ಶನಿವಾರ, ಏಪ್ರಿಲ್ 25, 2015

ವಿದ್ಯಾರಣ್ಯರು

ಜಗತ್ತಿನಲ್ಲಿ ಸಾಂಸ್ಕೃತಿಕ-ಸಿರಿವಂತಿಕೆಯ ದಂತಕಥೆಗಳ ದೊಡ್ಡಣ್ಣನೇ ಆದ ವಿಜಯನಗರ  ಸಾಮ್ರಾಜ್ಯದ ಹಿರಿಮೆಗೆ ಪಾತ್ರರಾಗಲು ಅನೇಕ ಸಾಮ್ರಾಜ್ಯಗಳಂತೆ ಇದು ಸಾಧು-ಸಂತರ ಕೃಪಾಶೀವಾ೯ದದಿಂದ ಸ್ಥಾಪಿಸಿದ್ದು ಆಗಿದೆ.ಪರಕೀಯರ ಆಕ್ರಮಣ ತಡೆಯಲು ಬಲಿಷ್ಟ ಸಾಮ್ರಾಜ್ಯ ಕಟ್ಟಿದ ಯತಿವಯ೯ ವಿದ್ಯಾರಣ್ಯರು.
        ವಿದ್ಯಾರಣ್ಯರು ಜನಿಸಿದ್ದು ಸುಮಾರು 1296ರಲ್ಲಿ.ಇವರ ಪೂವಾ೯ಶ್ರಮದ ಹೆಸರು ಮಾಧವಾಚಾಯ೯.ಇವರಿಗೆ ವಿದ್ಯಾತೀಥ೯ರೆಂಬ ಗುರುಗಳಿದ್ದರು.ಇವರು 35ನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿ ವಿಜಯನಗರ ಕಟ್ಟಿದ ಮೇಲೆ ಕಾಶಿಗೆ ತೆರಳಿದರು.

   ಕರುನಾಡಿನ ತಾಯಿ ಭುವನೇಶ್ವರಿಗೆ,ಮಾತೃಭೂಮಿಯ ರಕ್ಷಣೆಗೆ ಕಂಕಣಬದ್ಧರಾಗಿ ತುಂಗಭಧ್ರ ತಟದಿಂದ ಯಾತ್ರೆ ಶುರುಮಾಡಿ ಅರಣ್ಯದಲ್ಲಿ ಬಂದಾಗ ಯತಿಗಳಿಗೆ ಶುಭಶಕುನದಂತೆ ಅಲ್ಲಿ ಮರದ ಕೆಳಗೆ  ಕರುನಾಡಿನ ಕುವರರು ನಿದ್ರೆಗೆ ಜಾರಿದ್ದರು. ಅವರು ತುಂಬು ಬಾಹುಬಲವುಳ್ಳ ಶೂರರಂತೆ ಕಂಡರು.ಎಚ್ಚರಗೊಂಡ ಯುವಕರ ಮುಂದೆ ಖಾವಿಧಾರಿ ಸಂತರು ನಿಂತಿದ್ದರು,ಯತಿಗಳಿಗೆ  ಆ ಯುವಕರು ವಂದಿಸಿದಾಗ ಅವರ ಮುಖದಲ್ಲಿನ ತೇಜಸ್ಸು ಕಂಡು ನೀವು ಯಾರು? ಎಂದಾಗ ಯತಿವಯ೯  ನಾವು ಸೋದರರು ನನ್ನ ಹೆಸರು ಹುಕ್ಕ,ಇವನು ಬುಕ್ಕ ಸಂಗಮ ಅರಸನ ಮಕ್ಕಳು .ಒರಂಗಲ್ಲು ಪ್ರತಾಪರುದ್ರದೇವನಲ್ಲಿ ನಾನು ಸೇನಾಪತಿ,ಇವನು ಕೋಶಾಧಿಕಾರಿ;ದೆಹಲಿ ಬಾದಶಾಹನ ದಂಡಯಾತ್ರೆಯಲ್ಲಿ ಸೋತು ಇಲ್ಲಿ ಬಂದಿದ್ದೇವೆ.
      ನೀವು ಹೆದರುವುದರಿಂದ ಉಪಯೋಗವಿಲ್ಲ,ಎಷ್ಟು ದಿನ ದಾಸರಾಗಿರುತ್ತಿರಿ,ಎಂದು ನುಡಿದಾಗ;ಯತಿವಯ೯ ನಾವು ಸಾವಿಗೆ ಅಂಜುವರಲ್ಲ,ನಮ್ಮದು ಯದುವಂಶ.ಹಾಗಾದರೆ ಬನ್ನಿ ಎಂದು ಅವರನ್ನು ಸಾಧುಕುಟೀರಕ್ಕೆ ಕರೆದೊಯ್ದು ಸಾಮ್ರಾಜ್ಯದ ರೂಪುರೇಷೆ ತಯಾರಿಸಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ್ದು ಇತಿಹಾಸ!
    1356ರವರೆಗೆ ಹರಿಹರ ಆಳಿದ,ತದನಂತರ ಬುಕ್ಕ ಪಟ್ಟಕ್ಕೆ ಬಂದಾಗ ಮಾಡಿದ ಮೊದಲ ಕೆಲಸವೆಂದರೆ;ಕಾಶಿಯಲ್ಲಿರುವ ವಿದ್ಯಾರಣ್ಯರನ್ನು ಅವರ ಗುರುಗಳಾದ ವಿದ್ಯಾತೀಥ೯ರ ಗುರುವಾಜ್ಞೆ ಮತ್ತು ತನ್ನ ಪತ್ರವನ್ನು ಕಳುಹಿಸಿ ಪುನಃ ವಿಜಯನಗರಕೆ ಕರೆಸಿಕೊಂಡು ಮಂತ್ರಿ ಮಾಡಿಕೊಂಡ.2ನೇ ಹರಿಹರನಿಗೂ ಮಂತ್ರಿಯಾಗಿದ್ದರು.ತಮ್ಮ90ನೇ ವಯಸ್ಸಿನಲ್ಲಿ 1386ರಲಿ ಕಾಲವಾದರು.
      ಮುತ್ತು-ರತ್ನ,ವಜ್ರ-ವೈಢೂಯ೯,ಬ಼ಂಗಾರ-ಬೆಳ್ಳಿಯನ್ನು ಬಳ್ಳದಿಂದ ಅಳೆಯುವ ಸಾಂಸ್ಕೃತಿಕ-ಸಿರಿವಂತಿಕೆಯನ್ನು ಬೆಳೆಸಿ ಪರದೇಶದವರು ಹುಬ್ಬೇರಿಸುವಂತೆ ಮಾಡಿದ,ಅಪಾರ ಕೀತಿ೯ ಗಳಿಸಿ ಭವ್ಯವಾಗಿ ಮೆರೆಯುವ ನಾಡನ್ನಾಗಿ ಮಾಡಿದ ಶ್ರೀ.ವಿದ್ಯಾರಣ್ಯರಿಗೆ ಕೋಟಿ ನಮನಗಳು.
    -ಹನುಮಂತ.ಮ.ದೇಶಕುಲಕಣಿ೯
    ಸಾ.ಭೋಗೇನಾಗರಕೊಪ್ಪ-581196.      ತಾ.ಕಲಘಟಗಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ