರಸ್ಪರರೊಂದಿಗೆ ಹರಟೆ ಹೊಡೆಯದೇ ಸತತವಾಗಿ ನಾಮಜಪ ಮತ್ತು ಪ್ರಾರ್ಥನೆ ಮಾಡಿರಿ ಅಥವಾ ಸ್ತೋತ್ರ ಪಠಿಸುತ್ತಿರಿ. ದೇವಸ್ಥಾನದಲ್ಲಿ ಆದಷ್ಟು ಸೈಲೆಂಟ್ ಆಗಿರಿ… ದೇವಸ್ಥಾನದ ಆವರಣದಲ್ಲಿ ದೊಡ್ಡ ಸ್ವರದಲ್ಲಿ ಮಾತನಾಡುವುದು, ಚಲನಚಿತ್ರಗೀತೆಗಳನ್ನು ಆಲಿಸುವುದು, ಇಸ್ಪೀಟ್ ಆಡುವುದು ಮುಂತಾದ ಪ್ರವಾಸಕ್ಕೆ ಬಂದಂತೆ ಮಾಡುವ ಕೃತಿಗಳು ಹಾಗೂ ಧೂಮಪಾನ, ಮದ್ಯಪಾನ ಮುಂತಾದ ಅನುಚಿತ ಕೃತ್ಯಗಳನ್ನು ಮಾಡದಿರಿ. ದೇವಸ್ಥಾನವನ್ನು ಪ್ರವೇಶಿಸುವ ಮೊದಲು ಕಾಲುಗಳನ್ನು ತೊಳೆದುಕೊಳ್ಳಬೇಕು. ದೇವಸ್ಥಾನದ ಪ್ರಾಂಗಣದಿಂದ (ಆವರಣದಿಂದ) ಕಲಶಕ್ಕೆ ನಮಸ್ಕಾರ ಮಾಡಬೇಕು. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಬಲಗೈ ಬೆರಳುಗಳಿಂದ ಮೆಟ್ಟಿಲುಗಳನ್ನು ಸ್ಪರ್ಶಿಸಿ ನಮಸ್ಕಾರ ಮಾಡಬೇಕು. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಬಲಗೈ ಬೆರಳುಗಳಿಂದ ಮೆಟ್ಟಿಲುಗಳನ್ನು ಸ್ಪರ್ಶಿಸಿ ನಮಸ್ಕಾರ ಮಾಡಬೇಕು. ಘಂಟೆಯನ್ನು ಅತ್ಯಂತ ಮೆಲುಧ್ವನಿಯಲ್ಲಿ ‘ದೇವತೆಯನ್ನು ಜಾಗೃತಗೊಳಿಸುತ್ತಿದ್ದೇವೆ’ ಎಂಬ ಭಾವದಿಂದ ಬಾರಿಸಬೇಕು. ದೇವತೆಯ ಮೂರ್ತಿ ಮತ್ತು ಮೂರ್ತಿಯ ಎದುರಿನಲ್ಲಿರುವ ಆಮೆಯ (ಶಿವನ ದೇವಸ್ಥಾನದಲ್ಲಿ ನಂದಿಯ) ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ, ಮೂರ್ತಿಯ ಬದಿಯಲ್ಲಿ ನಿಂತುಕೊಂಡು ಕೈಗಳನ್ನು ಜೋಡಿಸಿ ನಮ್ರತೆಯಿಂದ ದರ್ಶನವನ್ನು ಪಡೆಯಬೇಕು. ಮೊದಲು ದೇವತೆಯ ಚರಣಗಳಲ್ಲಿ ದೃಷ್ಟಿಯನ್ನು ಇಟ್ಟು ಲೀನರಾಗಬೇಕು, ಅನಂತರ ದೇವತೆಯ ಎದೆಯ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು. ಕೊನೆಗೆ ದೇವತೆಯ ಕಣ್ಣುಗಳತ್ತ ನೋಡಿ ಅವರ ರೂಪವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು. ದೇವತೆಗೆ ಅರ್ಪಿಸುವ ವಸ್ತುಗಳನ್ನು (ಉದಾ. ಹೂವು) ದೇವತೆಯ ಮೈಮೇಲೆ ಎಸೆಯದೇ ಅವರ ಚರಣಗಳಲ್ಲಿ ಅರ್ಪಿಸಬೇಕು. ಮೂರ್ತಿಯು ದೂರದಲ್ಲಿದ್ದರೆ ಆ ವಸ್ತುಗಳನ್ನು ದೇವತೆಯ ಎದುರಿನಲ್ಲಿರುವ ತಟ್ಟೆಯಲ್ಲಿಡಬೇಕು. ಪ್ರದಕ್ಷಿಣೆಗಳನ್ನು ಎರಡೂ ಕೈಗಳನ್ನು ಜೋಡಿಸಿ ಭಾವಪೂರ್ಣವಾಗಿ ನಾಮಜಪ ಮಾಡುತ್ತಾ ಮಧ್ಯಮ ಗತಿಯಲ್ಲಿ ಹಾಕಬೇಕು. ದೇವರಿಗೆ ಸಮ ಸಂಖ್ಯೆಯಲ್ಲಿ (even numbers) ಮತ್ತು ದೇವಿಗೆ ವಿಷಮ ಸಂಖ್ಯೆಯಲ್ಲಿ (odd numbers) ಪ್ರದಕ್ಷಿಣೆಗಳನ್ನು ಹಾಕಬೇಕು. ದೇವಸ್ಥಾನದಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ನಾಮಜಪ ಮಾಡಬೇಕು. ಪ್ರಸಾದವನ್ನು ಆದಷ್ಟು ದೇವಸ್ಥಾನದಲ್ಲಿಯೇ ಕುಳಿತುಕೊಂಡು ಸೇವಿಸಬೇಕು.ಹಿಂದಿರುಗುವಾಗ ದೇವತೆಗೆ ನಮಸ್ಕರಿಸಿ ‘ನಿನ್ನ ಕೃಪಾದೃಷ್ಟಿ ಸದಾಕಾಲ ನನ್ನ ಮೇಲಿರಲಿ’, ಎಂದು ಪ್ರಾರ್ಥನೆ ಮಾಡಬೇಕು.ದೇವಸ್ಥಾನದಿಂದ ಹೊರಬರುವಾಗ ನಮ್ಮ ಬೆನ್ನು ದೇವತೆಯ ಕಡೆಗೆ ಆಗದಂತೆ ಕಾಳಜಿ ವಹಿಸಬೇಕು.ತೆಂಗಿನಕಾಯಿಯ ನೀರು, ಎಣ್ಣೆ, ಬೆಲ್ಲ, ಸಕ್ಕರೆಯಂತಹ ವಸ್ತುಗಳನ್ನು ಗರ್ಭಗುಡಿಯಲ್ಲಿ ಅಥವಾ ಸಭಾಮಂಟಪದಲ್ಲಿ ಸಿಂಪಡಿಸಬೇಡಿರಿ ಮತ್ತು ಸಿಂಪಡಿಸಿದ್ದರೆ ಒರೆಸಿ ತೆಗೆಯಿರಿ.ದೇವಸ್ಥಾನದ ಆವರಣದಲ್ಲಿ ಪಾದರಕ್ಷೆಗಳನ್ನು ಧರಿಸಬೇಡಿ ಹಾಗೆಯೇ ಈ ವಿಷಯದಲ್ಲಿ ಇತರರಿಗೂ ಪ್ರಬೋಧನೆ ಮಾಡಿರಿ.ಈ ಕೆಳಗಿನ ನಿಯಮಗಳನ್ನು ಪಾಲಿಸಿ ದೇವರ ಕೃಪೆಗೆ ಪಾತ್ರರಾಗಿ, ದೇವಸ್ಥಾನದ ಪಾವಿತ್ರ್ಯತೆ, ಸಾತ್ತ್ವಿಕತೆಯನ್ನು ಕಾಪಾಡಿ ಮತ್ತು ಹೆಚ್ಚು ಹೆಚ್ಚು ಲಾಭವನ್ನು ಪಡೆಯಿರಿ. ಹನುಮಂತ. ಮ. ದೇಶಕುಲಕಣಿ೯ ಸಾ||ಭೋಗೇನಾಗರಕೊಪ್ಪ. ಮೊ.9731741397 ಪೊ|| ಗಂಜೀಗಟ್ಟಿ-581196 ತಾ||ಕಲಘಟಗಿ ಜಿ||ಧಾರವಾಡ