*ಇವನಾಯ್ದುದೋ*
ಕೇಳು ಕುಂತೀಪುತ್ರ
ಕೇಳೆನ್ನ ಮಾತ;
ನಾನೂ ಆರಿಸಲೆ?
ಹರವಿದ ಮುತ್ತುಗಳ..
ನನ್ನ ಭಾನುಮತಿಗೆ
ನಿನ್ನೊಡನಿರುವ
ಸ್ನೇಹವ ನೋಡಿ
ಮನ ಹರುಷದಿ ಸುಖಿಸಿದೆ...
ನಿಲ್ಲು ಕೋಮಲೆ
ನಾನಾಯುವೆ..
ಇಲ್ಲಿ ಮನವಿಡಬೇಡ
ಮಾತು ಮುಂದುವರೆಸು....
ದಾನಶೂರನ
ಮಧುರ ಸ್ನೇಹವೂ
ನಮಗೆ ದೊರೆತಿದ್ದು
ಬಲು ಅಗಾಧವು....
ಸ್ನೇಹ ಸಲುಗೆ
ಬಾಂಧವ್ಯ ಪ್ರೀತಿಯಲಿ
ಹೀಗಾಗುವುದು ಸಹಜ
ರಸಭಂಗವಾಯ್ತೇ?
ಯಾರೇನಂದಾರು
ಅನ್ನೋ ಭಯ ಬೇಕಿಲ್ಲ
ನಿಮ್ಮ ಸ್ನೇಹ ಸೇತುವೆಗೆ
ಈ ಸುಯೋಧನನಿರುವನಲ್ಲ
ಸಲುಗೆಯ ಚೆಲ್ಲಾಟದಿ
ಹರಡಿದ ಮುತ್ತುಗಳನಾಯ್ದು ಕೊಡಲೇ?
ನಲ್ಲೆ ಭಾನುಮತಿ.........
*ಮಾಧವೀ..ಕುಲಕರ್ಣಿ ....(ಕೃಷ್ಣಸುತೆ*)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ