ನ್ಯಾಯ ದೇವತೆ ಆಗಲಿಲ್ಲ....
ಗಾಂಧಾರಿ ನೀನಾದರೂ ತಿಳಿ ಹೇಳಬೇಕಿತ್ತು ಸುಯೋಧನಾದಿಗಳಿಗೆ...
ಧೃತರಾಷ್ಟ್ರನಂತೆ ಕುರುಡು ಪಟ್ಡ ಕಟ್ಟಿಕೊಂಡೆ
ನ್ಯಾಯ ದೇವತೆ ಆಗಲಿಲ್ಲ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿದರೂ..
ಮಮತೆಗೆ ಕಟ್ಟಿಬಿದ್ದು ನೀ ಕೊನೆಗೆ ನೋಡಿದ್ದಾದರೂ ಏನನ್ನು ...
ಸುರತ್ವಕ್ಕೇರಬೇಕಾದವ ಧುರ್ಯೋ್ದಮ ಏಕಾದ..
ಮಗನೆಂಬ ಮಮಕಾರದ ಮೋಹಕೆ
ವಾತ್ಸಲ್ಯವೂ ಕುರುಡಾಯಿತೇ..
ಕುರುವಂಶದ ಕುರುಪು ಕೆನೆಗಟ್ಡಿತು..
ಹಾಲೇ ಹಾಲಾಹಲದ ರುಚಿ ನೀಡಿತು..
-ಹನುಮಂತ.ಮ.ದೇಶಕುಲಕರ್ಣಿ.
ಯುವ ಬರಹಗಾರರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ