ಹಾಲು , ಮೊಸರು , ತುಪ್ಪ , ಜೇನುತುಪ್ಪ ,
ಸಕ್ಕರೆ , ಬಾಳೆಹಣ್ಣು , ಎಳನೀರು , ನೀರು
ಮುಂತಾದ ವಸ್ತುಗಳಿಂದ ದೇವರ ವಿಗ್ರಹಕ್ಕೆ
ಅಭಿಷೇಕವನ್ನು ಮಾಡುತ್ತೇವೆ..
ತದನಂತರ ತೀರ್ಥವೆಂದು ಸೇವಿಸುತ್ತೇವೆ..
ಇದಕ್ಕೆ ಪಂಚಾಮೃತವೆಂದೂ ಕರೆಯುತ್ತಾರೆ..
ಪಂಚಾಮೃತ:
ಬಾಳೆಹಣ್ಣು ಹಾಗೂ ಎಳನೀರಿನಲ್ಲಿ ಇರುವ
ಪೊಟ್ಯಾಶಿಯಂ ಹೃದಯ ಸಂಬಂಧಿ ಖಾಯಿಲೆಗಳು
ಬರದಂತೇ ತಡೆಯುತ್ತದೆ.
ಅಭಿಷೇಕವನ್ನು ಸಾಮಾನ್ಯವಾಗಿ ಸಾಲಿಗ್ರಾಮ ,
ಶಿವಲಿಂಗ ಅಥವಾ ಕಂಚು , ತಾಮ್ರ ,
ಕಬ್ಬಿಣ , ಚಿನ್ನ ಮುಂತಾದ ಪಂಚಲೋಹಗಳಿಂದ ಮಾಡಿದ ವಿಗ್ರಹಗಳ ಮೇಲೆ ಮಾಡುತ್ತಾರೆ..
ಇವುಗಳಲ್ಲಿರುವ ಔಷಧೀಯ
ಗುಣಗಳು ನೀರಿನೊಂದಿಗೆ ಸೇರುತ್ತವೆ..ಶುದ್ಧ ಸಾಲಿಗ್ರಾಮ ಹಾಗೂ ಶಿವಲಿಂಗಗಳು
ಸಿಗುವುದು ಗಂಡಕಿ ಹಾಗೂ ನರ್ಮದಾ
ನದಿಗಳಲ್ಲಿ..ಈ ನದಿಗಳ ನೀರಿನಲ್ಲಿ ಸಿಲಿಕಾ ಹಾಗೂ
ಕ್ಯಾಲ್ಸಿಯಂ ಅಂಶಗಳು ಜಾಸ್ತಿಯಾಗಿವೆ..
ಸಾಲಿಗ್ರಾಮ , ಶಿವಲಿಂಗಗಳ ಅಭಿಷೇಕದ ನೀರೂ ಸಹ ಈ ಅಂಶಗಳನ್ನು ಒಳಗೊಂಡಿರುತ್ತದೆ..ಇದು ದೃಷ್ಟಿ ಸಂಬಂಧಿ ನರಗಳ ಬಲವನ್ನು ಹೆಚ್ಚಿಸುತ್ತದೆಂದು ಸಾಬೀತಾಗಿದೆ..
ಇದೇ ಕಾರಣದಿಂದ ಅಭಿಷೇಕವಾದ
ನಂತರ ಸಾಲಿಗ್ರಾಮ ಅಥವಾ ಶಿವಲಿಂಗವನ್ನು
ಕಣ್ಣುಗಳಿಗೆ ತಾಗಿಸಿ ನಮಸ್ಕರಿಸುತ್ತೇವೆ..ಇನ್ನು , ಪಂಚಲೋಹಗಳಿಗಂತೂ ನಮ್ಮಪೂರ್ವಜರು ಬಹಳ ಮಹತ್ವ ನೀಡಿದ್ದರು.
ಬೆಳ್ಳಿಯ ತಟ್ಟೆಗಳಲ್ಲಿ ಆಹಾರವನ್ನು ಸೇವಿಸುತ್ತಿದ್ದರು.ತಾಮ್ರದ ಪಾತ್ರೆಗಳಲ್ಲಿ ನೀರನ್ನುಸಂಗ್ರಹಿಸಿ ಕುಡಿಯುತ್ತಿದ್ದರು..
ಲೋಹಗಳಲ್ಲಿ ವಿಶೇಷವಾದ ಶಕ್ತಿಯೆದೆಯೆಂದು
ತಿಳಿದಿದ್ದರು.ಅವುಗಳ ಮೂಲಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆಂದು ಅವರು ಅರಿತಿದ್ದರು.
ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ