ಸೋಮವಾರ, ಜುಲೈ 30, 2018

ಮಾಧವಿ ಕುಲಕರ್ಣಿ

🌹🌹ತುಟಿ ಹೇಗಿದ್ದರೇನು
ಒಲವ ತಟವೊಂದೇ ಅಲ್ಲವೇ?
ಭಾವನೆಗಳು ಉಕ್ಕಿಸಿದ ಕಾಮನೆಗಳು
ಬಿಕರಿಯಾದಾಗಲೇ
ಆತ್ಮಕ್ಕೊಂದು ನೆಮ್ಮದಿ.....🌹🌹
ಮಾಧವಿ ಕುಲಕರ್ಣಿ

ಭಾನುವಾರ, ಜುಲೈ 29, 2018

ತಪ್ಪಿದ ಹೆಜ್ಜೆಗಳು....ಮಾಧವಿ ಕುಲಕರ್ಣಿ

*ತಪ್ಪಿದ ಹೆಜ್ಜೆಗಳು*

ಕಾಲಿಗೆಟುಕಿದ
ಕಲ್ಲುಗಳು....
ಅವು ಬರಿಯ ಕಲ್ಲುಗಳಲ್ಲ
ಅನುಭವದ ಸೋಪಾgನಗಳು..

ಮುಗ್ಗರಿಸಿದ ಹೆಜ್ಜೆಗಳೋ
ಬರಿಯ ಹೆಜ್ಜೆಗಳಲ್ಲ
ಮುಂದಿನ ದಿಕ್ಸೂಚಿಗಳು...

ಘನತೆಯದು ದೊರೆತದ್ದು
ಬದುಕಿನ ಅನಂತ
ಸವಾಲುಗಳ ಒರತೆಯಿಂದ....

ನಿಜ..ಸೋಲುಗಳ ಪಟ್ಟಿಯ ಜಗವು ಮಾಡಿತೆಂದೇ
ನಿನ್ನ ಗೆಲುವಿಗೆ ಮೆಟ್ಟಲುಗಳು
ಹೆಚ್ಚಾದವು......

ಜಗವೊಂದು ಗುರುವಂತೆ
ಪ್ರತಿಫಲಿಪ ಕನ್ನಡಿಯಂತೆ
ದೋಷಗಳನೆತ್ತುವುದೋ?
ಇದ್ದುದನ್ನೇ ತೋರುವುದು....

ತಿದ್ದಲಾರೆನೆಂದವ ತಿರುಗಿ
ಮುಖಮಾಡಿ ಜೀವನ ಪಲಾಯನ ಮಾಡುವ..

ಒಪ್ಪಿದವನನ್ನು
ಮುಂದೊಂದು ದಿನ ಜಗವಪ್ಪುವುದು.....

ಹಾದಿ ತಿರುವಿನಂತೆ
ದೋಷ ಮರೆಯಿತೆಂದು
ಹುಸಿ ಸುಖವು ಬೇಡ.....

ಮುಂದಿನ ತಿರುವಲ್ಲೂ
ಅದೇ ಹೆಜ್ಜೆ ಬಂದೀತು
ನೋಡಾ......

ತಪ್ಪಿದ ಹೆಜ್ಜೆಯ ಫಲಿತಾಂಶವ
ಕಾಲವೇ ಲೆಕ್ಕವಿಟ್ಟು
ಮನವರಿಸೀತು......
ಪಾಠ ಕಲಿಸೀತು.....
ಎಲ್ಲಕೂ ಸದ್ದಿಲ್ಲದೆ ಉತ್ತರಿಸೀತು..........



           *ಮಾಧವೀ. ಕುಲಕರ್ಣಿ...*
          (ಕೃಷ್ಣಸುತೆ)

ಶುಕ್ರವಾರ, ಜುಲೈ 27, 2018

ಮಾಧವಿ ಕುಲಕರ್ಣಿ

ಧಾರವಾಡದ ಕವಯತ್ರಿ ಮಾಧವಿ ಕುಲಕರ್ಣಿ ಅವರ ಲೇಖನಿಯಿಂದ ಹೊಮ್ಮಿದ ಭಕ್ತಿಗೀತೆ. 


**ನಮ್ಮೂರಿನ ರಾಮನವಮಿ ಸುದ್ದಿ**

ಚೈತ್ರ ಮಾಸಕ
ರಾಮನವಮಿ ಪಾನಕ

ಕಡ್ಲೀಬ್ಯಾಳಿ ಕೋಸಂಬ್ರಿಯೊಳಗ
ಮುರುಕ ಮೆಣಸಿನಕಾಯಿ ಬಾಳಕ

ಮಾವಿನ ತಳಿರು ರಾಮನ ತೊಟ್ಟಿಲಕ
ಹುಡುಗರ ಎದಿ ಝಲ್ಲಂತು ಹೆಣ್ಮಕ್ಕಳ ಕೋಲಾಟಕ...

ಕಾಲತೊಳಿಯೋ ಮುತ್ತೈದಯಿಂದ
ಸುಡೋ ಕಾಲಿಗೆ ತಣ್ಣನೆರಕ...

ನೀವೂ ಬಂದು ಹೌದ ಹೌದ ಅನಬೇಕ
ನಮ್ಮೂರ ಸಿಂಗಾರಕ....

ರುಚಿಯರೆ ಅಷ್ಟ ಛಂದ
ಮಠದಾಗಿನ ಹಯಗ್ರೀವಕ...

ರಾಮನ ಕೃಪಾನೂ ರಾಯರ ಆಶೀವಾ೯ದಾನೂ ಅದ ನಮ್ ಹುನಗುಂದಕ....

ಕೈ ಮುಗೀತೀನಿ ಉಡುಪಿ ಸ್ವಾಮಿ ಶಿಷ್ತರ ಬಳಗಕ...
ದರಾ ವಷ೯ ಬರತಾರ ಜ್ಞಾನ ಸತ್ರಕ....

ಬಿಸಲ ಭಾಳಂತ್ಹೇಳಿ ಹೆದರೀಕ್ಯಾಕ
ಮಾಳಗೀ ಮನೀಗೋಳ ಇರಲಿಕ್ಕ....

ದೊಡ್ಡ ಮನಸಿನ ಮಂದೀನ ಊರತುಂಬ
ಬ್ಯಾಡನ್ನೂದಿಲ್ ನೀವ್ ಬರಾಕ..

ಹಾಜರಿ ಕೊಟ್ಟ ಬಿಡ್ರಿ ಬಿಸಲೂರಿನ ಭಕ್ತಿ ಸಂಭ್ರಮಕ
ಅದಽಽ ನನ್ನ ತವರೂರು ಹುನಗುಂದಕ.........

       ಜೈ ಶ್ರೀ ರಾಮ್

      🚩🚩🚩🚩🚩🚩🚩