ಗುರುವಾರ, ಏಪ್ರಿಲ್ 30, 2015

ಶಾಸ್ತ್ರೀ ದೇಶದ ಆಸ್ತೀರಿ....

ಸ್ವಾಭಿಮಾನಿ, ದೇಶಾಭಿಮಾನಿ
ಪ್ರಾಮಾಣಿಕ ಜೀವಿ "ಶಾಸ್ತ್ರೀಜಿ
ಹಸಿದುಣ್ಣದೆ,ತ್ಯಾಗವ ಮೆರೆದ
ಮಾಡಿರಿ ಸೆಲ್ಯೂಟ್ ಬಹದ್ದೂರಜಿಗೆ       ಅಂಗಿಯ ಹರಿದರೂ...ಕೋಟಿನಿಂದ ಮುಚ್ಚಿ       ದೇಶದ ದಾರಿದ್ರ್ಯವ ಹೋಗಲಾಡಿಸಲು

     ಸ್ವತಃ  ತಪಗೈದರು ಮನಬಿಚ್ಚಿ
     ತಿಳಿ ಹೇಳಿದರು ಪರದೇಶ ನಡುಗಿಸಲು
 ಆಧುನಿಕ ಹರಿಶ್ಚಂದ್ರರೆನಿಸಿದರು
ಪ್ರಜೆಗಳ ಮನದಲಿ ನೆಲೆಸಿದರು  ರೈತರನ್ನು-ಸೈನಿಕರನ್ನು ಹುರಿದುಂಬಿಸಿದರು
  ಪ್ರಧಾನಿ ಹುದ್ದೆಯ ಗೌರವ ಹೆಚ್ಚಿಸಿದರು        ಅಧಿಕಾರ ದರ್ಪವ ಮೆರೆಯುವವರೆ...
  ಅರಿಯಿರಿ ಇವರ ಚರಿತೆಯ
  ದುಂದುವೆಚ್ಚವ ಮಾಡುವವರೆ......      ಕಲಿಯಿರಿ ಇವರಂತೆ ಮಿತವ್ಯಯವ;ಅಮರ, ಅಮರವೀ ಶಾಸ್ತ್ರೀಜಿ ಧ್ಯೇಯ-ನೀತಿಯು
ನೆನೆಯಿರಿ, ವಂದಿಸಿರಿ ಅವರ ವ್ಯಕ್ತಿಗತಕೆ-

*ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೆನಾಗರಕೊಪ್ಪ-581196

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ