ಸೋಮವಾರ, ಜುಲೈ 13, 2015

ಜೀವಿಗಳಲ್ಲಿ ರಕ್ತಶಕ್ತತೆ

   ಜೀವಕಣಗಳನ್ನು ಹೊತ್ತೊಯ್ಯುವ ರಕ್ತವೇ ಎಲ್ಲಾ ಜೀವಿಗಳ ಪೋಷಕ ಶಕ್ತಿ. ಒಂದು ಅಮೂಲ್ಯ ಜೀವದ್ರವ. ಅದಕ್ಕೆ ರಕ್ತವನ್ನು ಒಂದು ವಿಶಿಷ್ಟವರ್ಗಕ್ಕೆಸೇರಿದ, "ಕನೆಕ್ಟೀವ್ ಟಿಶ್ಯೂ" ಎನ್ನುತ್ತಾರೆ. ಮಾನವ ರಕ್ತ ಕಣಗಳು:a - ಎರಿಥ್ರೋಸೈಟ್ಸ್; b - ನ್ಯೂಟ್ರೋಫಿಲ್;c - ಎಸಿನೋಫಿಲ್; d - ಲಿಂಫೋಸೈಟ್,  ರಕ್ತ ಪ್ಲಾಸ್ಮ ಎಂಬ ಜೀವರಸದಿಂದ ಕೂಡಿದ್ದು, ಅದರಲ್ಲಿ ವ್ಯವಸ್ಥಿತ ಪ್ರಮಾಣದಲ್ಲಿ ಕೆಂಪು ರಕ್ತಕಣಗಳು ಬಿಳಿರಕ್ತಕಣಗಳು, ಮತ್ತು ಪ್ಲೇಟ್ ಲೆಟ್ ಎಂಬಜೀವಕೋಶಗಳು ತೇಲುತ್ತಿರುತ್ತವೆ.ಪ್ಲಾಸ್ಮ ಶೇ.91-92% ರಷ್ಟು ನೀರಿನಿಂದಾಗಿದ್ದು, ಉಳಿದ ಭಾಗ ಘನವಸ್ತುಗಳಿಂದಾಗಿದೆ. ಸಸಾರಜನಕ, ಯೂರಿಯ, ಆಸಿಡ್, ಕ್ರಿಯಾಟಿನಿನ್, ಅಮೋನಿಯಾ, ಅಮೈನೋ ಆಸಿಡ್, ಗ್ಜಾಂಥಿನ್, ಪದಾರ್ಥಗಳು, ಶೇಕಡ 7.5% ರಷ್ಟು. ಇನ್ನುಳಿದದ್ದು, ಸೋಡಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಮೆಗ್ನೀಶಿಯಮ್, ಫಾಸ್ಫರಸ್, ಮೊದಲಾದ, ನಿರವಯವ ಪದಾರ್ಥಗಳು. ಪಿಷ್ಟ, ಅಂದರೆ ಮುಖ್ಯವಾಗಿ ಗ್ಲೂಕೋಸ್, ಕೊಬ್ಬು, ಅಂದರೆ, ಕೊಲೆಸ್ಟರಾಲ್, ಟ್ರೈಗ್ಲಿಸರೈಡ್, ನಾನಾ ತರಹದ ಹಾರ್ಮೋನ್ ಗಳು, ಕಿಣ್ವಗಳು, ಪ್ರತಿರೋಧಕಗಳು, ಗ್ಜಾಂಥೋಫಿಲಿನ್, ಕೆರೋಟಿನ್ ಮುಂತಾದ ಬಣ್ಣ ಬರಿಸುವ ಪದಾರ್ಥಗಳು. ಸೋಡಿಯಮ್ ಪೊಟ್ಯಾಸಿಯಮ್ ಲವಣಾಂಶಗಳು ನಿಖರ ಪ್ರಮಾಣದಲ್ಲಿಲ್ಲದಿದ್ದರೆ ಕಾಯಿಲೆ ಖಂಡಿತ. ರಕ್ತದ ವಿಶಿಷ್ಟ ಗುರುತ್ವಾಕರ್ಷಣೆ, 1.048 ರಿಂದ, 1.0466 ಇರುತ್ತದೆ. ದೇಹದ ನೀರಿನ ಅಂಶ ಕಡಿಮೆಯದಂತೆ ಇದರ ಪ್ರಮಾಣ ಕಡಿಮೆಯಾಗುತ್ತದೆ. ಆ ಕೆಂಪುರಕ್ತ ಕಣಗಳು ಸುಮಾರು 20 ಬಗೆಯ ಬ್ಲಡ್ ಗ್ರೂಪ್ ನ್ನು ಹೊಂದಿದ್ದು, ಎ, ಬಿ, ಎಬಿ ಹಾಗೂ ಓ ಅವುಗಳಲ್ಲಿ ಮುಖ್ಯವಾದದ್ದು. ಹಿಮೋಗ್ಲೋಬಿನ್ ಅಂಶ ತೀರಾ ಕುಸಿದರೆ, (18 ಗ್ರಾಮ್ ಇರಬೇಕು) ಮೂರ್ನಾಲ್ಕು ಆದಾಗ, ರೋಗಿಗೆ ರಕ್ತವನ್ನು ಮರುಪೂರಣ ಮಾಡಬೇಕಾಗುತ್ತದೆ. ರಕ್ತದಲ್ಲಿ ಒಂದು ಬಿಳಿರಕ್ತಕಣಕ್ಕೆದುರಾಗಿ 700 ಕೆಂಪುರಕ್ತ ಕಣಗಳಿರುತ್ತವೆ. (ಅಂದರೆ, 1 : 700)ಅನುಪಾತದಲ್ಲಿರುತ್ತವೆ. ಬಿಳಿರಕ್ತಕಣಗಳಲ್ಲಿ ಹಲವು ವಿಧಗಳಿವೆ. ಇವೆಲ್ಲಾ ದೇಹವನ್ನು ಸದಾಕಾಲವೂ ರಕ್ಷಿಸುವ ಸಿಪಾಯಿಗಳಂತೆ ವರ್ತಿಸುತ್ತವೆ. ಅವುಗಳ ವಿವರ ಕೆಳಗೆಕಂಡಂತಿದೆ.

    ಪಾರದರ್ಶಕವಾಗಿರುವುದರಿಂದ ಬಿಳಿಯ ರಕ್ತಕಣಗಳೆಂದು ಕರೆಯಲ್ಪಡುತ್ತವೆ. ಇವುಗಳ ಆಯುಸ್ಸು, 3-6 ದಿನಗಳು. ರಕ್ತದಲ್ಲಿ ಇವುಗಳ ಸಂಖ್ಯೆ ಕೆಂಪು ಗಳಿಗಿಂತ ಕಡಿಮೆ. 4000-11000 ಕ್ಯು. ಮಿ. ಮೀ ನಷ್ಟಿರುವ ಬಿಳಿರಕ್ತ ಕಣಗಳು 4000 ಕ್ಯು. ಮಿ/ಮೀ ಗಿಂತ ಕಡಿಮೆ ಇರಬಾರದು. ಸೋಂಕುಬಲಿತು, ದೇಹಕ್ಕೆ, ಅತೀವ ತೊಂದರೆಯುಂಟಾಗುತ್ತದೆ. ಸೋಂಕಿನಿಂದ ಬೆರೆತ ರಕ್ತದಲ್ಲಿ ಹೆಚ್ಚಾಗುವ ಸ್ಥಿತಿ. (ಕುರು) ರಕ್ತಕೆಟ್ಟಿದೆ. ಬಿಳಿ ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಹೊಂದಿರುವುದಿಲ್ಲ. ನ್ಯೂಟ್ರೋಫಿಲ್ ಬಿ ಗಲು 10-12 ಮೈಕ್ರಾನ್ ನಷ್ಟಿದ್ದು, ಫಾಸ್ಫಟೇಸ್, ಪ್ರೋಟಿಯೇಸ್, ಅಮೈಲೇಸ್, ಮುಂತಾದ ಕಿಣ್ವಗಳನ್ನು ಹೊಂದಿರುತ್ತವೆ. ದೇಹದ ಮೇಲೆ ದಾಳಿಮಾಡುವ ವಿಷಕ್ರಿಮಿಗಳನ್ನು ನುಂಗಿ ಅರಗಿಸುವ ಕೆಲಸಮಾಡುತ್ತವೆ. ಅಂತಿಮವಾಗಿ ಹೋರಾಟದಲ್ಲಿ ಸಾಯುತ್ತವೆ. ಕೀವಾಗಿ ನಮಗೆ ಕಾಣಿಸಿಕೊಳ್ಳುವುದು, ಸೋಂಕನ್ನೂ ಸೋಂಕಿನಭಾಗವನ್ನೂ ಅರಗಿಸಿ ಹೊರದೂಡುವ ಕ್ರಮ. ಇಯೋಸಿನೋಫಿಲ್ ರಕ್ತಕಣಗಳು, 10-12ಮೈಕ್ರಾನ್ ನಷ್ಟಿದ್ದು, ದೇಹಕ್ಕೆ ಅಲರ್ಜಿಯಾಗುವುದನ್ನು ತಪ್ಪಿಸಲು ಹೋರಾಟ ನಡೆಸುತ್ತವೆ. ಇವುಗಳಲ್ಲಿ ಹಿಸ್ಟಮಿನ್ ದಂಡಿಯಾಗಿದೆ. ಚರ್ಮದ ಅಲರ್ಜಿ, ಹಾಗೂ ಅಸ್ತಮಾ ಮುಂತಾದ ಶ್ವಾಸಕೋಶದ ಸೋಂಕಿನಲ್ಲಿ ಇವುಗಳ ಸಂಖ್ಯೆ ವೃದ್ಧಿಸುವುದು. ಬೆಸೋಫಿಲ್, 8-10 ಮೈಕ್ರಾನ್ಸ್, ಹಿಸ್ಟಮಿನ್ ಮತ್ತು ಹಿಪಾರಿನ್ ಗಳನ್ನು ಹೊಂದಿದೆ. ರಕ್ತನಾಳದೊಳಗೆ ಹೆಪ್ಪುಗಟ್ಟದಂತೆ ಇವು ಜಾಗ್ರತೆವಹಿಸುತ್ತವೆ. ದೇಹದ ವಿಷಕ್ರಿಮಿಗಳನ್ನು ನಾಶಮಾಡಲು, ಮಾನೋಸೈಟ್ ಗಳು ಸಹಾಯಮಾಡುತ್ತವೆ. (16-18 ಮೈಕ್ರಾನ್)ಲಿಂಪೋಸೈಟ್ ಗಳಲ್ಲಿ ಎರಡು ವಿಧ.ಸಣ್ಣವು 7.5 ಮೈಕ್ರಾನ್. ದೊಡ್ಡವು 12 ಮೈಕ್ರಾನ್ ನಷ್ಟಿರುತ್ತವೆ. ಇವುಗಳು ತಯಾರಿಸುವ ಗಾಮಾ ಗ್ಲಾಬ್ಯುಲಿನ್ ದೇಹಕ್ಕೆ ದಾಳಿಯಿಡುವ ವಿಷಕ್ರಿಮಿಗಳು ಉತ್ಪಾದಿಸುವ ವಿಷದ ವಿರುದ್ಧ ಹೋರಾಡಿ, ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಬೀಟ ಗ್ಲಾಬ್ಯುಲಿನ್ ಗಳು ದೇಹಕ್ಕೆ ಅವಶ್ಯಕವಾದ ಪ್ರೋಟೀನ್ ಗಳನ್ನು ಒದಗಿಸುತ್ತವೆ.ಪ್ಲೇಟ್ ಲೆಟ್ ಗಳು (2.5 ಮೈಕ್ರಾನ್) ಸಣ್ಣ ಸಣ್ಣ ಪೆಪ್ಪರ್ ಮಿಂಟ್ ನ ಮಾದರಿಯಲ್ಲಿರುತ್ತವೆ. ರಕ್ತದಲ್ಲಿ ಇವುಗಳ ಸಂಖ್ಯೆ, 1.5 ಲಕ್ಷದಿಂದ 4.5 ಲಕ್ಷ ಕ್ಯು. ಮಿಲಿ. ಮೀಟರ್. ದೇಹದಲ್ಲಿ ರಕ್ತಸ್ರಾವವಾದಾಗ, ನಿಲ್ಲಿಸುವಲ್ಲಿ, ಗಾಯಗೊಂಡ ರಕ್ತನಾಳಗಳ ಒಳಪದರದ ದುರಸ್ತಿಯಲ್ಲಿ ತಕ್ಷಣ ಭಾಗವಹಿಸುತ್ತವೆ.
ರಕ್ತದ ಕಾರ್ಯವಿಧಾನ:
ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ಎಲ್ಲಾ ಅಂಗಾಂಶಗಳಿಗೂ, ಇಂಗಾಲದ ಡೈ ಆಕ್ಸೈಡನ್ನು ದೇಹದ ಎಲ್ಲಾ ಅಂಗಗಳಿಂದ ಶ್ವಾಸಕೋಶಕ್ಕೂ ತರುವ ಕೆಲಸಮಾಡುತ್ತವೆ. ಪಚನಗೊಂಡ ಆಹಾರ ಪದಾರ್ಥಗಳನ್ನು ಕರುಳಿನಿಂದ ಅಂಗಾಂಗಗಳಿಗೆ, ಒದಗಿಸುತ್ತದೆ. ತಿಂದ ಆಹಾರದಲ್ಲಿರುವ ವಿಟಮಿನ್ ಶಕ್ತಿ, ಕೊಬ್ಬಿನಂಶ ಹಾಗೂ ದೇಹದಲ್ಲೇ ಉತ್ಪತ್ತಿಯಾಗುವ ಹಾರ್ಮೋನ್ ಗಳನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸಲು ಸಹಾಯಮಾಡುತ್ತವೆ. ದೇಹಕ್ಕೆ ಬೇಡವಾದ ವಸ್ತುಗಳನ್ನು ಅಂಗಾಶಗಳಿಂದ ಪಡೆದು, ಮೂತ್ರಪಿಂಡ, ಶ್ವಾಶಕೋಶ, ಹಾಗೂ ಕರುಳಿನ ಮುಖಾಂತರ, ದೇಹದಿಂದ ಹೊರದೂಡುತ್ತದೆ. ದೇಹಕ್ಕೆ ಅತ್ಯವಶ್ಯಕವಾದ, ನೀರಿನ, ಆಮ್ಲ- ಪ್ರತ್ಯಾಮ್ಲ, ಹಾಗೂ ಚರಾಣುಗಳ ಸಮತೋಲನದೊಂದಿಗೆ, ದೇಹದ ಉಷ್ಣತೆಯನ್ನು 37 ಡಿಗ್ರಿ ಸೆಲ್ಸಿಯಸ್ ನಲ್ಲಿರುವಂತೆ ಕಾಪಾಡುತ್ತದೆ. ದೇಹದ ಸಿಪಾಯಿಯಾಗಿ ರಕ್ಷಣೆ ಮಾಡುವುದಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿ ಪ್ರೋಟೀನ್ ಗಳಿವೆ. ಫೈಬ್ರನೋಜನ್, ಪ್ರೋಥ್ರಾಂಬಿನ್ ಗಳು, ರಕ್ತ ಹೆಪ್ಪು ಕಟ್ಟಲು ಸಹಾಯಮಾಡುತ್ತವೆ. ಆಲ್ಬುಮಿನ್ ರಕ್ತ ಹಾಗೂ ಉಳಿದ ಅಂಗಾಂಗಗಳ ನಡುವಿನ ಉಚ್ಚಾಲನಿಕ ಒತ್ತಡವನ್ನು ಕಾಪಾಡುತ್ತದೆ. ರಕ್ತದ ಸ್ನಿಗ್ಧತ್ವವನ್ನು ಇದು ಕಾಪಾಡುತ್ತದೆ. ದೇಹದ ರಕ್ತದೊತ್ತಡ ನಿಯಂತ್ರಣಕ್ಕೆ ಅತ್ಯಾವಶ್ಯಕ. ಗಾಮಾಗ್ಲಾಬ್ಯುಲಿನ್ ಪ್ರತಿರೋಧಕ ವಸ್ತುವನ್ನು ತಯಾರಿಸಿ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತವೆ. ರಕ್ತದಲ್ಲಿ ಹೆಪ್ಪುಗಟ್ಟುವ ಅಂಶಗಳಿವೆ. ರಕ್ತಸ್ರಾವವಾಡೊಡನೆಯೇ ಕಾರ್ಯೋನ್ಮುಖವಾಗುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸಿ ಅಪಾಯವನ್ನು ತಪ್ಪಿಸುತ್ತವೆ.
     ರಕ್ತನಾಳದಲ್ಲಿ ರಕ್ತ ದ್ರವರೂಪದಲ್ಲೇ ಇದ್ದು ಹೆಪ್ಪುಗಟ್ಟಿವುದಿಲ್ಲವೇಕೆ ಎಂಬ ಸಂಶಯ ಬರುವುದು ಸಹಜ. ರಕ್ತನಾಳದ ಒಳಪದರದಲ್ಲಿ ಯಾವುದೇ ಏಟು ಬೀಳದಿದ್ದರೆ, ರಕ್ತ ಹೆಪ್ಪುಗಟ್ಟುವುದಿಲ್ಲ. ಥ್ರಾಂಬಿನ್ ಅಂಶ ಇಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುವುದರಿಂದ. ಹೆಪ್ಪುಗಟ್ಟುವ ಮದ್ಯವರ್ತಿಗಳನ್ನು ಆರ್ ಇ ಜೀವಕೋಶಗಳು ತಕ್ಷಣ ತೆಗೆದುಬಿಡುತ್ತವೆ. ಅಲ್ಲದೆ, ರಕ್ತದಲ್ಲಿರುವ "ಹಿಪಾರಿನ್," ಅಂಶ, ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳದೊಳಗಿನ ರಕ್ತ ಯಾವುದೇ ಕಾರಣಕ್ಕೂ ಹೆಪ್ಪುಗಟ್ಟಲೇ ಬಾರದು. ತಕ್ಷಣ ಹೃದಯ ಸ್ತಂಬನವಾಗುತ್ತದೆ. ಇದೇ ಕ್ರಿಯೆ ಮೆದುಳಿನ ರಕ್ತನಾಳದಲ್ಲಾದರೆ, ಪಾಶ್ವ೯ವಾಯು ಹೊಡೆಯುತ್ತದೆ.
    ಸುಮಾರು 70 ಕೆ.ಜಿ. ಇರುವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಸುಮಾರು 5 ಲೀಟರ್ ನಷ್ಟು ರಕ್ತವಿರುತ್ತದೆ.ಎಲುಬಿನ ಮಜ್ಜೆ ರಕ್ತ ತಯಾರಿಸುವ ಕಾರ್ಖಾನೆ. ಇದು ದೇಹದ ಮೂಳೆಯೊಳಗಿನ ಟೊಳ್ಳು ಭಾಗದಲ್ಲಿ ಕುಳಿತಿರುತ್ತದೆ. ಹುಟ್ಟುವಾಗ ಸುಮಾರು 70 ಮಿ. ಲೀಟರ್ ತೂಗುವ ಮಜ್ಜೆ, ವಯಸ್ಕರಲ್ಲಿ ಸುಮಾರು, 4 ಲೀಟರ್ ನಷ್ಟಾಗುತ್ತದೆ. ಮಜ್ಜೆಯಲ್ಲಿ ಎರಡುವಿಧ :1. ಕೆಂಪುಮಜ್ಜೆ. ಇಲ್ಲಿ ಕೆಂಪುರಕ್ತಕಣಗಳು ತಯಾರಾಗುತ್ತವೆ. ಭ್ರೂಣಾವಸ್ಥೆಯಲ್ಲಿ ಎಲ್ಲಾಮೂಳೆಗಳೂ ಕೆಂಪು ಮಜ್ಜೆಯನ್ನು ಹೊಂದಿದ್ದು, ವಯಸ್ಸಾದಂತೆ ಕಡಿಮೆಯಾಗುತ್ತಾ ಹೋಗುತ್ತವೆ. ಕಾಲಿನ ಉದ್ದನೆಯ ಮೂಳೆಗಳತುದಿಯಲ್ಲಿ, ಎದೆ ಮೂಳೆಗಳಲ್ಲಿ, ಪಕ್ಕೆಲುಬಿನ ಮೂಳೆಗಳಲ್ಲಿ, ತಲೆಬುರುಡೆ ಮೂಳೆಗಳಲ್ಲಿ, ಹಾಗೂ ಪೃಷ್ಯದ ಮೂಳೆಗಳಲ್ಲಿ ಮಾತ್ರ ಕಾಣ ಸಿಗುತ್ತವೆ.ಉಳಿದವು ಹಳದಿ ಮಜ್ಜೆಯಾಗಿ ಮಾರ್ಪಾಟಾಗಿ ಕೆಲಸಕ್ಕೆ ಬಾರದಂತಾಗುತ್ತವೆ.
     ಎರಿತ್ರೋ ಪಾಯಿಟಿನ್ ಎಂಬ ಹಾರ್ಮೋನ್ ನ ಉತ್ತೇಜನದಿಂದ, ಉತ್ಪತ್ತಿಯಾಗುವ ಕೆಂಪು ರಕ್ತ ಕಣಗಳು ಕೆಂಪಾಗಿ ಕಾಣಲು ಅದರಲ್ಲಿ ಹುದುಗಿಕೊಂಡಿರುವ ಹಿಮೋಗ್ಲೋಬಿನ್ ಕಾರಣ. ಕೆಂಪುರಕ್ತ ಕಣಗಳು ಸುಮಾರು 4 ತಿಂಗಳು ಬದುಕುತ್ತವೆ. ಹಿಮೋಗ್ಲೋಬಿನ್ 96%, ಗ್ಲೋಬಿನ್ ಎಂಬ ಪ್ರೋಟೀನ್ ನಿಂದ ಆಗಿದ್ದು, ಉಳಿದ 4% ಹೀಮ್ ಎಂಬ ಕಬ್ಬಿಣದಂಶದ ಜೊತೆ ಸೇರಿಕೊಂಡಿದೆ. ಈ ಬಣ್ಣಕ ಆಮ್ಲಜನಕದ ಜೊತೆಗೆ ಸುಲಭವಾಗಿ ಬೆರೆತು, ಅಷ್ಟೇ ಸುಲಭವಾಗಿ ಬಿಟ್ಟುಕೊಡುವ ಸ್ವಭಾವ ಹೊಂದಿದೆ.ರಕ್ತದಲ್ಲಿ ಹಿಮಾಗ್ಲೋಬಿನ್ ಅಂಶ, 18 ಗ್ರಾಮ್ ಮೀರಿದರೂ, ಅದು ದೇಹಕ್ಕೆ ಒಳ್ಳೆಯದಲ್ಲ. ಅಪಾಯಕಾರಿ.
     ಎಬಿಒ ರಕ್ತ ಗು೦ಪಿನ ವ್ಯವಸ್ಥೆಯನ್ನು ಆಸ್ಟ್ರೇಲಿಯಾದ ಕಾರ್ಲ್ ಲಾ೦ಡ್ಸ್ಟೈನರ್  ಎ೦ಬ ವಿಜ್ಞಾನಿಯು ಕ೦ಡುಹಿಡಿದನೆ೦ದು ತಿಳಿಯಲಾಗಿದೆ. ಅವನು 1900 ರಲ್ಲಿ ಮೂರು ಬೇರೆ ವಿಧಧ ರಕ್ತ ವಿಧಗಳನ್ನು ಕ೦ಡುಹಿಡಿದನು.ತನ್ನ ಈ ಕಾರ್ಯಕ್ಕಾಗಿ 1930 ರಲ್ಲಿ ಅವನು  ಜೀವಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಆ ಸಮಯದಲ್ಲಿ ಸ೦ವಹನದ ಕೊರತೆಯಿ೦ದಾಗಿ, ಝೆಕೊಸ್ಲಾವಾಕಿಯಾದ ಸೀರಮ್ ಶಾಸ್ತ್ರಜ್ಞ ಜಾನ್ ಜಾನ್ಸ್ಕಿಯು ಮಾನವ ರಕ್ತವನ್ನು ನಾಲ್ಕು ಗು೦ಪುಗಳಾಗಿ ವಿ೦ಗಡಿಸುವುದರಲ್ಲಿ ಮೊದಲಿಗನಾದನು,ಆದರೆ ಲಾ೦ಡ್ಸ್ಟೈನರ್‌ನ ಸ್ವತ೦ತ್ರ ಸ೦ಶೋಧನೆಯು ವಿಜ್ಞಾನ ಜಗತ್ತಿನಲ್ಲಿ ಮನ್ನಣೆಯನ್ನು ಪಡೆಯಿತು ಅದೇ ಸಮಯದಲ್ಲಿ ಜಾನ್ಸ್ಕಿಯ ಸ೦ಶೋಧನೆಯು ಕತ್ತಲೆಯಲ್ಲೇ ಉಳಿಯಿತು.
    ತನ್ನದಲ್ಲದ ರಕ್ತ ಗು೦ಪಿನ ಪ್ರತಿಜನಕಗಳ ವಿರುದ್ಧ ಅಸ್ಥಿತ್ವದಲ್ಲಿರುವ ಒ೦ದೇ ರೀತಿಯ ರೋಗನಿರೋಧಕಗಳ ಕಾರಣದಿ೦ದಾಗಿ ಎ ರಕ್ತ ಗು೦ಪಿನ ಮಾನವರು ಬಿ ಗು೦ಪಿನಿ೦ದ ರಕ್ತವನ್ನು ತೆಗೆದುಕೊ೦ಡಲ್ಲಿ ತಕ್ಷಣ ಎ ಗು೦ಪಿನ ಆರ್‌ಬಿಸಿ ಯ ವಿರುದ್ಧ ಆ‍ಯ್‌೦ಟಿ-ಬಿ ರೋಗನಿರೋಧಕಗಳನ್ನು ಹೆಚ್ಚಾಗಿ ಉತ್ಪತ್ತಿ ಮಾಡುತ್ತವೆ. ಆ‍ಯ್‌೦ಟಿ-ಬಿ ರೋಗನಿರೋಧಕಗಳು ಆರ್‌ಬಿಸಿ ಯಲ್ಲಿನ ಬಿ ಪ್ರತಿಜನಕಗಳ ಬ೦ಧನದಲ್ಲಿರುತ್ತವೆ ಮತ್ತು ಆರ್‌ಬಿಸಿಯ  ವಿಭಜನೆಯನ್ನು  ಪೂರ್ತಿ ಮಾಡುವ ಮಾಧ್ಯಮವಾಗಲು  ಕಾರಣವಾಗುತ್ತದೆ. ಬಿ ಮತ್ತು ಒ ಗು೦ಪುಗಳೊ೦ದಿಗೂ ಕೂಡ ಇದೇ ರೀತಿಯ ಪರಿಣಾಮಗಳು೦ಟಾಗುತ್ತವೆ.  ಇದರ ಹೊರತಾಗಿ, ಎಬಿ ರಕ್ತ ಗು೦ಪು ಮಾತ್ರ ಒ೦ದೇರೀತಿಯ ಆ‍ಯ್‌೦ಟಿ-ಎ ಮತ್ತು ಆ೦ಟಿ-ಬಿ ರೋಗನಿರೋಧಕಗಳನ್ನು ಹೊ೦ದಿರುವುದಿಲ್ಲ. ಇದು ಏಕೆ೦ದರೆ ಆರ್‌ಬಿಸಿ ಯಲ್ಲಿ ಎ ಮತ್ತು ಬಿ ಎರಡೂ ಪ್ರತಿಜನಕಗಳು ಕ೦ಡುಬರುತ್ತವೆ ಮತ್ತು ಅವು ಎರಡೂ ಸ್ವಯ೦ ಪ್ರತಿಜನಕ

ಗಳಾಗಿರುತ್ತವೆ, ಹಾಗಾಗಿ ಅವು ಎಲ್ಲಾ ಗು೦ಪುಗಳಿ೦ದಲೂ ರಕ್ತವನ್ನು ಪಡೆಯಬಹುದು ಮತ್ತು ಅವು ಸಾರ್ವತ್ರಿಕ ಗ್ರಾಹಿಗಳಾಗಿರುತ್ತವೆ.ಎ ರಕ್ತ ಗು೦ಪಿನ ಮಾನವರು ಎ ಗು೦ಪು ಮತ್ತು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.ಬಿ ರಕ್ತ ಗು೦ಪಿನ ಮಾನವರು ಬಿ ಗು೦ಪು ಮತ್ತು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.ಎಬಿ ರಕ್ತ ಗು೦ಪಿನ ಮಾನವರು ಎ ಗು೦ಪು, ಬಿ ಗು೦ಪು, ಎಬಿ ಗು೦ಪು ಅಥವಾ ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.ಒ ರಕ್ತ ಗು೦ಪಿನ ಮಾನವರು ಒ ರಕ್ತ ಗು೦ಪಿನ ದಾನಿಗಳಿ೦ದ ಮಾತ್ರ ರಕ್ತವನ್ನು ಪಡೆಯಬಹುದು.ಎ, ಬಿ, ಎಬಿ ಮತ್ತು ಒ ರಕ್ತ ಗು೦ಪಿನ ಮಾನವರು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು. ಒ ರಕ್ತ ಗು೦ಪು ಸಾರ್ವತ್ರಿಕ ದಾತ ಎ೦ದು ಕರೆಯಲ್ಪಡುತ್ತದೆ."ಸಾರ್ವತ್ರಿಕ ಗ್ರಾಹಿ" ಈ ಸಿದ್ಧ ನಿಯಮಕ್ಕೆ ಅಪವಾದವೆ೦ದರೆ ಇದು ಕೇವಲ ಸರಿಯಾಗಿ ಪ್ಯಾಕ್ ಮಾಡಿದ ಆರ್‌ಬಿಸಿ ಗೆ ಮಾತ್ರ ಅನ್ವಯಿಸುತ್ತದೆ, ಮತ್ತು ಎಲ್ಲಾ ರಕ್ತದ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ.
           (ವಿವಿಧ ಮೂಲಗಳಿಂದ)
   -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 

ಶ್ಯಮಂತಕ ಮಣಿ

ಒಮ್ಮೆ ಗಣೇಶ ತನ್ನ ಹುಟ್ಬಿದ ದಿನ ತಾಯಿ ಪಾರ್ವತಿಯು ಬಡಿಸಿದ ಕಜ್ಜಾಯಗಳನ್ನೆಲ್ಲ ತಿಂದು ತನ್ನ ವಾಹನ ಮೂಷಕನ ಮೇಲೇರಿ ಬರುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ಒಂದು ಹಾವು ಬಂತು ಅದನ್ನು ನೋಡಿದೊಡನೆ ಮೂಷಕವು ಹೆದರಿ ಗಣಪನನ್ನು ಬಿಟ್ಟು ಓಡಿ ಹೋಗಿ ಸನಿಹದಲ್ಲಿದ್ದ ಬಿಲವನ್ನು ಸೇರಿಕೊಂಡಿತು. ವಾಹನ ಸವಾರಿ ಮಾಡುತ್ತಿದ್ದ ವಿಶಾಲಕಾಯದ ಗಣಪ ತಕ್ಷಣ ನೆಲಕ್ಕುರುಳಿ ಬಿದ್ದ. ಈ ಸನ್ನಿವೇಷವನ್ನು ಆಕಾಶದಲ್ಲಿರುವ ಚಂದ್ರನು ನೋಡಿ ಗಹಗಹಿಸಿ ನಕ್ಕನು. ಇದರಿಂದ ಕೋಪಗೊಂಡ ಗಣಪತಿಯು ಚಂದ್ರನಿಗೆ ” ಯಾರು ನನ್ನ ಹುಟ್ಟು ಹಬ್ಬದ ದಿನ ನಿನ್ನನ್ನು ನೋಡುವರೋ ಅವರಿಗೆ ಕಳ್ಳತನದ ಅಥವಾ ಅವಮಾನಕರ ಆರೋಪಗಳು ಬರಲಿ” ಎಂದು ಶಾಪವಿತ್ತನು. ಇದರಿಂದ ದುಃಖಿತನಾದ ಚಂದ್ರ ಕ್ಷಮೆ ಬೇಡಲಾಗಿ ಶ್ಯಮಂತಖೋಪಾಖ್ಯಾನದಿಂದ ಅಪವಾದದಿಂದ ಮುಕ್ತರಾಗುವರೆಂದು  ಅಭಯ ನೀಡಿದನು. ಹಾಗೇ ಮೂಷಕನ ಭಯಕ್ಕೆ ಕಾರಣವಾದ ಹಾವನ್ನು ತನ್ನ ಟೊಂಕಪಟ್ಟಿಯನ್ನಾಗಿ ಸುತ್ತಿಕೊಂಡು ಮೂಷಕನನ್ನು ಭಯಮುಕ್ತನನ್ನಾಗಿಸಿ ತನ್ನ ಲೋಕಕ್ಕೆ ಹೋದನು.

      ಹಿಂದೂ ಪಂಚಾಂಗ ರೀತಿ ಬರುವ ಬಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನವನ್ನು ಶ್ರೀ ಗಣಪತಿಯ ಹುಟ್ಟು ಹಬ್ಬವನ್ನಾಗಿ ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬದ ಸನ್ನಿವೇಶದಲ್ಲಿ ಅಪವಾದವೆಂಬಂತೆ ಚುತುರ್ಥಿಯ ದಿನ ಚಂದ್ರ ದರ್ಶನ ಮಾಡಿದರೆ, ಶ್ರೀ ಗಣೇಶನ ಕೋಪಕ್ಕೆ ಗುರಿಯಾಗಿ, ದೋಷಪ್ರಾಪ್ತಿಯಾಗಿ, ಕಳ್ಳತನದ ಅಪವಾದಗಳಿಂದ ಅವಮಾನಕ್ಕೊಳಗಾಗುವ ಸಂದರ್ಭಗಳು ಬಂದೊದಗುತ್ತವೆಂದು ಪುರಾಣಗಳಲ್ಲಿ ತಿಳಿಸಿದೆ. ಶ್ಯಮಂತಕ ಮಣಿಯ ಕಥೆ ಓದುವುದು, ಕೇಳುವುದು ಹಾಗೂ ಹೇಳುವುದರಿಂದ ಶ್ರೀಗಣೇಶನ ಕೃಪೆಗೆ ಪಾತ್ರರಾಗಿ ಈ ದೋಷ ಪರಿಹಾರವಾಗುವದೆಂದೂ ಸಹ ತಿಳಿಸಿದೆ.ದ್ವಾಪರಯುಗದಲ್ಲಿ ಯದುಕುಲದಲ್ಲಿ ಜನಿಸಿದ ಪರಮಾತ್ಮನ ಅವತಾರವಾದ ಶ್ರೀಕೃಷ್ಣನೂ ಕೂಡಾ ಈ ಅಪವಾದದಿಂದ ಹೊರತಾಗಿಲ್ಲ ಎನ್ನುವುದೇ ಈ ಕಥೆಯ ಅಂತರಾರ್ಥ.
    ದ್ವಾರಕೆಯ ನಿರ್ಮಾಣ ನಂತರದ ಘಟನೆ. ಯದುಕುಲದಲ್ಲಿ ಸತ್ರಾಜಿತನೆಂಬ ರಾಜರ್ಷಿಯ ತಪಸ್ಸಿಗೆ ಮೆಚ್ಚಿ ಸೂರ್ಯದೇವನು ಶ್ಯಮಂತಕ ಹೆಸರಿನ ಮಣಿರತ್ನವನ್ನು ವರರೂಪದಲ್ಲಿ ದಯಪಾಲಿಸಿದ್ದನು. ಈ ಮಣಿಯು ನಿತ್ಯ ಹೊನ್ನರಾಶಿಯನ್ನು ಕೊಡುತ್ತಿತ್ತು. ಈ ವಿಷಯವು ದ್ವಾರಕೆಯ ನಿವಾಸಿಗಳ ಮೂಲಕ ಶ್ರೀಕೃಷ್ಣನಿಗೆ ತಲುಪಿ, ಸತ್ರಾಜಿತನನ್ನು ಆಸ್ಥಾನಕ್ಕೆ ಕರೆಸಿ ಸಾಮಾನ್ಯ ಪ್ರಜೆಗಳ ಬಳಿ ಅಮೂಲ್ಯರತ್ನವಿದ್ದರೆ ಅವರ ಜೀವಕ್ಕೆ ಅಪಾಯವೆಂದೂ, ಪ್ರಜೆಗಳ ಕಲ್ಯಾಣಕ್ಕಾಗಿ ಮಣಿಯನ್ನು ರಾಜಕೋಶಕ್ಕೊಪ್ಪಿಸುವಂತೆ ವಿನಂತಿಸಿಕೊಂಡನು. ಸತ್ರಾಜಿತನು ಶ್ರೀ ಕೃಷ್ಣನ ಮಾತನ್ನು ತಿರಸ್ಕರಿಸಿ ನನ್ನ ತಪಸ್ಸಿಗೆ ವರದಾನವಾಗಿ ಲಭಿಸಿದ್ದನ್ನು ನಾನು ಕೊಡಲಾರೆನೆಂದನು.ಶ್ರೀ ಕೃಷ್ಣನು ಮರುಮಾತನಾಡದೇ ಕಳಿಸಿಕೊಟ್ಟನು. ಇವರೀರ್ವರಲ್ಲಿ ನಡೆದ ಸಂವಾದ ದ್ವಾರಕೆಯಲ್ಲೆಲ್ಲ ತಿಳಿದಿತ್ತು. ಈ ಘಟನೆಯ ನಂತರ ಯಾರಾದರೂ ಅಪಹರಿಸಬಹುದೆಂದು ಸತ್ರಾಜಿತನು ಚಿಂತಿತನಾದನು. ಅದೇ ಸಮಯದಲ್ಲಿ ವೀರನೂ, ಶೂರನೂ ಆತನ ಸಹೋದರ ಪ್ರಸೇನನು ಮಣಿಯನ್ನು ಕಂಠದಲ್ಲಿ ಧಾರಣ ಮಾಡಿ ಸಂರಕ್ಷಿಸುತ್ತೇನೆ ಎಂದು ಅಣ್ಣನಿಗೆ ಅಭಯ ನೀಡಿ ಕಂಠದಲ್ಲಿ ಧರಿಸಿ ಓಡಾಡಿಕೊಂಡಿದ್ದನು.
     ಸ್ವಲ್ಪ ದಿನ ಬಳಿಕ ಗಣೇಶ ಚತುರ್ಥಿಯ ದಿನವೇ ಶ್ರೀಕೃಷ್ಣನಿಗೆ ನೀರಿನಲ್ಲಿ ಚಂದ್ರನ ಪ್ರತಿಬಿಂಬದ ದರ್ಶನವಾಯಿತು. ಸರ್ವಾಂತರ್ಯಾಮಿಯಾದ ಭಗವಂತನಿಗೆ ತಿಳಿಯದ್ದೇನಿದೆ. ಚೌತಿ ಚಂದ್ರ ದರ್ಶನದ ದೋಷದ ಬಗ್ಗೆ ಮನಸ್ಸಿನಲ್ಲಿ ಅಳುಕಿತ್ತು.ಕೆಲ ಕಾಲದ ನಂತರ ಎಂದಿನಂತೆ ಪ್ರಸೇನನು ಬೇಟೆಗಾಗಿ ಕಾಡಿಗೆ ತೆರಳಿದಾಗ ಈತನ ಕಂಠದಲ್ಲಿರುವ ಮಣಿರತ್ನಕ್ಕೆ ಆಸೆ ಪಟ್ಟು ಒಂದು ಸಿಂಹವು ಇವನನ್ನು ಕೊಂದು ಮಣಿಯನ್ನು ಅಪಹರಿಸಿತು ಮತ್ತು ತಾನು ಕಂಠದಲ್ಲಿ ಧರಿಸಿತು..ಈ ಸಿಂಹದ ಕೊರಳಲ್ಲಿರುವ ಮಣಿಯನ್ನು ಜಾಂಬವಂತನು (ತ್ರೇತಾಯುಗದ ರಾಮವತಾರದಲ್ಲಿ ಬರುವ ಜಾಂಬವಂತ) ಸಿಂಹದೊಡನೆ ಕಾದಾಡಿ ಕೊಂದು ಮಣಿಯನ್ನು ತನ್ನದಾಗಿಸಿಕೊಂಡು, ತನ್ನ ಮಗಳಿಗೆ ಉಪಹಾರ ರೂಪದಲ್ಲಿ ನೀಡಿದನು. ಅದು ಅವಳ ಕಂಠವನ್ನಲಂಕರಿಸಿತು. ಈ ಎಲ್ಲಾ ವಿದ್ಯಮಾನಗಳು ದ್ವಾರಕೆವಾಸಿಗಳಿಗೆ ತಿಳಿದಿರಲಿಲ್ಲ.

     ಬೇಟೆಗೆ ಹೋದ ಪ್ರಸೇನನು ಮರಳದಿದ್ದದನ್ನು ನೋಡಿ ಶ್ರೀ ಕೃಷ್ಣನ ಮೇಲೆ ಸಂಶಯ ವ್ಯಕ್ತಪಡಿಸಿ ಶ್ಯಮಂತಕ ಮಣಿಗಾಗಿ ಹತ್ಯಗೈದಿರಬಹುದೆಂದು ಆಡಿಕೊಳ್ಳಹತ್ತಿದರು. ಈ ವಿಷಯವನ್ನು ಗುಪ್ತಚರರ ಮೂಲಕ ತಿಳಿದ ಶ್ರೀಕೃಷ್ಣ ಪ್ರಸೇನನನ್ನು ಹುಡುಕುವದಕ್ಕಾಗಿ ಆತ ಹೋದ ಮಾರ್ಗವನ್ನನುಸರಿಸಿ ಆಪ್ತ ಸೈನಿಕರೊಂದಿಗೆ ಕಾಡಿಗೆ ತೆರಳಿದನು. ಅನತಿ ದೂರದಲ್ಲಿ ಜೀರ್ಣಾವಸ್ತೆಯಲ್ಲಿದ್ದ ಶವವನ್ನು ಪ್ರಸೇನನದೆಂದು ಗುರುತಿಸಿದರು. ಆದರೆ ಕಂಠದಲ್ಲಿ ಮಣಿ ಇಲ್ಲದ್ದನ್ನು ಕಂಡರು, ಶವದ ಮೇಲೆ ಸಿಂಹದ ಉಗುರಿನಿಂದಾದ ಗಾಯವನ್ನು ಗುರ್ತಿಸಿದರು. ಕಾದಾಡುವಾಗ ಮಣಿಯು ಎಲ್ಲಿಯಾದರೂ ಬಿದ್ದಿರಬಹುದೆಂದು
ಸುತ್ತಲೆಲ್ಲ ಸೈನಿಕರೊಂದಿಗೆ ಹುಡುಕಾಡಿದಾಗ, ಸಿಂಹದ ಶವವೂ ಸಿಕ್ಕಿತು ಅದರ ದೇಹದಲ್ಲಿಯೂ ಕೂಡಾ ಮಣಿ ಸಿಗಲಿಲ್ಲ. ಸಿಂಹದ ದೇಹದಲ್ಲಾದ ಕರಡಿಯ ಗುರುತನ್ನು ಗ್ರಹಿಸಿ ಕರಡಿಯೇ ಮಣಿಯನ್ನು ಅಪಹರಿಸಿರಬಹುದೆಂದು ಉಹಿಸಿದರು ಮತ್ತು ಕರಡಿಯ ಪಾದದ ಹೆಜ್ಜೆಯ ಗುರುತನ್ನನುಸರಿಸಿ ಹುಡುಕುತ್ತಾ ಸಾಗಿದರು. ಆ ಪಾದದ ಗುರುತುಗಳು ಗುಹೆಯ ಒಳತನಕ ಇದ್ದುದನ್ನು ಗಮನಿಸಿದರು.
    ಶ್ರೀಕೃಷ್ಣನು ತನ್ನ ಸಹಚರರನ್ನೆಲ್ಲಾ ಗುಹೆಯ ದ್ವಾರದ ಬಳಿ ನಿಲ್ಲಿಸಿ, ತಾನೊಬ್ಬನೇ ಗುಹೆಯೊಳಗೆ ಕರಡಿಯನ್ನು ಹುಡುಕುತ್ತಾ ನಡೆದನು. ಸ್ವಲ್ಪ ದೂರ ಕ್ರಮಿಸಿದ ನಂತರ ಒಂದು ಕನ್ಯೆಯ ಕೊರಳಲ್ಲಿ ಶ್ಯಮಂತಕ ಮಣಿಯು ರಾರಾಜಿಸುತ್ತಿರುವದನ್ನು ಕಂಡನು. ಅವಳು ಜಾಂಬವಂತನ ಮಗಳು ಜಾಂಬವತಿಯಾಗಿದ್ದಳು. ಅವಳ ಬಳಿ ಬಂದು ಮಣಿರತ್ನವನ್ನು ತನಗೊಪ್ಪಿಸುವಂತೆ  ಬೇಡಿಕೊಂಡನು. ಆ ಕನ್ಯೆಯೂ ಕೂಡಲೇ ತಂದೆಯನ್ನು ಕೂಗಿದಳು. ಯಾವುದೋ ನರಮಾನವನನ್ನು ಗುಹೆಯಲ್ಲಿ ಕಂಡು ಜಾಂಬವಂತನು ಕುಪಿತನಾದನು ಮತ್ತು ಕೃಷ್ಣನ ಮೇಲೆ ಆಕ್ರಮಣ ಮಾಡಿದನು. ಪ್ರತಿಯಾಗಿ ಕೃಷ್ಣನೂ ಸಹ ಯುದ್ಧ ಮಾಡಹತ್ತಿದನು. ಇಬ್ಬರಲ್ಲಿಯೂ ಘನಘೋರ ಯುದ್ಧವು ಬಹು ದಿನಗಳ ಕಾಲ ನಡೆಯಿತು. ಒಬ್ಬರೂ ಸೋಲುವ ಲಕ್ಷಣಗಳಿರಲಿಲ್ಲ ಆದರೂ ಜಾಂಬವಂತನ ಶೌರ್ಯ ಮತ್ತು ಉತ್ಸಾಹದಿಂದ ಆತನೇ ಗೆಲ್ಲುವನೆಂದು ಭಾಸವಾಗುತ್ತಿತ್ತು. ಇದು ಭಕ್ತನ ಮತ್ತು ಭಗವಂತನ ನಡುವಿನ ಯುದ್ಧ.

    ಜಾಂಬವಂತನು ರಾಮಭಕ್ತ, ಶ್ರೀಕೃಷ್ಣನು ಸಾಕ್ಷಾತ್ ಭಗವಂತ. ಆದರೆ ಶ್ರೀಕೃಷ್ಣನೂ ರಾಮನೇ, ಎಂದು ಮಾತ್ರ ಜಾಂಬವಂತನಿಗೆ ತಿಳಿಯದಿದ್ದುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ಇದನ್ನರಿತ ಶ್ರೀಕೃಷ್ಣನು ಜಾಂಬವಂತನಿಗೆ ರಾಮನ ರೂಪದಲ್ಲಿ ಕಾಣಿಸಿಕೊಂಡನು. ಆಗ ಜಾಂಬವಂತನು ಯುದ್ಧವನ್ನು ನಿಲ್ಲಿಸಿ ಕೃಷ್ಣನಲ್ಲಿ ಕ್ಷಮೆಯಾಚಿಸಿ ಶ್ಯಮಂತಕ ಮಣಿಯನ್ನು ಕೊಟ್ಟು, ತನ್ನ ಮಗಳನ್ನೂ ಧಾರೆಯೆರೆದು ಕೊಟ್ಟನು. ಜಾಂಬವಂತನು ಆರಾಧ್ಯ ದೈವನಲ್ಲಿ ಪ್ರಾರ್ಥಿಸಿ ದೀರ್ಘಯಸ್ಸಿನಿಂದ ಮುಕ್ತಿಯನ್ನು ಬಯಸಿ, ಮೋಕ್ಷವನ್ನು ಪಡೆಯುತ್ತಾನೆ. ತದನಂತರ ಶ್ಯಮಂತಕ ಮಣಿ, ಪತ್ನಿ ಜಾಂಬವತಿ ಮತ್ತು ಸಹಚರರಿಂದೊಡಗೂಡಿ ದ್ವಾರಕೆಗೆ ಹಿಂತಿರುಗಿ ನಡೆದ ವೃತ್ತಾಂತವನ್ನೆಲ್ಲಾ ಪ್ರಜೆಗಳಿಗೆ ತಿಳಿಸಿದನು. ತನ್ನ ಮೇಲೆ ಬಂದ ಕಳ್ಳತನದ ಆರೋಪದಿಂದ ಮುಕ್ತನಾದನು.
     ನಂತರ ಸಂದರ್ಭದಲ್ಲಿ ಸತ್ರಾಜಿತನ ಪುತ್ರಿ ಸತ್ಯಭಾಮೆಯನ್ನು ಶ್ರೀಕೃಷ್ಣನು ವರಿಸಬೇಕಾಗಿ ಬಂತು.ಈ ಯುದ್ಧದಲ್ಲಾಗಿದ್ದು ಭಕ್ತಿಗೆ ಜಯ, ಸರ್ವಶಕ್ತನಾದ ಭಗವಂತನಿಗಲ್ಲ.
           (ವಿವಿಧ ಮೂಲಗಳಿಂದ)

-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 

ಶ್ಯಮಂತಕ ಮಣಿ

ಒಮ್ಮೆ ಗಣೇಶ ತನ್ನ ಹುಟ್ಬಿದ ದಿನ ತಾಯಿ ಪಾರ್ವತಿಯು ಬಡಿಸಿದ ಕಜ್ಜಾಯಗಳನ್ನೆಲ್ಲ ತಿಂದು ತನ್ನ ವಾಹನ ಮೂಷಕನ ಮೇಲೇರಿ ಬರುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ಒಂದು ಹಾವು ಬಂತು ಅದನ್ನು ನೋಡಿದೊಡನೆ ಮೂಷಕವು ಹೆದರಿ ಗಣಪನನ್ನು ಬಿಟ್ಟು ಓಡಿ ಹೋಗಿ ಸನಿಹದಲ್ಲಿದ್ದ ಬಿಲವನ್ನು ಸೇರಿಕೊಂಡಿತು. ವಾಹನ ಸವಾರಿ ಮಾಡುತ್ತಿದ್ದ ವಿಶಾಲಕಾಯದ ಗಣಪ ತಕ್ಷಣ ನೆಲಕ್ಕುರುಳಿ ಬಿದ್ದ. ಈ ಸನ್ನಿವೇಷವನ್ನು ಆಕಾಶದಲ್ಲಿರುವ ಚಂದ್ರನು ನೋಡಿ ಗಹಗಹಿಸಿ ನಕ್ಕನು. ಇದರಿಂದ ಕೋಪಗೊಂಡ ಗಣಪತಿಯು ಚಂದ್ರನಿಗೆ ” ಯಾರು ನನ್ನ ಹುಟ್ಟು ಹಬ್ಬದ ದಿನ ನಿನ್ನನ್ನು ನೋಡುವರೋ ಅವರಿಗೆ ಕಳ್ಳತನದ ಅಥವಾ ಅವಮಾನಕರ ಆರೋಪಗಳು ಬರಲಿ” ಎಂದು ಶಾಪವಿತ್ತನು. ಇದರಿಂದ ದುಃಖಿತನಾದ ಚಂದ್ರ ಕ್ಷಮೆ ಬೇಡಲಾಗಿ ಶ್ಯಮಂತಖೋಪಾಖ್ಯಾನದಿಂದ ಅಪವಾದದಿಂದ ಮುಕ್ತರಾಗುವರೆಂದು  ಅಭಯ ನೀಡಿದನು. ಹಾಗೇ ಮೂಷಕನ ಭಯಕ್ಕೆ ಕಾರಣವಾದ ಹಾವನ್ನು ತನ್ನ ಟೊಂಕಪಟ್ಟಿಯನ್ನಾಗಿ ಸುತ್ತಿಕೊಂಡು ಮೂಷಕನನ್ನು ಭಯಮುಕ್ತನನ್ನಾಗಿಸಿ ತನ್ನ ಲೋಕಕ್ಕೆ ಹೋದನು.
      ಹಿಂದೂ ಪಂಚಾಂಗ ರೀತಿ ಬರುವ ಬಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನವನ್ನು ಶ್ರೀ ಗಣಪತಿಯ ಹುಟ್ಟು ಹಬ್ಬವನ್ನಾಗಿ ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬದ ಸನ್ನಿವೇಶದಲ್ಲಿ ಅಪವಾದವೆಂಬಂತೆ ಚುತುರ್ಥಿಯ ದಿನ ಚಂದ್ರ ದರ್ಶನ ಮಾಡಿದರೆ, ಶ್ರೀ ಗಣೇಶನ ಕೋಪಕ್ಕೆ ಗುರಿಯಾಗಿ, ದೋಷಪ್ರಾಪ್ತಿಯಾಗಿ, ಕಳ್ಳತನದ ಅಪವಾದಗಳಿಂದ ಅವಮಾನಕ್ಕೊಳಗಾಗುವ ಸಂದರ್ಭಗಳು ಬಂದೊದಗುತ್ತವೆಂದು ಪುರಾಣಗಳಲ್ಲಿ ತಿಳಿಸಿದೆ. ಶ್ಯಮಂತಕ ಮಣಿಯ ಕಥೆ ಓದುವುದು, ಕೇಳುವುದು ಹಾಗೂ ಹೇಳುವುದರಿಂದ ಶ್ರೀಗಣೇಶನ ಕೃಪೆಗೆ ಪಾತ್ರರಾಗಿ ಈ ದೋಷ ಪರಿಹಾರವಾಗುವದೆಂದೂ ಸಹ ತಿಳಿಸಿದೆ.ದ್ವಾಪರಯುಗದಲ್ಲಿ ಯದುಕುಲದಲ್ಲಿ ಜನಿಸಿದ ಪರಮಾತ್ಮನ ಅವತಾರವಾದ ಶ್ರೀಕೃಷ್ಣನೂ ಕೂಡಾ ಈ ಅಪವಾದದಿಂದ ಹೊರತಾಗಿಲ್ಲ ಎನ್ನುವುದೇ ಈ ಕಥೆಯ ಅಂತರಾರ್ಥ.
    ದ್ವಾರಕೆಯ ನಿರ್ಮಾಣ ನಂತರದ ಘಟನೆ. ಯದುಕುಲದಲ್ಲಿ ಸತ್ರಾಜಿತನೆಂಬ ರಾಜರ್ಷಿಯ ತಪಸ್ಸಿಗೆ ಮೆಚ್ಚಿ ಸೂರ್ಯದೇವನು ಶ್ಯಮಂತಕ ಹೆಸರಿನ ಮಣಿರತ್ನವನ್ನು ವರರೂಪದಲ್ಲಿ ದಯಪಾಲಿಸಿದ್ದನು. ಈ ಮಣಿಯು ನಿತ್ಯ ಹೊನ್ನರಾಶಿಯನ್ನು ಕೊಡುತ್ತಿತ್ತು. ಈ ವಿಷಯವು ದ್ವಾರಕೆಯ ನಿವಾಸಿಗಳ ಮೂಲಕ ಶ್ರೀಕೃಷ್ಣನಿಗೆ ತಲುಪಿ, ಸತ್ರಾಜಿತನನ್ನು ಆಸ್ಥಾನಕ್ಕೆ ಕರೆಸಿ ಸಾಮಾನ್ಯ ಪ್ರಜೆಗಳ ಬಳಿ ಅಮೂಲ್ಯರತ್ನವಿದ್ದರೆ ಅವರ ಜೀವಕ್ಕೆ ಅಪಾಯವೆಂದೂ, ಪ್ರಜೆಗಳ ಕಲ್ಯಾಣಕ್ಕಾಗಿ ಮಣಿಯನ್ನು ರಾಜಕೋಶಕ್ಕೊಪ್ಪಿಸುವಂತೆ ವಿನಂತಿಸಿಕೊಂಡನು. ಸತ್ರಾಜಿತನು ಶ್ರೀ ಕೃಷ್ಣನ ಮಾತನ್ನು ತಿರಸ್ಕರಿಸಿ ನನ್ನ ತಪಸ್ಸಿಗೆ ವರದಾನವಾಗಿ ಲಭಿಸಿದ್ದನ್ನು ನಾನು ಕೊಡಲಾರೆನೆಂದನು.ಶ್ರೀ ಕೃಷ್ಣನು ಮರುಮಾತನಾಡದೇ ಕಳಿಸಿಕೊಟ್ಟನು. ಇವರೀರ್ವರಲ್ಲಿ ನಡೆದ ಸಂವಾದ ದ್ವಾರಕೆಯಲ್ಲೆಲ್ಲ ತಿಳಿದಿತ್ತು. ಈ ಘಟನೆಯ ನಂತರ ಯಾರಾದರೂ ಅಪಹರಿಸಬಹುದೆಂದು ಸತ್ರಾಜಿತನು ಚಿಂತಿತನಾದನು. ಅದೇ ಸಮಯದಲ್ಲಿ ವೀರನೂ, ಶೂರನೂ ಆತನ ಸಹೋದರ ಪ್ರಸೇನನು ಮಣಿಯನ್ನು ಕಂಠದಲ್ಲಿ ಧಾರಣ ಮಾಡಿ ಸಂರಕ್ಷಿಸುತ್ತೇನೆ ಎಂದು ಅಣ್ಣನಿಗೆ ಅಭಯ ನೀಡಿ ಕಂಠದಲ್ಲಿ ಧರಿಸಿ ಓಡಾಡಿಕೊಂಡಿದ್ದನು.
     ಸ್ವಲ್ಪ ದಿನ ಬಳಿಕ ಗಣೇಶ ಚತುರ್ಥಿಯ ದಿನವೇ ಶ್ರೀಕೃಷ್ಣನಿಗೆ ನೀರಿನಲ್ಲಿ ಚಂದ್ರನ ಪ್ರತಿಬಿಂಬದ ದರ್ಶನವಾಯಿತು. ಸರ್ವಾಂತರ್ಯಾಮಿಯಾದ ಭಗವಂತನಿಗೆ ತಿಳಿಯದ್ದೇನಿದೆ. ಚೌತಿ ಚಂದ್ರ ದರ್ಶನದ ದೋಷದ ಬಗ್ಗೆ ಮನಸ್ಸಿನಲ್ಲಿ ಅಳುಕಿತ್ತು.ಕೆಲ ಕಾಲದ ನಂತರ ಎಂದಿನಂತೆ ಪ್ರಸೇನನು ಬೇಟೆಗಾಗಿ ಕಾಡಿಗೆ ತೆರಳಿದಾಗ ಈತನ ಕಂಠದಲ್ಲಿರುವ ಮಣಿರತ್ನಕ್ಕೆ ಆಸೆ ಪಟ್ಟು ಒಂದು ಸಿಂಹವು ಇವನನ್ನು ಕೊಂದು ಮಣಿಯನ್ನು ಅಪಹರಿಸಿತು ಮತ್ತು ತಾನು ಕಂಠದಲ್ಲಿ ಧರಿಸಿತು..ಈ ಸಿಂಹದ ಕೊರಳಲ್ಲಿರುವ ಮಣಿಯನ್ನು ಜಾಂಬವಂತನು (ತ್ರೇತಾಯುಗದ ರಾಮವತಾರದಲ್ಲಿ ಬರುವ ಜಾಂಬವಂತ) ಸಿಂಹದೊಡನೆ ಕಾದಾಡಿ ಕೊಂದು ಮಣಿಯನ್ನು ತನ್ನದಾಗಿಸಿಕೊಂಡು, ತನ್ನ ಮಗಳಿಗೆ ಉಪಹಾರ ರೂಪದಲ್ಲಿ ನೀಡಿದನು. ಅದು ಅವಳ ಕಂಠವನ್ನಲಂಕರಿಸಿತು. ಈ ಎಲ್ಲಾ ವಿದ್ಯಮಾನಗಳು ದ್ವಾರಕೆವಾಸಿಗಳಿಗೆ ತಿಳಿದಿರಲಿಲ್ಲ.
     ಬೇಟೆಗೆ ಹೋದ ಪ್ರಸೇನನು ಮರಳದಿದ್ದದನ್ನು ನೋಡಿ ಶ್ರೀ ಕೃಷ್ಣನ ಮೇಲೆ ಸಂಶಯ ವ್ಯಕ್ತಪಡಿಸಿ ಶ್ಯಮಂತಕ ಮಣಿಗಾಗಿ ಹತ್ಯಗೈದಿರಬಹುದೆಂದು ಆಡಿಕೊಳ್ಳಹತ್ತಿದರು. ಈ ವಿಷಯವನ್ನು ಗುಪ್ತಚರರ ಮೂಲಕ ತಿಳಿದ ಶ್ರೀಕೃಷ್ಣ ಪ್ರಸೇನನನ್ನು ಹುಡುಕುವದಕ್ಕಾಗಿ ಆತ ಹೋದ ಮಾರ್ಗವನ್ನನುಸರಿಸಿ ಆಪ್ತ ಸೈನಿಕರೊಂದಿಗೆ ಕಾಡಿಗೆ ತೆರಳಿದನು. ಅನತಿ ದೂರದಲ್ಲಿ ಜೀರ್ಣಾವಸ್ತೆಯಲ್ಲಿದ್ದ ಶವವನ್ನು ಪ್ರಸೇನನದೆಂದು ಗುರುತಿಸಿದರು. ಆದರೆ ಕಂಠದಲ್ಲಿ ಮಣಿ ಇಲ್ಲದ್ದನ್ನು ಕಂಡರು, ಶವದ ಮೇಲೆ ಸಿಂಹದ ಉಗುರಿನಿಂದಾದ ಗಾಯವನ್ನು ಗುರ್ತಿಸಿದರು. ಕಾದಾಡುವಾಗ ಮಣಿಯು ಎಲ್ಲಿಯಾದರೂ ಬಿದ್ದಿರಬಹುದೆಂದು
ಸುತ್ತಲೆಲ್ಲ ಸೈನಿಕರೊಂದಿಗೆ ಹುಡುಕಾಡಿದಾಗ, ಸಿಂಹದ ಶವವೂ ಸಿಕ್ಕಿತು ಅದರ ದೇಹದಲ್ಲಿಯೂ ಕೂಡಾ ಮಣಿ ಸಿಗಲಿಲ್ಲ. ಸಿಂಹದ ದೇಹದಲ್ಲಾದ ಕರಡಿಯ ಗುರುತನ್ನು ಗ್ರಹಿಸಿ ಕರಡಿಯೇ ಮಣಿಯನ್ನು ಅಪಹರಿಸಿರಬಹುದೆಂದು ಉಹಿಸಿದರು ಮತ್ತು ಕರಡಿಯ ಪಾದದ ಹೆಜ್ಜೆಯ ಗುರುತನ್ನನುಸರಿಸಿ ಹುಡುಕುತ್ತಾ ಸಾಗಿದರು. ಆ ಪಾದದ ಗುರುತುಗಳು ಗುಹೆಯ ಒಳತನಕ ಇದ್ದುದನ್ನು ಗಮನಿಸಿದರು.
    ಶ್ರೀಕೃಷ್ಣನು ತನ್ನ ಸಹಚರರನ್ನೆಲ್ಲಾ ಗುಹೆಯ ದ್ವಾರದ ಬಳಿ ನಿಲ್ಲಿಸಿ, ತಾನೊಬ್ಬನೇ ಗುಹೆಯೊಳಗೆ ಕರಡಿಯನ್ನು ಹುಡುಕುತ್ತಾ ನಡೆದನು. ಸ್ವಲ್ಪ ದೂರ ಕ್ರಮಿಸಿದ ನಂತರ ಒಂದು ಕನ್ಯೆಯ ಕೊರಳಲ್ಲಿ ಶ್ಯಮಂತಕ ಮಣಿಯು ರಾರಾಜಿಸುತ್ತಿರುವದನ್ನು ಕಂಡನು. ಅವಳು ಜಾಂಬವಂತನ ಮಗಳು ಜಾಂಬವತಿಯಾಗಿದ್ದಳು. ಅವಳ ಬಳಿ ಬಂದು ಮಣಿರತ್ನವನ್ನು ತನಗೊಪ್ಪಿಸುವಂತೆ  ಬೇಡಿಕೊಂಡನು. ಆ ಕನ್ಯೆಯೂ ಕೂಡಲೇ ತಂದೆಯನ್ನು ಕೂಗಿದಳು. ಯಾವುದೋ ನರಮಾನವನನ್ನು ಗುಹೆಯಲ್ಲಿ ಕಂಡು ಜಾಂಬವಂತನು ಕುಪಿತನಾದನು ಮತ್ತು ಕೃಷ್ಣನ ಮೇಲೆ ಆಕ್ರಮಣ ಮಾಡಿದನು. ಪ್ರತಿಯಾಗಿ ಕೃಷ್ಣನೂ ಸಹ ಯುದ್ಧ ಮಾಡಹತ್ತಿದನು. ಇಬ್ಬರಲ್ಲಿಯೂ ಘನಘೋರ ಯುದ್ಧವು ಬಹು ದಿನಗಳ ಕಾಲ ನಡೆಯಿತು. ಒಬ್ಬರೂ ಸೋಲುವ ಲಕ್ಷಣಗಳಿರಲಿಲ್ಲ ಆದರೂ ಜಾಂಬವಂತನ ಶೌರ್ಯ ಮತ್ತು ಉತ್ಸಾಹದಿಂದ ಆತನೇ ಗೆಲ್ಲುವನೆಂದು ಭಾಸವಾಗುತ್ತಿತ್ತು. ಇದು ಭಕ್ತನ ಮತ್ತು ಭಗವಂತನ ನಡುವಿನ ಯುದ್ಧ.
    ಜಾಂಬವಂತನು ರಾಮಭಕ್ತ, ಶ್ರೀಕೃಷ್ಣನು ಸಾಕ್ಷಾತ್ ಭಗವಂತ. ಆದರೆ ಶ್ರೀಕೃಷ್ಣನೂ ರಾಮನೇ, ಎಂದು ಮಾತ್ರ ಜಾಂಬವಂತನಿಗೆ ತಿಳಿಯದಿದ್ದುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ಇದನ್ನರಿತ ಶ್ರೀಕೃಷ್ಣನು ಜಾಂಬವಂತನಿಗೆ ರಾಮನ ರೂಪದಲ್ಲಿ ಕಾಣಿಸಿಕೊಂಡನು. ಆಗ ಜಾಂಬವಂತನು ಯುದ್ಧವನ್ನು ನಿಲ್ಲಿಸಿ ಕೃಷ್ಣನಲ್ಲಿ ಕ್ಷಮೆಯಾಚಿಸಿ ಶ್ಯಮಂತಕ ಮಣಿಯನ್ನು ಕೊಟ್ಟು, ತನ್ನ ಮಗಳನ್ನೂ ಧಾರೆಯೆರೆದು ಕೊಟ್ಟನು. ಜಾಂಬವಂತನು ಆರಾಧ್ಯ ದೈವನಲ್ಲಿ ಪ್ರಾರ್ಥಿಸಿ ದೀರ್ಘಯಸ್ಸಿನಿಂದ ಮುಕ್ತಿಯನ್ನು ಬಯಸಿ, ಮೋಕ್ಷವನ್ನು ಪಡೆಯುತ್ತಾನೆ. ತದನಂತರ ಶ್ಯಮಂತಕ ಮಣಿ, ಪತ್ನಿ ಜಾಂಬವತಿ ಮತ್ತು ಸಹಚರರಿಂದೊಡಗೂಡಿ ದ್ವಾರಕೆಗೆ ಹಿಂತಿರುಗಿ ನಡೆದ ವೃತ್ತಾಂತವನ್ನೆಲ್ಲಾ ಪ್ರಜೆಗಳಿಗೆ ತಿಳಿಸಿದನು. ತನ್ನ ಮೇಲೆ ಬಂದ ಕಳ್ಳತನದ ಆರೋಪದಿಂದ ಮುಕ್ತನಾದನು.
     ನಂತರ ಸಂದರ್ಭದಲ್ಲಿ ಸತ್ರಾಜಿತನ ಪುತ್ರಿ ಸತ್ಯಭಾಮೆಯನ್ನು ಶ್ರೀಕೃಷ್ಣನು ವರಿಸಬೇಕಾಗಿ ಬಂತು.ಈ ಯುದ್ಧದಲ್ಲಾಗಿದ್ದು ಭಕ್ತಿಗೆ ಜಯ, ಸರ್ವಶಕ್ತನಾದ ಭಗವಂತನಿಗಲ್ಲ.
           (ವಿವಿಧ ಮೂಲಗಳಿಂದ)

-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 

ಶ್ಯಮಂತಕ ಮಣಿ

ಒಮ್ಮೆ ಗಣೇಶ ತನ್ನ ಹುಟ್ಬಿದ ದಿನ ತಾಯಿ ಪಾರ್ವತಿಯು ಬಡಿಸಿದ ಕಜ್ಜಾಯಗಳನ್ನೆಲ್ಲ ತಿಂದು ತನ್ನ ವಾಹನ ಮೂಷಕನ ಮೇಲೇರಿ ಬರುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ಒಂದು ಹಾವು ಬಂತು ಅದನ್ನು ನೋಡಿದೊಡನೆ ಮೂಷಕವು ಹೆದರಿ ಗಣಪನನ್ನು ಬಿಟ್ಟು ಓಡಿ ಹೋಗಿ ಸನಿಹದಲ್ಲಿದ್ದ ಬಿಲವನ್ನು ಸೇರಿಕೊಂಡಿತು. ವಾಹನ ಸವಾರಿ ಮಾಡುತ್ತಿದ್ದ ವಿಶಾಲಕಾಯದ ಗಣಪ ತಕ್ಷಣ ನೆಲಕ್ಕುರುಳಿ ಬಿದ್ದ. ಈ ಸನ್ನಿವೇಷವನ್ನು ಆಕಾಶದಲ್ಲಿರುವ ಚಂದ್ರನು ನೋಡಿ ಗಹಗಹಿಸಿ ನಕ್ಕನು. ಇದರಿಂದ ಕೋಪಗೊಂಡ ಗಣಪತಿಯು ಚಂದ್ರನಿಗೆ ” ಯಾರು ನನ್ನ ಹುಟ್ಟು ಹಬ್ಬದ ದಿನ ನಿನ್ನನ್ನು ನೋಡುವರೋ ಅವರಿಗೆ ಕಳ್ಳತನದ ಅಥವಾ ಅವಮಾನಕರ ಆರೋಪಗಳು ಬರಲಿ” ಎಂದು ಶಾಪವಿತ್ತನು. ಇದರಿಂದ ದುಃಖಿತನಾದ ಚಂದ್ರ ಕ್ಷಮೆ ಬೇಡಲಾಗಿ ಶ್ಯಮಂತಖೋಪಾಖ್ಯಾನದಿಂದ ಅಪವಾದದಿಂದ ಮುಕ್ತರಾಗುವರೆಂದು  ಅಭಯ ನೀಡಿದನು. ಹಾಗೇ ಮೂಷಕನ ಭಯಕ್ಕೆ ಕಾರಣವಾದ ಹಾವನ್ನು ತನ್ನ ಟೊಂಕಪಟ್ಟಿಯನ್ನಾಗಿ ಸುತ್ತಿಕೊಂಡು ಮೂಷಕನನ್ನು ಭಯಮುಕ್ತನನ್ನಾಗಿಸಿ ತನ್ನ ಲೋಕಕ್ಕೆ ಹೋದನು.
      ಹಿಂದೂ ಪಂಚಾಂಗ ರೀತಿ ಬರುವ ಬಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನವನ್ನು ಶ್ರೀ ಗಣಪತಿಯ ಹುಟ್ಟು ಹಬ್ಬವನ್ನಾಗಿ ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬದ ಸನ್ನಿವೇಶದಲ್ಲಿ ಅಪವಾದವೆಂಬಂತೆ ಚುತುರ್ಥಿಯ ದಿನ ಚಂದ್ರ ದರ್ಶನ ಮಾಡಿದರೆ, ಶ್ರೀ ಗಣೇಶನ ಕೋಪಕ್ಕೆ ಗುರಿಯಾಗಿ, ದೋಷಪ್ರಾಪ್ತಿಯಾಗಿ, ಕಳ್ಳತನದ ಅಪವಾದಗಳಿಂದ ಅವಮಾನಕ್ಕೊಳಗಾಗುವ ಸಂದರ್ಭಗಳು ಬಂದೊದಗುತ್ತವೆಂದು ಪುರಾಣಗಳಲ್ಲಿ ತಿಳಿಸಿದೆ. ಶ್ಯಮಂತಕ ಮಣಿಯ ಕಥೆ ಓದುವುದು, ಕೇಳುವುದು ಹಾಗೂ ಹೇಳುವುದರಿಂದ ಶ್ರೀಗಣೇಶನ ಕೃಪೆಗೆ ಪಾತ್ರರಾಗಿ ಈ ದೋಷ ಪರಿಹಾರವಾಗುವದೆಂದೂ ಸಹ ತಿಳಿಸಿದೆ.ದ್ವಾಪರಯುಗದಲ್ಲಿ ಯದುಕುಲದಲ್ಲಿ ಜನಿಸಿದ ಪರಮಾತ್ಮನ ಅವತಾರವಾದ ಶ್ರೀಕೃಷ್ಣನೂ ಕೂಡಾ ಈ ಅಪವಾದದಿಂದ ಹೊರತಾಗಿಲ್ಲ ಎನ್ನುವುದೇ ಈ ಕಥೆಯ ಅಂತರಾರ್ಥ.
    ದ್ವಾರಕೆಯ ನಿರ್ಮಾಣ ನಂತರದ ಘಟನೆ. ಯದುಕುಲದಲ್ಲಿ ಸತ್ರಾಜಿತನೆಂಬ ರಾಜರ್ಷಿಯ ತಪಸ್ಸಿಗೆ ಮೆಚ್ಚಿ ಸೂರ್ಯದೇವನು ಶ್ಯಮಂತಕ ಹೆಸರಿನ ಮಣಿರತ್ನವನ್ನು ವರರೂಪದಲ್ಲಿ ದಯಪಾಲಿಸಿದ್ದನು. ಈ ಮಣಿಯು ನಿತ್ಯ ಹೊನ್ನರಾಶಿಯನ್ನು ಕೊಡುತ್ತಿತ್ತು. ಈ ವಿಷಯವು ದ್ವಾರಕೆಯ ನಿವಾಸಿಗಳ ಮೂಲಕ ಶ್ರೀಕೃಷ್ಣನಿಗೆ ತಲುಪಿ, ಸತ್ರಾಜಿತನನ್ನು ಆಸ್ಥಾನಕ್ಕೆ ಕರೆಸಿ ಸಾಮಾನ್ಯ ಪ್ರಜೆಗಳ ಬಳಿ ಅಮೂಲ್ಯರತ್ನವಿದ್ದರೆ ಅವರ ಜೀವಕ್ಕೆ ಅಪಾಯವೆಂದೂ, ಪ್ರಜೆಗಳ ಕಲ್ಯಾಣಕ್ಕಾಗಿ ಮಣಿಯನ್ನು ರಾಜಕೋಶಕ್ಕೊಪ್ಪಿಸುವಂತೆ ವಿನಂತಿಸಿಕೊಂಡನು. ಸತ್ರಾಜಿತನು ಶ್ರೀ ಕೃಷ್ಣನ ಮಾತನ್ನು ತಿರಸ್ಕರಿಸಿ ನನ್ನ ತಪಸ್ಸಿಗೆ ವರದಾನವಾಗಿ ಲಭಿಸಿದ್ದನ್ನು ನಾನು ಕೊಡಲಾರೆನೆಂದನು.ಶ್ರೀ ಕೃಷ್ಣನು ಮರುಮಾತನಾಡದೇ ಕಳಿಸಿಕೊಟ್ಟನು. ಇವರೀರ್ವರಲ್ಲಿ ನಡೆದ ಸಂವಾದ ದ್ವಾರಕೆಯಲ್ಲೆಲ್ಲ ತಿಳಿದಿತ್ತು. ಈ ಘಟನೆಯ ನಂತರ ಯಾರಾದರೂ ಅಪಹರಿಸಬಹುದೆಂದು ಸತ್ರಾಜಿತನು ಚಿಂತಿತನಾದನು. ಅದೇ ಸಮಯದಲ್ಲಿ ವೀರನೂ, ಶೂರನೂ ಆತನ ಸಹೋದರ ಪ್ರಸೇನನು ಮಣಿಯನ್ನು ಕಂಠದಲ್ಲಿ ಧಾರಣ ಮಾಡಿ ಸಂರಕ್ಷಿಸುತ್ತೇನೆ ಎಂದು ಅಣ್ಣನಿಗೆ ಅಭಯ ನೀಡಿ ಕಂಠದಲ್ಲಿ ಧರಿಸಿ ಓಡಾಡಿಕೊಂಡಿದ್ದನು.
     ಸ್ವಲ್ಪ ದಿನ ಬಳಿಕ ಗಣೇಶ ಚತುರ್ಥಿಯ ದಿನವೇ ಶ್ರೀಕೃಷ್ಣನಿಗೆ ನೀರಿನಲ್ಲಿ ಚಂದ್ರನ ಪ್ರತಿಬಿಂಬದ ದರ್ಶನವಾಯಿತು. ಸರ್ವಾಂತರ್ಯಾಮಿಯಾದ ಭಗವಂತನಿಗೆ ತಿಳಿಯದ್ದೇನಿದೆ. ಚೌತಿ ಚಂದ್ರ ದರ್ಶನದ ದೋಷದ ಬಗ್ಗೆ ಮನಸ್ಸಿನಲ್ಲಿ ಅಳುಕಿತ್ತು.ಕೆಲ ಕಾಲದ ನಂತರ ಎಂದಿನಂತೆ ಪ್ರಸೇನನು ಬೇಟೆಗಾಗಿ ಕಾಡಿಗೆ ತೆರಳಿದಾಗ ಈತನ ಕಂಠದಲ್ಲಿರುವ ಮಣಿರತ್ನಕ್ಕೆ ಆಸೆ ಪಟ್ಟು ಒಂದು ಸಿಂಹವು ಇವನನ್ನು ಕೊಂದು ಮಣಿಯನ್ನು ಅಪಹರಿಸಿತು ಮತ್ತು ತಾನು ಕಂಠದಲ್ಲಿ ಧರಿಸಿತು..ಈ ಸಿಂಹದ ಕೊರಳಲ್ಲಿರುವ ಮಣಿಯನ್ನು ಜಾಂಬವಂತನು (ತ್ರೇತಾಯುಗದ ರಾಮವತಾರದಲ್ಲಿ ಬರುವ ಜಾಂಬವಂತ) ಸಿಂಹದೊಡನೆ ಕಾದಾಡಿ ಕೊಂದು ಮಣಿಯನ್ನು ತನ್ನದಾಗಿಸಿಕೊಂಡು, ತನ್ನ ಮಗಳಿಗೆ ಉಪಹಾರ ರೂಪದಲ್ಲಿ ನೀಡಿದನು. ಅದು ಅವಳ ಕಂಠವನ್ನಲಂಕರಿಸಿತು. ಈ ಎಲ್ಲಾ ವಿದ್ಯಮಾನಗಳು ದ್ವಾರಕೆವಾಸಿಗಳಿಗೆ ತಿಳಿದಿರಲಿಲ್ಲ.
     ಬೇಟೆಗೆ ಹೋದ ಪ್ರಸೇನನು ಮರಳದಿದ್ದದನ್ನು ನೋಡಿ ಶ್ರೀ ಕೃಷ್ಣನ ಮೇಲೆ ಸಂಶಯ ವ್ಯಕ್ತಪಡಿಸಿ ಶ್ಯಮಂತಕ ಮಣಿಗಾಗಿ ಹತ್ಯಗೈದಿರಬಹುದೆಂದು ಆಡಿಕೊಳ್ಳಹತ್ತಿದರು. ಈ ವಿಷಯವನ್ನು ಗುಪ್ತಚರರ ಮೂಲಕ ತಿಳಿದ ಶ್ರೀಕೃಷ್ಣ ಪ್ರಸೇನನನ್ನು ಹುಡುಕುವದಕ್ಕಾಗಿ ಆತ ಹೋದ ಮಾರ್ಗವನ್ನನುಸರಿಸಿ ಆಪ್ತ ಸೈನಿಕರೊಂದಿಗೆ ಕಾಡಿಗೆ ತೆರಳಿದನು. ಅನತಿ ದೂರದಲ್ಲಿ ಜೀರ್ಣಾವಸ್ತೆಯಲ್ಲಿದ್ದ ಶವವನ್ನು ಪ್ರಸೇನನದೆಂದು ಗುರುತಿಸಿದರು. ಆದರೆ ಕಂಠದಲ್ಲಿ ಮಣಿ ಇಲ್ಲದ್ದನ್ನು ಕಂಡರು, ಶವದ ಮೇಲೆ ಸಿಂಹದ ಉಗುರಿನಿಂದಾದ ಗಾಯವನ್ನು ಗುರ್ತಿಸಿದರು. ಕಾದಾಡುವಾಗ ಮಣಿಯು ಎಲ್ಲಿಯಾದರೂ ಬಿದ್ದಿರಬಹುದೆಂದು
ಸುತ್ತಲೆಲ್ಲ ಸೈನಿಕರೊಂದಿಗೆ ಹುಡುಕಾಡಿದಾಗ, ಸಿಂಹದ ಶವವೂ ಸಿಕ್ಕಿತು ಅದರ ದೇಹದಲ್ಲಿಯೂ ಕೂಡಾ ಮಣಿ ಸಿಗಲಿಲ್ಲ. ಸಿಂಹದ ದೇಹದಲ್ಲಾದ ಕರಡಿಯ ಗುರುತನ್ನು ಗ್ರಹಿಸಿ ಕರಡಿಯೇ ಮಣಿಯನ್ನು ಅಪಹರಿಸಿರಬಹುದೆಂದು ಉಹಿಸಿದರು ಮತ್ತು ಕರಡಿಯ ಪಾದದ ಹೆಜ್ಜೆಯ ಗುರುತನ್ನನುಸರಿಸಿ ಹುಡುಕುತ್ತಾ ಸಾಗಿದರು. ಆ ಪಾದದ ಗುರುತುಗಳು ಗುಹೆಯ ಒಳತನಕ ಇದ್ದುದನ್ನು ಗಮನಿಸಿದರು.
    ಶ್ರೀಕೃಷ್ಣನು ತನ್ನ ಸಹಚರರನ್ನೆಲ್ಲಾ ಗುಹೆಯ ದ್ವಾರದ ಬಳಿ ನಿಲ್ಲಿಸಿ, ತಾನೊಬ್ಬನೇ ಗುಹೆಯೊಳಗೆ ಕರಡಿಯನ್ನು ಹುಡುಕುತ್ತಾ ನಡೆದನು. ಸ್ವಲ್ಪ ದೂರ ಕ್ರಮಿಸಿದ ನಂತರ ಒಂದು ಕನ್ಯೆಯ ಕೊರಳಲ್ಲಿ ಶ್ಯಮಂತಕ ಮಣಿಯು ರಾರಾಜಿಸುತ್ತಿರುವದನ್ನು ಕಂಡನು. ಅವಳು ಜಾಂಬವಂತನ ಮಗಳು ಜಾಂಬವತಿಯಾಗಿದ್ದಳು. ಅವಳ ಬಳಿ ಬಂದು ಮಣಿರತ್ನವನ್ನು ತನಗೊಪ್ಪಿಸುವಂತೆ  ಬೇಡಿಕೊಂಡನು. ಆ ಕನ್ಯೆಯೂ ಕೂಡಲೇ ತಂದೆಯನ್ನು ಕೂಗಿದಳು. ಯಾವುದೋ ನರಮಾನವನನ್ನು ಗುಹೆಯಲ್ಲಿ ಕಂಡು ಜಾಂಬವಂತನು ಕುಪಿತನಾದನು ಮತ್ತು ಕೃಷ್ಣನ ಮೇಲೆ ಆಕ್ರಮಣ ಮಾಡಿದನು. ಪ್ರತಿಯಾಗಿ ಕೃಷ್ಣನೂ ಸಹ ಯುದ್ಧ ಮಾಡಹತ್ತಿದನು. ಇಬ್ಬರಲ್ಲಿಯೂ ಘನಘೋರ ಯುದ್ಧವು ಬಹು ದಿನಗಳ ಕಾಲ ನಡೆಯಿತು. ಒಬ್ಬರೂ ಸೋಲುವ ಲಕ್ಷಣಗಳಿರಲಿಲ್ಲ ಆದರೂ ಜಾಂಬವಂತನ ಶೌರ್ಯ ಮತ್ತು ಉತ್ಸಾಹದಿಂದ ಆತನೇ ಗೆಲ್ಲುವನೆಂದು ಭಾಸವಾಗುತ್ತಿತ್ತು. ಇದು ಭಕ್ತನ ಮತ್ತು ಭಗವಂತನ ನಡುವಿನ ಯುದ್ಧ.
    ಜಾಂಬವಂತನು ರಾಮಭಕ್ತ, ಶ್ರೀಕೃಷ್ಣನು ಸಾಕ್ಷಾತ್ ಭಗವಂತ. ಆದರೆ ಶ್ರೀಕೃಷ್ಣನೂ ರಾಮನೇ, ಎಂದು ಮಾತ್ರ ಜಾಂಬವಂತನಿಗೆ ತಿಳಿಯದಿದ್ದುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ಇದನ್ನರಿತ ಶ್ರೀಕೃಷ್ಣನು ಜಾಂಬವಂತನಿಗೆ ರಾಮನ ರೂಪದಲ್ಲಿ ಕಾಣಿಸಿಕೊಂಡನು. ಆಗ ಜಾಂಬವಂತನು ಯುದ್ಧವನ್ನು ನಿಲ್ಲಿಸಿ ಕೃಷ್ಣನಲ್ಲಿ ಕ್ಷಮೆಯಾಚಿಸಿ ಶ್ಯಮಂತಕ ಮಣಿಯನ್ನು ಕೊಟ್ಟು, ತನ್ನ ಮಗಳನ್ನೂ ಧಾರೆಯೆರೆದು ಕೊಟ್ಟನು. ಜಾಂಬವಂತನು ಆರಾಧ್ಯ ದೈವನಲ್ಲಿ ಪ್ರಾರ್ಥಿಸಿ ದೀರ್ಘಯಸ್ಸಿನಿಂದ ಮುಕ್ತಿಯನ್ನು ಬಯಸಿ, ಮೋಕ್ಷವನ್ನು ಪಡೆಯುತ್ತಾನೆ. ತದನಂತರ ಶ್ಯಮಂತಕ ಮಣಿ, ಪತ್ನಿ ಜಾಂಬವತಿ ಮತ್ತು ಸಹಚರರಿಂದೊಡಗೂಡಿ ದ್ವಾರಕೆಗೆ ಹಿಂತಿರುಗಿ ನಡೆದ ವೃತ್ತಾಂತವನ್ನೆಲ್ಲಾ ಪ್ರಜೆಗಳಿಗೆ ತಿಳಿಸಿದನು. ತನ್ನ ಮೇಲೆ ಬಂದ ಕಳ್ಳತನದ ಆರೋಪದಿಂದ ಮುಕ್ತನಾದನು.
     ನಂತರ ಸಂದರ್ಭದಲ್ಲಿ ಸತ್ರಾಜಿತನ ಪುತ್ರಿ ಸತ್ಯಭಾಮೆಯನ್ನು ಶ್ರೀಕೃಷ್ಣನು ವರಿಸಬೇಕಾಗಿ ಬಂತು.ಈ ಯುದ್ಧದಲ್ಲಾಗಿದ್ದು ಭಕ್ತಿಗೆ ಜಯ, ಸರ್ವಶಕ್ತನಾದ ಭಗವಂತನಿಗಲ್ಲ.
           (ವಿವಿಧ ಮೂಲಗಳಿಂದ)

-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 

ಗೋವಿನಲ್ಲಿ ದೇವತೆಗಳ ವಾಸ

1. ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ..

2. ಹಣೆಯ ತುದಿಯಲ್ಲಿ ಪಾರ್ವತಿಯ ವಾಸ..

3. ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ..

4. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ,

5. ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ..

6. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ.

7. ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..

8. ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..

9. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..

10. ನಾಲಗೆಯಲ್ಲಿ ವರುಣನ ವಾಸ..

11. ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ..

12. ತುಟಿಗಳಲ್ಲಿ ಸಂಧ್ಯಾದೇವತೆ ವಾಸ..

13. ಕುತ್ತಿಗೆಯಲ್ಲಿ ಇಂದ್ರನ ವಾಸ..

14. ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ..

15. ತೊಡೆಯಲ್ಲಿ ಧರ್ಮ ದೇವತೆಯ ವಾಸ..

16. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ..


17. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ

18. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ

19. ಬೆನ್ನಿನಲ್ಲಿ ರುದ್ರರ ವಾಸ..

20. ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ.

21. ಬಾಲದಲ್ಲಿ ಸೋಮದೇವತೆಯ ವಾಸ.

22. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ..

23. ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ..

24. ಗೋಮೂತ್ರದಲ್ಲಿ ಗಂಗೆಯ ವಾಸ..

25. ಗೋಮಯದಲ್ಲಿ ಯಮುನೆಯ ವಾಸ..

26. ಹಾಲಿನಲ್ಲಿ ಸರಸ್ವತಿಯ ವಾಸ..

27. ಮೊಸರಿನಲ್ಲಿ ನರ್ಮದೆಯ ವಾಸ..

28. ತುಪ್ಪದಲ್ಲಿ ಅಗ್ನಿಯ ವಾಸ..

29. ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ..

30. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..

31. ಉದರದಲ್ಲಿ ಪೃಥ್ವೀ ದೇವತೆಗಳ ವಾಸ..

32. ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ..

33. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..

-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196