ಬುಧವಾರ, ಜೂನ್ 15, 2016

kathe

ಪಟ್ಟಣಕ್ಕೆ ಪ್ರಸಿದ್ಧ ಜ್ಯೋತಿಷಿ ಬಂದಿದ್ದಾರೆ ಎಂದು ಕೇಳಿದ ರಾಯರು ಅವರನ್ನು ಕಾಣಲು ಹೋದರು. ತಮ್ಮ ಜಾತಕದ ಜೊತೆ 501/- ಕಾಣಿಕೆ ಇಟ್ಟು ಕೇಳಿದರು...
    ಗುರುಗಳೇ ನಾನು ಯಾವಾಗ, ಯಾವ.  ಸ್ಥಳದಲ್ಲಿ, ಯಾವ ಪರಿಸ್ಥಿತಿಯಲ್ಲಿ ಸಾಯುತ್ತೇನೆ  ಎಂದು ಕೇಳಿದರು. ಜ್ಯೋತಿಷಿಗಳು ರಾಯರ ಜಾತಕ ನೋಡಿದರು,  ಅವರ ಮುಖವನ್ನು ದಿಟ್ಟಿಸಿ ನೋಡಿದರು. ನಂತರ ಒಂದು ಹಾಳೆಯಲ್ಲಿ ಸಂಖ್ಯೆಗಳನ್ನು ಬರೆದು  ಕೂಡಿ ಕಳೆದು ಗುಣಿಸಿ ಭಾಗಿಸಿ ಮತ್ತೆ ರಾಯರ ಮುಖ ದಿಟ್ಟಿಸಿ ಗಂಭೀರವಾಗಿ ಹೇಳಿದರು..ನೋಡಿ ರಾಯರೇ, ನಿಮ್ಮ ಜಾತಕ ಅದ್ಭುತವಾಗಿದೆ. ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ, ನಿಮ್ಮ ತಂದೆಯಷ್ಟೇ ವರ್ಷ ಬದುಕುತ್ತೀರಿ, ಅವರು ಸಾಯುವ ಸ್ಥಳದಲ್ಲೇ ಸಾಯುತ್ತೀರಿ, ಅವರು ಸಾಯುವ ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ.
    ರಾಯರು ಇದನ್ನು ಕೇಳಿ ಗುರುಗಳಿಗೆ ವಂದಿಸಿ ಅವಸರದಲ್ಲಿ ತಲೆ ಕೆಟ್ಟವರಂತೆ ಓಡಿದರು......ಅರ್ಧ ಘಂಟೆಯೊಳಗೆ ಅಪ್ಪನನ್ನು ವೃದ್ಧಾಶ್ರಮದಿಂದ ಮನೆಗೆ ಕರೆತಂದರು.
-ಹನುಮಂತ. ಮ.ದೇಶಕುಲಕಣಿ೯

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ