ಸ್ವದೇಶಿ ಚಳುವಳಿಯ ನೇತಾರ ರಾಜೀವ್ ದೀಕ್ಷಿತರ ನೆನಪು ನನಗೆ ಸದಾ ಹಸಿರು. ಅದಕ್ಕೆ ಕಾರಣವೂ ಇದೆ ಆ ನೇತಾರನ ಜನುಮದಿನ ಮತ್ತು ನಿಧನದ ದಿನ ಒಂದೇ ಆಗಿದ್ದು ನೆನಪಿಟ್ಟುಕೊಳ್ಳಲು ಸುಲಭವಾದರೂ ನನ್ನ ಜನುಮದಿನವೂ ನವೆಂಬರ್ 30 ಆಗಿದೆ.ರಾಜೀವ್ ದೀಕ್ಷಿತರು 30.11.1967ದಲ್ಲಿ ಜನಿಸಿದರು
ಸ್ವದೇಶಿ ವಸ್ತುಗಳ ಬಳಕೆ ಮತ್ತು ದೇಶೀಯ ಸಂಸ್ಕೃತಿಯ ಬಗ್ಗೆ ಎಲ್ಲರಿಗೂ ವಿವರಿಸಿದರು. ವಿದೇಶೀ ವಸ್ತುಗಳ ಬಳಕೆಯಿಂದ ಭಾರತದಿಂದ ಅಪಾರ ಪ್ರಮಾಣದ ಹಣ ಪೋಲು ಆಗುತ್ತದೆ.ಸ್ವದೇಶಿ ಕೈಗಾರಿಕೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಮತ್ತು ಎರಡನೇ ಸಲ ಭಾರತ ಪರೋಕ್ಷವಾಗಿ ಗುಲಾಮರಾದಂತೆ ಎಂದು ಸ್ವಾವಲಂಬನೆಯ ಕೆಚ್ಚನ್ನು ಹೊತ್ತಿಸಿದರು.ಬಹುರಾಷ್ಟ್ರೀಯ ಕಂಪನಿ ಭಾರತದಲ್ಲಿ ಹೆಚ್ಚುತ್ತಿರುವುದನ್ನು ಖಂಡಿಸಿದರು.
ರಾಜೀವ್ ದೀಕ್ಷಿತರು ಹಳ್ಳಿಯೊಂದರಲ್ಲಿ ಜನಿಸಿದರೂ ಸ್ವಪ್ರತಿಭೆಯಿಂದ ಸಿ.ಎಸ್.ಐ.ಆರ್.ನಲ್ಲಿ ವಿಜ್ಞಾನಿಯಾದರು.ಸಾಕಷ್ಟು ಸಂಬಳ ಪಡೆಯುವ ವೃತ್ತಿಯನ್ನು ತ್ಯಜಿಸಿ ತಮ್ಮ ಗುರುಗಳ ಸಲಹೆಯಂತೆ ರಾಷ್ಟ್ರದ ಸೇವೆಗೆ ತಮ್ಮನ್ನು ತಾವು ಸಮಪಿ೯ಸಿಕೊಂಡರು.ಅವರು ತಮ್ಮ ಪ್ರಖರ ಮಾತು-ವಾದಗಳಿಂದ ಪ್ರಸಿದ್ಧರಾದರು."ಮೇರಾ ಭಾರತ ಮಹಾನ್" ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. 'ಅಜಾದಿ ಬಚಾವ್ ' ಆಂದೋಲನದ ಹರಿಕಾರರಾಗಿ ಯುವಕರಿಗೆ ಸ್ಫೂರ್ತಿ ತುಂಬಿದರು.
ಅಥ೯ವ್ಯವಸ್ಥೆ ಉತ್ತಮಗೊಳ್ಳಲು ಪ್ರತಿಯೊಬ್ಬರು ಸ್ವದೇಶಿ ಉತ್ಪನ್ನ ಬಳಸಲು ಕರೆ ನೀಡಿದರು. ವಿದೇಶಿ ಕಂಪನಿಯ ರಾಸಾಯನಿಕ ವಿಷಮಿಶ್ರಿತ ಕೀಟನಾಶಕ ಬಳಸದೆ ಸಾವಯವ ಕೃಷಿ ಮಾಡಿ ಭೂಮಿ ಬಂಜರುಗೊಳಿಸಬೇಡಿ ಎಂದರು.ಗೋವಿನ ಬಗ್ಗೆ ವಿಶೇಷ ಹೋರಾಟ ಮಾಡಿದರು."ಹಸು ಎಂದಿಗೂ ಹೊಗೆ ಉಗುಳುವುದಿಲ್ಲ, ಟ್ರ್ಯಾಕ್ಟರ್ ಎಂದಿಗೂ ಸಗಣಿ ಹಾಕುವುದಿಲ್ಲ".ಅವರ ಜನಪ್ರಿಯ ಘೋಷಣೆ.
ಸ್ವದೇಶಿ ಬಗ್ಗೆ ಮಾತಾಡುವಾಗ ಇವರ ಹೆಸರು ಮೊದಲು ಚಚೆ೯ಗೆ ಬರುತ್ತದೆ.ಅವಿವಾಹಿತರಾಗಿ ಉಳಿದ ಇವರು ನವೆಂಬರ್ 30, 2010ರಂದು ಅವರು ಮರೆಯಾದರು.ಅವರ ಜನುಮದಿನವನ್ನು "ಸ್ವದೇಶಿ ದಿನ"ವನ್ನಾಗಿ ಸರಕಾರವೇ ಮುಂದೆ ನಿಂತು ಆಚರಿಸಬೇಕು.
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
9480364915
ಸ್ವದೇಶಿ ವಸ್ತುಗಳ ಬಳಕೆ ಮತ್ತು ದೇಶೀಯ ಸಂಸ್ಕೃತಿಯ ಬಗ್ಗೆ ಎಲ್ಲರಿಗೂ ವಿವರಿಸಿದರು. ವಿದೇಶೀ ವಸ್ತುಗಳ ಬಳಕೆಯಿಂದ ಭಾರತದಿಂದ ಅಪಾರ ಪ್ರಮಾಣದ ಹಣ ಪೋಲು ಆಗುತ್ತದೆ.ಸ್ವದೇಶಿ ಕೈಗಾರಿಕೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಮತ್ತು ಎರಡನೇ ಸಲ ಭಾರತ ಪರೋಕ್ಷವಾಗಿ ಗುಲಾಮರಾದಂತೆ ಎಂದು ಸ್ವಾವಲಂಬನೆಯ ಕೆಚ್ಚನ್ನು ಹೊತ್ತಿಸಿದರು.ಬಹುರಾಷ್ಟ್ರೀಯ ಕಂಪನಿ ಭಾರತದಲ್ಲಿ ಹೆಚ್ಚುತ್ತಿರುವುದನ್ನು ಖಂಡಿಸಿದರು.
ರಾಜೀವ್ ದೀಕ್ಷಿತರು ಹಳ್ಳಿಯೊಂದರಲ್ಲಿ ಜನಿಸಿದರೂ ಸ್ವಪ್ರತಿಭೆಯಿಂದ ಸಿ.ಎಸ್.ಐ.ಆರ್.ನಲ್ಲಿ ವಿಜ್ಞಾನಿಯಾದರು.ಸಾಕಷ್ಟು ಸಂಬಳ ಪಡೆಯುವ ವೃತ್ತಿಯನ್ನು ತ್ಯಜಿಸಿ ತಮ್ಮ ಗುರುಗಳ ಸಲಹೆಯಂತೆ ರಾಷ್ಟ್ರದ ಸೇವೆಗೆ ತಮ್ಮನ್ನು ತಾವು ಸಮಪಿ೯ಸಿಕೊಂಡರು.ಅವರು ತಮ್ಮ ಪ್ರಖರ ಮಾತು-ವಾದಗಳಿಂದ ಪ್ರಸಿದ್ಧರಾದರು."ಮೇರಾ ಭಾರತ ಮಹಾನ್" ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. 'ಅಜಾದಿ ಬಚಾವ್ ' ಆಂದೋಲನದ ಹರಿಕಾರರಾಗಿ ಯುವಕರಿಗೆ ಸ್ಫೂರ್ತಿ ತುಂಬಿದರು.
ಅಥ೯ವ್ಯವಸ್ಥೆ ಉತ್ತಮಗೊಳ್ಳಲು ಪ್ರತಿಯೊಬ್ಬರು ಸ್ವದೇಶಿ ಉತ್ಪನ್ನ ಬಳಸಲು ಕರೆ ನೀಡಿದರು. ವಿದೇಶಿ ಕಂಪನಿಯ ರಾಸಾಯನಿಕ ವಿಷಮಿಶ್ರಿತ ಕೀಟನಾಶಕ ಬಳಸದೆ ಸಾವಯವ ಕೃಷಿ ಮಾಡಿ ಭೂಮಿ ಬಂಜರುಗೊಳಿಸಬೇಡಿ ಎಂದರು.ಗೋವಿನ ಬಗ್ಗೆ ವಿಶೇಷ ಹೋರಾಟ ಮಾಡಿದರು."ಹಸು ಎಂದಿಗೂ ಹೊಗೆ ಉಗುಳುವುದಿಲ್ಲ, ಟ್ರ್ಯಾಕ್ಟರ್ ಎಂದಿಗೂ ಸಗಣಿ ಹಾಕುವುದಿಲ್ಲ".ಅವರ ಜನಪ್ರಿಯ ಘೋಷಣೆ.
ಸ್ವದೇಶಿ ಬಗ್ಗೆ ಮಾತಾಡುವಾಗ ಇವರ ಹೆಸರು ಮೊದಲು ಚಚೆ೯ಗೆ ಬರುತ್ತದೆ.ಅವಿವಾಹಿತರಾಗಿ ಉಳಿದ ಇವರು ನವೆಂಬರ್ 30, 2010ರಂದು ಅವರು ಮರೆಯಾದರು.ಅವರ ಜನುಮದಿನವನ್ನು "ಸ್ವದೇಶಿ ದಿನ"ವನ್ನಾಗಿ ಸರಕಾರವೇ ಮುಂದೆ ನಿಂತು ಆಚರಿಸಬೇಕು.
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
9480364915
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ