ಭಾನುವಾರ, ಮಾರ್ಚ್ 29, 2020

ಪ್ರಾಯಶ್ಚಿತಕ್ಕೆ ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ ಪಠಿಸಿ: -ಹನುಮಂತ. ಮ.ದೇಶಕುಲಕರ್ಣಿ

ಪ್ರಾಯಶ್ಚಿತಕ್ಕೆ ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ ಪಠಿಸಿ:

  ‘ನ ಮಂತ್ರಂ ನೋ ಯಂತ್ರಂ, ತದಪಿ ಚ ನ ಜಾನೇ ಸ್ತುತಿ ಮಹೋ..’ ಎಂದು ಪ್ರಾರಂಭವಾಗುವ ದೇವಿ ಅಪರಾಧ ಕ್ಷಮಾಪಣಾ ಸ್ತುತಿಯನ್ನು ಪ್ರತಿನಿತ್ಯ ಪಠಿಸುವುದರಿಂದ ನಾವು ಅರಿವಿಲ್ಲದೇ ಮಾಡಿದ ಪಾಪ ಕೃತ್ಯಗಳು ಪರಿಹಾರವಾಗುವುದು.

  ತಪ್ಪು ಮಾಡುವುದು ಮಾನವ ಸಹಜ ಗುಣವಾದರೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಶ್ರೀ ಮದ್ ಜಗದ್ಗುರು  ಶಂಕರಾಚಾರ್ಯ ವಿರಚಿತ ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರವನ್ನು ಪಠಿಸಿ ಮಾಡಿದ ತಪ್ಪನ್ನು ಮನ್ನಿಸುವಂತೆ ಕೋರಿಕೊಂಡು ಪಾಪದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

  ‌ ಈ ಸ್ತೋತ್ರ ಹೇಳುವಾಗ ಅಕ್ಷರಗಳು, ಉಚ್ಛಾರಣೆ ತಪ್ಪಾಗದಂತೆ ಎಚ್ಚರ ವಹಿಸಬೇಕು. ಸ್ತೋತ್ರವನ್ನು ತಪ್ಪಾಗಿ ಉಚ್ಛರಿಸಿದರೆ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಜಾಗರೂಕತೆಯಿಂದ ಏಕತಾನತೆಯಿಂದ ಸ್ತೋತ್ರವನ್ನು ನಿತ್ಯವೂ ಪಠಿಸುತ್ತಿದ್ದರೆ ಉತ್ತಮ ಫಲ ದೊರಕುವುದು.

-ಹನುಮಂತ. ಮ.ದೇಶಕುಲಕರ್ಣಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ